Rice: ಅಕ್ಕಿ ರಫ್ತಿಗೆ ನಿರ್ಬಂಧ, ಅನಗತ್ಯ ವಿವಾದ ಆಗದಿರಲಿ


Team Udayavani, Aug 28, 2023, 12:03 AM IST

RICE

ಉತ್ತರ ಭಾರತದಲ್ಲಿ ಪ್ರವಾಹದೋಪಾದಿಯ ಮಳೆ, ದಕ್ಷಿಣ ಭಾರತದಲ್ಲಿನ ಮಳೆ ಕೊರತೆಯಿಂದಾಗಿ ದೇಶದಲ್ಲೀಗ ಆಹಾರ ಧಾನ್ಯಗಳಿಗೆ ಕೊರತೆ ಕಾಣುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಕೆಲವು ದಿನಗಳ ಹಿಂದೆ ಟೊಮೇಟೊ ದರ ಏರಿಕೆಯಿಂದಾಗಿ ದೇಶಾದ್ಯಂತ ಜನ ಈ ತರಕಾರಿಯನ್ನು ಖರೀದಿ ಮಾಡಲಾಗದಂಥ ಸ್ಥಿತಿ ತಲುಪಿದ್ದರು. ಮುಂದೆ ಈರುಳ್ಳಿ, ಗೋಧಿ, ಅಕ್ಕಿ ಸೇರಿದಂತೆ ಇತರ ವಸ್ತುಗಳ ದರ ಇನ್ನಷ್ಟು ಏರಿಕೆಯಾಗದಂತೆ ಕೇಂದ್ರ ಸರಕಾರ ತಡೆಯಬೇಕಾಗಿದೆ.

ಅತ್ತ ದಕ್ಷಿಣ ಭಾರತದಲ್ಲಿ ಈ ವರ್ಷ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಅಲ್ಲಿನ ಒಂದಿಲ್ಲೊಂದು ರಾಜ್ಯ ಪ್ರವಾಹಕ್ಕೆ ತುತ್ತಾಗಿ, ಸಂಕಷ್ಟ ಕಾಣಿಸಿಕೊಂಡಿದೆ. ಅಂದರೆ ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶಗಳು ಮಳೆಯಿಂದಾಗಿ ನಲುಗಿವೆ. ಒಂದು ರೀತಿಯಲ್ಲಿ ಪ್ರಸಕ್ತ ವರ್ಷ ಭಾರತದ ಪಾಲಿಗೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಸ್ಯೆ ಒಟ್ಟಾಗಿಯೇ ಕಾಣಿಸುತ್ತಿದೆ. ದೇಶದಲ್ಲಿನ ಈ ಮಳೆ ಕೊರತೆ ಮತ್ತು ಅಪಾರ ಮಳೆಯ ಕಾರಣದಿಂದಾಗಿ ಕೃಷಿ ಉತ್ಪನ್ನ ಕಡಿಮೆಯಾಗಬಹುದು ಎಂಬ ಆತಂಕವೂ ಎದುರಾಗಿದೆ. ಹೀಗಾಗಿ ಕೇಂದ್ರ ಸರಕಾರ ಈರುಳ್ಳಿ, ಅಕ್ಕಿ ಮೇಲೆ ಹೆಚ್ಚುವರಿ ರಫ್ತು ತೆರಿಗೆ ವಿಧಿಸಿ, ನಿರ್ಬಂಧ ಹೇರಲು ಮುಂದಾಗಿದೆ.

ಸದ್ಯದ ಮಟ್ಟಿಗೆ ಹೇಳುವುದಾದರೆ ಇದು ಸಮಯೋಚಿತ ನಿರ್ಧಾರಎಂದೇ ಹೇಳಬೇಕಾಗಬಹುದು. ಆದರೆ ರೈತರ ದೃಷ್ಟಿಯಿಂದ ಹೇಳುವುದಾದರೆ ರಫ್ತಿನ ಮೇಲಿನ ನಿರ್ಬಂಧ ಸಮಸ್ಯೆಗೆ ಕಾರಣವಾಗಬಹುದು. ಅಪಾರ ಪ್ರಮಾಣದಲ್ಲಿ ಬೆಳೆ ಬೆಳೆದಿರುವ ರೈತನಿಗೆ ಸರಿಯಾದ ಪ್ರಮಾಣದಲ್ಲಿ ಬೆಲೆ ಸಿಗದೇ ಹೋಗಬಹುದು. ಹೀಗಾಗಿಯೇ ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿದ ವೇಳೆ, ಮಹಾರಾಷ್ಟ್ರದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಅರ್ಥದಲ್ಲಿ ಈ ರೈತರ ಸಿಟ್ಟಿಗೆ ಕಾರಣವೂ ಇದೆ. ಒಂದು ವೇಳೆ ಈ ರಫ್ತು ನಿರ್ಬಂಧ ಮುಂದುವರಿದರೆ, ತಮ್ಮ ಪಾಡೇನು ಎಂಬ ಪ್ರಶ್ನಾರ್ಥಕ ಚಿಹ್ನೆಯೂ ಅವರಲ್ಲಿದೆ. ರಫ್ತು ನಿರ್ಬಂಧ ತಾತ್ಕಾಲಿಕ ನಿರ್ಧಾರವಾಗಿದ್ದು, ಮುಂದಿನ ದಿನಗಳಲ್ಲಿ  ಈ ನಿರ್ಬಂಧವನ್ನು ತೆಗೆಯುವ ಬಗ್ಗೆ ಕೇಂದ್ರ ಸರಕಾರ ಭರವಸೆ ನೀಡಬೇಕು. ಆಗಷ್ಟೇ ರೈತರು ಮತ್ತು ಕೃಷಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳಿಗೆ ಸಮಾಧಾನ ಸಿಗಬಹುದು.

ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರಕಾರ ಜು.20ರಂದು ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡದಂತೆ ನಿರ್ಬಂಧಿಸಿತು. ಆ.25ರಂದು ಕುಚ್ಚಲಕ್ಕಿ ಮೇಲೂ ಶೇ.20ರಷ್ಟು ತೆರಿಗೆ ಹಾಕಿತು. ಆ.19ರಂದು ಈರುಳ್ಳಿ ಮೇಲೆ ಶೇ.40ರಷ್ಟು ರಫ್ತು ತೆರಿಗೆ ಹಾಕಿದೆ. ಅಂದರೆ ಹೆಚ್ಚುವರಿ ತೆರಿಗೆ ಹಾಕುವ ಮೂಲಕ ಒಂದು, ದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಅಕ್ಕಿಯನ್ನು ಶೇಖರಿಸಿಡುವುದು; ಎರಡನೆಯದು, ಮಳೆಯ ಸ್ಥಿತಿ ಮತ್ತು ಮಾರುಕಟ್ಟೆಗೆ ಬರುವ ಅಕ್ಕಿಯ ಪ್ರಮಾಣ ನೋಡಿಕೊಂಡು ರಫ್ತು ಮೇಲಿನ ನಿರ್ಬಂಧ ತೆಗೆಯುವ ಚಿಂತನೆಯಲ್ಲಿ ಕೇಂದ್ರ ಸರಕಾರವಿದೆ. ಅಂದರೆ ಅಕ್ಟೋಬರ್‌ ವೇಳೆಗೆ ದೇಶದಲ್ಲಿನ ಅಕ್ಕಿ ದಾಸ್ತಾನು ಬಗ್ಗೆ ಒಂದಷ್ಟು ಮಾಹಿತಿ ಸಿಗಬಹುದು. ಏನೇ ಆಗಲಿ ದರ ಏರಿಕೆ ನಿಯಂತ್ರಣ ಮತ್ತು ಮಳೆಯ ಚಂಚಲತೆಯಿಂದಾಗಿ ದೇಶವಾಸಿಗಳಿಗೆ ಆಹಾರ ಸಾಮಗ್ರಿ ಸಂಗ್ರಹಿಸಿ ಇಡುವ ಜವಾಬ್ದಾರಿಯೂ ಸರಕಾರಗಳ ಮೇಲಿದೆ. ಹೀಗಾಗಿ ಸದ್ಯದ ಮಟ್ಟಿಗೆ ಈ ವಿಚಾರದಲ್ಲಿ ಕಾದು ನೋಡುವುದೊಂದೇ ಎಲ್ಲರ ಮುಂದಿರುವ ಏಕೈಕ ಮಾರ್ಗವಾಗಿದೆ.

ಟಾಪ್ ನ್ಯೂಸ್

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Colera

Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.