Metro: ಇತರೆ ಮೂಲಗಳಿಂದ ಆದಾಯ ಗಳಿಕೆಗೆ ಚಿಂತನೆ

ಆದಾಯ ಸಂಗ್ರಹದ ಮಾರ್ಗ ಹುಡುಕುತ್ತಿರುವ ನಮ್ಮ ಮೆಟ್ರೋ

Team Udayavani, Sep 4, 2023, 8:02 AM IST

2-metro

ಬೆಂಗಳೂರು: ನಮ್ಮ ಮೆಟ್ರೋವು ಪ್ರಯಾಣಿಕರ ಪಯಣ ದರದ ಜೊತೆಗೆ ಇನ್ನಿತರ ಮೂಲಗಳಿಂದಲೂ ಆದಾಯ ಸಂಗ್ರಹಿಸಲು ಕಳೆದ ಕೆಲ ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ, ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ.

ನಮ್ಮ ಮೆಟ್ರೋವು ತನ್ನ ನಿಲ್ದಾಣ, ಮೆಟ್ರೋ ಕಂಬ ಮತ್ತು ತನಗೆ ಸೇರಿದ ಜಾಗಗಳಲ್ಲಿ ಜಾಹೀರಾತು ಫ‌ಲಕಗಳನ್ನು ಹಾಕುವುದರ ಮೂಲಕ ಆದಾಯ ಸಂಗ್ರಹಣೆ ನಡೆಸುವ ಪ್ರಯತ್ನ ನಡೆಸಿತ್ತು. ಆದರೆ, ಜಾಹೀರಾತು ಫ‌ಲಕಗಳನ್ನು ನಿಷೇಧಿಸಿ ಹೈಕೋರ್ಟ್‌ ಕಠಿಣ ನಿಲುವು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದ ಮುಂದಿದ್ದ ಜಾಹೀರಾತು ಫ‌ಲಕಗಳ ಮೂಲಕ ಆದಾಯ ಸಂಗ್ರಹದ ದಾರಿ ಸದ್ಯಕ್ಕೆ ಮುಚ್ಚಿದೆ.

ವಿಶೇಷ ಅನುಮತಿ ಪಡೆಯಲು ಪ್ರಯತ್ನ: ಅದಾಗ್ಯೂ ನಮ್ಮ ಮೆಟ್ರೋ ತನ್ನ ವ್ಯಾಪ್ತಿಯಲ್ಲಿ ಜಾಹೀರಾತು ಫ‌ಲಕ, ಫ್ಲೆಕ್ಸ್‌ಗಳನ್ನು ಅಳವಡಿಸಲು ಅವಕಾಶ ಕೋರಿ ನ್ಯಾಯಾಲಯದ ಕದ ತಟ್ಟಿ ಗಂಭೀರ ಪ್ರಯತ್ನ ನಡೆಸಬೇಕು ಎಂಬ ಅಭಿಪ್ರಾಯವಿದೆ. ಮೆಟ್ರೋ ತನ್ನ ವ್ಯಾಪ್ತಿಯಲ್ಲಿನ ಜಾಹೀರಾತು ಫ‌ಲಕ, ಫ್ಲೆಕ್ಸ್‌ಗಳನ್ನು ಅಳವಡಿಸಲು ಕೋರ್ಟ್‌ನಿಂದ ವಿಶೇಷ ಅನುಮತಿ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಮುಂದಿನ ಎರಡು ವರ್ಷದಲ್ಲಿ 175 ಕಿ.ಮೀ. ಉದ್ದದ ಜಾಲ ಹೊಂದಲಿರುವ ನಮ್ಮ ಮೆಟ್ರೋಗೆ ಜಾಹೀರಾತು ಫ‌ಲಕ ಅಳವಡಿಕೆಗೆ ಅವಕಾಶ ಕಲ್ಪಿಸಿ ಆದಾಯ ಗಳಿಸುವ ಉತ್ತಮ ಅವಕಾಶವಿದೆ.

ಒಳಾಂಗಣ ಜಾಹೀರಾತು ಬಗ್ಗೆ ಗಮನ ಹರಿಸಿಲ್ಲ: ಹಾಗೆಯೇ ಮೆಟ್ರೋ ನಿಲ್ದಾಣದೊಳಗೆ ಕಾನ್‌ಕೋರ್ಸ್‌, ಪ್ಲಾಟ್‌ಫಾರಂಗಳಲ್ಲಿಯೂ ಒಳಾಂಗಣ ಜಾಹೀರಾತುಗಳನ್ನು ಅಳವಡಿಸುವ ಅವಕಾಶವಿದೆ. ಮೆಟ್ರೋದ ಮೇಲ್ಮೆ„ಯಲ್ಲಿಯೂ ಜಾಹೀರಾತನ್ನು ಹೆಚ್ಚು ವ್ಯಾಪಾಕವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಈ ನಿಟ್ಟಿನಲ್ಲಿ ಮೆಟ್ರೋ ಹೆಚ್ಚು ಗಮನಹರಿಸಿದಂತಿಲ್ಲ. ಅದೇ ರೀತಿ ಮೆಟ್ರೋ ನಿಲ್ದಾಣದೊಳಗೆ ಮಳಿಗೆ ತೆರೆಯಲು ಸ್ಥಳಾವಕಾಶವನ್ನು ಬಾಡಿಗೆಗೆ ನೀಡಿ ಆದಾಯ ಸಂಗ್ರಹಿಸುವ ಪ್ರಯತ್ನವನ್ನು ಮೆಟ್ರೋ ನಿಗಮವು ಗಂಭೀರವಾಗಿ ನಡೆಸುತ್ತಿದೆ. ಪ್ರಸ್ತುತ ವಾಣಿಜ್ಯ ಸಂಚಾರ ನಡೆಸುತ್ತಿರುವ ನೇರಳೆ, ಹಸಿರು ಮಾರ್ಗದಲ್ಲಿ 24 ನಿಲ್ದಾಣಗಳಲ್ಲಿ 100 ಮುಕ್ತ ಸ್ಥಳಗಳನ್ನು ಮೆಟ್ರೋ ಗುರುತಿಸಿದ್ದು, 1,55,034 ಚದರ ಅಡಿ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶವನ್ನು ನಮ್ಮ ಮೆಟ್ರೋ ಹೊಂದಿದೆ. ಉಳಿದಂತೆ ಈ ವರ್ಷ ಇನ್ನಷ್ಟು ಮೆಟ್ರೋ ನಿಲ್ದಾಣಗಳು ಜನ ಬಳಕೆಗೆ ಲಭ್ಯವಾಗಲಿದೆ. ತನ್ಮೂಲಕ ಪ್ರಯಾಣಿಕರಿಗೆ ಸೌಲಭ್ಯದ ಜೊತೆಗೆ ಆದಾಯವನ್ನು ಸಂಗ್ರಹಿಸಲು ಸಾಧ್ಯ ಎಂಬುದು ಮೆಟ್ರೋದ ಲೆಕ್ಕಾಚಾರ.

ಆದರೆ, ಮೆಟ್ರೋ ತನ್ನ ನಿಲ್ದಾಣಗಳನ್ನು ರಚಿಸುವ ಸಂದರ್ಭದಲ್ಲೇ ವಾಣಿಜ್ಯ ಬಳಕೆಯ ಸಾಧ್ಯತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೆಲವು ನಿಲ್ದಾಣಗಳಲ್ಲಿ ವಾಣಿಜ್ಯ ಬಳಕೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ಅಂತಹ ನಿಲ್ದಾಣಗಳಲ್ಲಿ ನಿಲ್ದಾಣದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಂಡರೆ ಹೆಚ್ಚಿನ ಪ್ರಯೋಜನವಾಗುತ್ತದೆ. ಎಂ.ಜಿ.ರೋಡ್‌ ನಿಲ್ದಾಣವನ್ನು ಮುಂದಾಲೋಚನೆಯಿಂದ ಕಟ್ಟಿದ್ದರೆ ವಾಣಿಜ್ಯ ಚಟುವಟಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿ ಆದಾಯ ಗಳಿಸಬಹುದಿತ್ತು.

ಎಟಿಎಂ, ಪುಸ್ತಕದ ಅಂಗಡಿ, ತಿನಿಸುಗಳ ಅಂಗಡಿ, ಮಾಹಿತಿ ಕೇಂದ್ರ, ಉಡುಗೊರೆಗಳ ಅಂಗಡಿ, ಸ್ಮರಣಿಕೆಗಳ ಅಂಗಡಿ ಮುಂತಾದವುಗಳ ವ್ಯಾಪಾರಕ್ಕೆ ಮೆಟ್ರೋ ನಿಲ್ದಾಣ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವಿದೆ.

ಪಾರ್ಕಿಂಗ್‌ ಜಾಗ ಅಭಿವೃದ್ಧಿಪಡಿಸಲಿ ಮೆಟ್ರೋ ಆದಾಯ ವೃದ್ಧಿಸಿಕೊಳ್ಳಲು ನಿಗಮದ ಸ್ವಾಧೀನದಲ್ಲಿರುವ ಖಾಲಿ ಜಾಗವನ್ನು ಪಾರ್ಕಿಂಗ್‌ ಗಾಗಿ ಅಭಿವೃದ್ಧಿ ಪಡಿಸುವ ಅವಕಾಶವಿದೆ. ಕೆಲ ನಿಲ್ದಾಣಗಳಲ್ಲಿ ಈಗಾಗಲೇ ಪಾರ್ಕಿಂಗ್‌ಗೆ ಅವಕಾ ಶ ಇದೆ. ಇದರಿಂದ ಮೆಟ್ರೋ ದಲ್ಲಿನ ಜನ ಸಂಚಾರ ಹೆಚ್ಚುವುದರ ಜೊತೆಗೆ ಪಾರ್ಕಿಂಗ್‌ ಮೂಲಕವೂ ಹಣ ಸಂಗ್ರಹಿಸಲು ಸಾಧ್ಯವಿದೆ. ಇದರ ಜೊತೆಗೆ ಕಾರ್ಪೊರೇಟ್‌ ಕಂಪನಿಗಳ ಹೆಸರನ್ನು ಮೆಟ್ರೋ ನಿಲ್ದಾಣದ ಹೆಸರಿಗೆ ಜೋಡಿಸುವ ಮೂಲಕ ಆದಾಯ ಗಳಿಸುವ ಚಿಂತನೆಯಿದೆ. ಮೆಜೆಸ್ಟಿಕ್‌ನ ನಿಲ್ದಾಣದ ಮೇಲೆ 4 ಮಳಿಗೆ ಖಾಸಗಿ ಸಹಭಾಗಿ ತ್ವದಲ್ಲಿ ಕಟ್ಟುವ ಯೋಜನೆ ನಿಗಮ ಹೊಂದಿದೆ.

ಈ ನಿಲ್ದಾಣಗಳಲ್ಲಿ ಮಳಿಗೆಗೆ ಸ್ಥಳಾವಕಾಶ ಮಳಿಗೆ ತೆರೆಯಲು ಸ್ಥಳಾವಕಾಶ ನೀಡಲು ನಿರ್ಧರಿಸಿರುವ ನೇರಳೆ ಮಾರ್ಗದ ನಿಲ್ದಾಣ ಗಳು ಬೈಯ್ಯಪ್ಪನಹಳ್ಳಿ, ಎಸ್‌.ವಿ.ರೋಡ್‌, ಇಂದಿರಾನಗರ, ಹಲಸೂರು, ಟ್ರಿನಿಟಿ, ಎಂ.ಜಿ.ರೋಡ್‌, ವಿಜಯನಗರ, ಅತಿಗುಪ್ಪೆ, ಕೆಂಗೇರಿ. ಹಸಿರು ಮಾರ್ಗದಲ್ಲಿ ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ಯಶವಂತಪುರ, ಮಹಾಲಕ್ಷ್ಮೀ ಲೇ ಔಟ್‌, ರಾಜಾಜಿನಗರ, ಶ್ರೀರಾಮಪುರ, ಮಂತ್ರಿ ಸ್ಕ್ವಾರ್‌ ಸಂಪಿಗೆ ರಸ್ತೆ, ನಾಡಪ್ರಭು ಕೇಂಪೇಗೌಡ, ಚಿಕ್ಕಪೇಟೆ, ನ್ಯಾಷನಲ್‌ ಕಾಲೇಜು, ಲಾಲ್‌ಬಾಗ್‌, ಜಯನಗರ, ಬನಶಂಕರಿ ಮತ್ತು ಜೆ.ಪಿ.ನಗರ.

ಮೆಟ್ರೋ ನಿಲ್ದಾಣಕ್ಕೆ ಬರುವಾಗ ಅಥವಾ ಮೆಟ್ರೋ ನಿಲ್ದಾಣದಿಂದ ಹೊರ ಹೋಗುವಾಗ ಧಾವಂತದಲ್ಲೇ ಹೆಚ್ಚು ಮಂದಿ ಇರುತ್ತಾರೆ. ಆದರೆ, ಮೆಟ್ರೋ ನಿಲ್ದಾಣಗಳನ್ನು ಒಂದು ರೀತಿಯಲ್ಲಿ ಶಾಪಿಂಗ್‌ ಹಬ್‌ ಅಥವಾ ಟೈಂ ಪಾಸ್‌ ಮಾಡುವ ಜಾಗದಂತೆ ಅಭಿವೃದ್ಧಿಪಡಿಸಿದರೆ ಆಗ ಹೆಚ್ಚಿನ ಸಮಯ ನಿಲ್ದಾಣದಲ್ಲಿ ಕಳೆಯಬಹುದು. ಇದರಿಂದ ಮೆಟ್ರೋ ನಿಲ್ದಾಣದಲ್ಲಿನ ಅಂಗಡಿಗಳಿಗೂ ವ್ಯಾಪಾರವಾಗುತ್ತದೆ. ● ಶೈಲಜಾ ರಾವ್‌, ಮೆಟ್ರೋ ರೈಲು ಪ್ರಯಾಣಿಕರು, ಪೀಣ್ಯ.

-ರಾಕೇಶ್‌ ಎನ್‌.ಎಸ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

Exam

PDA; ನಾಳೆ ಮುಖ್ಯ ಪರೀಕ್ಷೆ

ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ: ರೇವಣ್ಣ

H.D. Revanna: ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ

H. D. Kumaraswamy: ಇದು ಕಾರ್ಯಕರ್ತರ ಚುನಾವಣೆ, ನಿಖಿಲ್‌ ಗೆಲ್ಲುತ್ತಾರೆ

H. D. Kumaraswamy: ಇದು ಕಾರ್ಯಕರ್ತರ ಚುನಾವಣೆ, ನಿಖಿಲ್‌ ಗೆಲ್ಲುತ್ತಾರೆ

JDS: ಶಾಸಕ ರೇವಣ್ಣ ವಿರುದ್ಧದ ಚುನಾವಣ ಅಕ್ರಮ ವಿಚಾರಣೆ ಮುಂದಕ್ಕೆ

JDS: ಶಾಸಕ ರೇವಣ್ಣ ವಿರುದ್ಧದ ಚುನಾವಣ ಅಕ್ರಮ ವಿಚಾರಣೆ ಮುಂದಕ್ಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.