Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?


Team Udayavani, Sep 15, 2024, 9:30 AM IST

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

ಇತ್ತೀಚೆಗಂತೂ ದಿನದಲ್ಲಿ ಯಾವಾಗ ಮಳೆ ಬರುತ್ತದೆ ಯಾವಾಗ ಬಿಸಿಲು ಬರುತ್ತದೆ ಎಂದು ಹೇಳುವುದೇ ಕಷ್ಟ. ಒಂದು ಸಲ ಮನೆಯಿಂದ ಹೊರ ಹೋಗುವಾಗ ಧಾರಾಕಾರ ಮಳೆಯಿದ್ದರೆ, ಮತ್ತೊಮ್ಮೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಬಿಸಿಲಿನ ಬೇಗೆಗೆ ಮುಖವು ಕಾಂತಿ ಹೀನವಾಗುತ್ತದೆ.

ಬಿಸಿಲಿನಿಂದ ಮುಖದ ಬಣ್ಣ ಬದಲಾಗುವುದು ಸಹಜ. ಇಂತಹ ಸಂದರ್ಭದಲ್ಲಿ ತಮ್ಮ ತ್ವಚೆಯ ಮೇಲೆ ವಿಶೇಷ ಕಾಳಜಿ ಹೊಂದಿರುವ ವ್ಯಕ್ತಿಗಳು ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ಹಲವಾರು ದಾರಿಗಳನ್ನು ಹುಡುಕುತ್ತಾರೆ. ಅದರಲ್ಲಿ ಬ್ಯೂಟಿ ಪಾರ್ಲರ್ ಗಳಿಗೆ (Beauty Parlour) ಮೊರೆ ಹೋಗುವುದು ಕೂಡ ಒಂದು. ಅಲ್ಲಿ ಬಹಳಷ್ಟು ಹಣವೂ ಖರ್ಚಾಗುವುದರ ಜೊತೆಗೆ ರಾಸಾಯನಿಕ ಪದಾರ್ಥಗಳಿಂದ ಕೂಡಿದ ಉತ್ಪನ್ನಗಳಿಂದ ಮುಖದ ಕಾಂತಿಯು ಕ್ರಮೇಣ ಕಡಿಮೆಯಾಗುವ  ಸಾಧ್ಯತೆಯೂ ಹೆಚ್ಚು. ಹಾಗಾಗಿ ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸುವಂತಹ ಉತ್ಪನ್ನಗಳನ್ನು ಮುಖಕ್ಕೆ ಬಳಸುವುದು ಉತ್ತಮ.

ಮನೆಯಲ್ಲಿ ಅಡುಗೆಗೆ ಬಳಸುವ ಟೊಮ್ಯಾಟೋವನ್ನು (Tomato) ಬಳಸಿಕೊಂಡು ತಯಾರಿಸುವ ಫೇಸ್ ಪ್ಯಾಕ್ (Face Pack) ಮುಖದ ಕಾಂತಿಯನ್ನು ಮರಳಿ ತರುವಲ್ಲಿ ಸಹಾಯ ಮಾಡುತ್ತದೆ.

ಫೇಸ್‌ ಪ್ಯಾಕ್ ತಯಾರಿಸುವ ವಿಧಾನ
ಎರಡು ಟೇಬಲ್ ಸ್ಪೂನ್ ನಷ್ಟು ಟೊಮ್ಯಾಟೋ ತಿರುಳನ್ನು ತೆಗೆದುಕೊಂಡು ಅದಕ್ಕೆ 2 ರಿಂದ 3 ಬಿಂದುಗಳಷ್ಟು ಲಿಂಬೆ ರಸವನ್ನು ಸೇರಿಸಿ ನಂತರ ಅದಕ್ಕೆ ಒಂದು ಟೇಬಲ್‌ ಸ್ಪೂನ್ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದನ್ನು ಮುಖಕ್ಕೆ ಲೇಪಿಸಿ, 15-20ನಿಮಿಷ ಗಾಳಿಗೆ ಒಣಗಳು ಬಿಟ್ಟು ನಂತರ  ಶುಭ್ರವಾದ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರಕ್ಕೆ 2ರಿಂದ 3 ಬಾರಿ ಈ ರೀತಿ ಮಾಡುವುದರಿಂದ ಬಿಸಿಲಿನಿಂದ ಉಂಟಾದ ಟ್ಯಾನ್ ತೊಲಗಿಸಲು ಸಾಧ್ಯ.

ಟೊಮ್ಯಾಟೋ ಹೋಳನ್ನು ಮುಖಕ್ಕೆ ಲೇಪಿಸುವುದರಿಂದ ಕೂಡ ಮುಖದ ಕಾಂತಿ ಹೆಚ್ಚಾಗುತ್ತದೆ. ಟೊಮ್ಯಾಟೋ ಹಣ್ಣಿನಲ್ಲಿ ವಿಟಮಿನ್‌ ಸಿ, ಎ, ಕೆ, ಆ್ಯಂಟಿ ಆಕ್ಸಿಡೆಂಟ್, ಆಮ್ಲೀಯತೆ ಹಾಗೂ Lycopene ಹೇರಳವಾಗಿದ್ದು ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಮುಖಕ್ಕೆ ನಿಯಮಿತವಾಗಿ ಟೊಮ್ಯಾಟೋ ಫೇಸ್‌ ಪ್ಯಾಕ್ ಲೇಪಿಸುವುದರಿಂದಾಗುವ ಉಪಯೋಗವೇನು?

ಟೊಮ್ಯಾಟೋಗಳು ಚರ್ಮದ ಡೆಡ್‌ ಸೆಲ್ಸ್ ತೆಗೆದು ಹಾಕಲು ಸಹಾಯ ಮಾಡುತ್ತದೆ.

ಮೊಡವೆಗಳು ಬರದಂತೆ ತಡೆಗಟ್ಟುತ್ತದೆ ಹಾಗೂ ಈಗಾಗಲೇ ಮೂಡಿರುವ ಮೊಡವೆಗಳು ಒಡೆಯುವುದನ್ನು ತಡೆಯುತ್ತದೆ.

ತೇವಭರಿತ ಚರ್ಮ  ಹೊಂದಿದವರಿಗೆ ಮುಖದಲ್ಲಿ ಅತಿಯಾದ ತೇವಾಂಶ ಸ್ರವಿಸುವಿಕೆಯನ್ನು ತಡೆಯುತ್ತದೆ.

ಮುಖದ ಚರ್ಮದಲ್ಲಿನ ತೆರೆದ ರಂಧ್ರಗಳನ್ನು ಬಿಗಿಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ವಯಸ್ಸಾದಂತೆ ಮುಖದಲ್ಲಿ ಮೂಡುವ ಡಾರ್ಕ್‌ ಸರ್ಕಲ್, ಕಲೆಗಳು, ಸುಕ್ಕುಗಟ್ಟುವಿಕೆಯನ್ನು ಇದು ತಡೆಯುತ್ತದೆ.

ಟೊಮ್ಯಾಟೋ ಲೇಪನದಿಂದಾಗುವ ಅಡ್ಡ ಪರಿಣಾಮಗಳು

ಟೊಮ್ಯಾಟೋ ಲೇಪನವು ಚರ್ಮಕ್ಕೆ ಉತ್ತಮವಾಗಿದ್ದರೂ ಕೆಲವೊಮ್ಮೆ ಇದು ಮುಖಕ್ಕೆ ಹಾನಿ ಉಂಟು ಮಾಡಬಹುದು. ನಿಮ್ಮ ಮುಖದಲ್ಲಿ ಅಲರ್ಜಿ ಆಗಿದ್ದರೆ, ಅಥವಾ ಮುಖದಲ್ಲಿ ಯಾವುದಾದರೂ ಗಾಯಗಳು ಮಾಸದೆ ಹಾಗೆಯೇ ಉಳಿದಿದ್ದರೆ, ಆಮ್ಲೀಯತೆ (acidic) ಅಂಶವುಳ್ಳ ಟೊಮ್ಯಾಟೋವನ್ನು ಲೇಪಿಸುವುದರಿಂದ ನಿಮಗೆ ಕಿರಿಕಿರಿಯುಂಟಾಗಬಹುದು. ಹಾಗೆಯೇ ಇದು ಮುಖದಲ್ಲಿಉರಿತವನ್ನು ಉಂಟು ಮಾಡಬಹುದು. ಅಂತಹ ಸಂದರ್ಭದಲ್ಲಿ ನೀವು ಟೊಮ್ಯಾಟೋವನ್ನು ಬಳಸಿದ ಫೇಸ್‌ ಪ್ಯಾಕ್ ಬಳಸದೇ ಇರುವುದು ಉತ್ತಮ.

ಪೂರ್ಣಶ್ರೀ ಕೆ.

ಟಾಪ್ ನ್ಯೂಸ್

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

R.Ashok, ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌ ದಾಖಲು

R.Ashok, ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌ ದಾಖಲು

davanagere

Davanagere: ಮರಳು ತೆಗೆದ ವಿಚಾರದಲ್ಲಿ ಘರ್ಷಣೆ… ಓರ್ವ ಮೃತ್ಯು, ಇನ್ನೋರ್ವ ಗಂಭೀರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-redmeat

Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ

5-body-weight

Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು

4-female-health

Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.