Bailoor: ಸಂಬಳ ಕೇಳಿದ್ದಕ್ಕೆ ಹಲ್ಲೆ; ಪ್ರಕರಣ ದಾಖಲು
Team Udayavani, Mar 23, 2024, 12:59 AM IST
ಸಿದ್ದಾಪುರ: ಮಾಡಿದ ಕೆಲಸಕ್ಕೆ ಸಂಬಳ ಕೊಡದೆ ಸತಾಯಿಸಿದ್ದಲ್ಲದೆ, ಮನೆಯ ಒಳ ಪ್ರವೇಶಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ ಘಟನೆ ಶಂಕರನಾರಾಯಣ ಗ್ರಾಮದ ಬೈಲೂರಿನಲ್ಲಿ ನಡೆದಿದೆ.
ಬೈಲೂರು ನಿವಾಸಿ ರಂಜಿತ್ ಎಂಬಾತ ಪ್ರಜ್ವಲ್ (17) ಅವರನ್ನು ಕಾಲೇಜಿನ ರಜೆಯ ಸಮಯದಲ್ಲಿ ಎಲೆಕ್ಟ್ರೀಷಿಯನ್ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದು, ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಪ್ರಜ್ವಲ್ ಸಂಬಳ ಕೇಳಿದಾಗಲೆಲ್ಲ ಮತ್ತೆ ಕೊಡುತ್ತೇನೆ ಎಂದು ಸತಾಯಿಸುತ್ತಿದ್ದನಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿದ್ದ.
ಆರೋಪಿ ರಂಜಿತ್ ಮಾ. 21ರಂದು ಪ್ರಜ್ವಲ್ನ ಮನೆಯ ಅಂಗಳಕ್ಕೆ ಆಕ್ರಮವಾಗಿ ಪ್ರವೇಶಿಸಿ, ಮನೆಯ ಒಳಗಿದ್ದ ಪ್ರಜ್ವಲ್ನನ್ನು ಹೊರಗೆ ಎಳೆದು ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಜ್ವಲ್ನ ತಾಯಿ ಶಾರದಾ (45) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.