![Udupi ಬೈಕ್ ಡೂಮ್ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ!](https://www.udayavani.com/wp-content/uploads/2024/07/u-1-415x250.jpg)
ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು
Team Udayavani, Jun 24, 2024, 11:43 PM IST
![ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು](https://www.udayavani.com/wp-content/uploads/2024/06/water-620x351.jpg)
ಬೆಳಗಾವಿ/ಕೋಲಾರ: ಕಲುಷಿತ ನೀರು ಸೇವಿಸಿ ಬೆಳಗಾವಿ ಹಾಗೂ ಕೋಲಾರದಲ್ಲಿ ಇಬ್ಬರು ಸಾವನ್ನಪ್ಪಿದ್ದು, 17 ಮಂದಿ ಅಸ್ವಸ್ಥಗೊಂಡಿದ್ದಾರೆ.
ಕೋಲಾರದ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿ ಗ್ರಾಮದ ವೆಂಕಟರಮಣಪ್ಪ (65) ಸಾವನ್ನಪ್ಪಿದ್ದು, 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದ ಹೊಳೆವ್ವ ಬಾಳಪ್ಪ ಧನದವರ (38) ಮೃತಪಟ್ಟಿದ್ದು 10 ಮಂದಿ ಅಸ್ವಸ್ಥರಾಗಿದ್ದಾರೆ.
ಮಿಣಜೇನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆದಿದ್ದು, ಓವರ್ ಹೆಡ್ ಟ್ಯಾಂಕ್ ಮೂಲಕ ನಲ್ಲಿಗಳಲ್ಲಿ ನೀರು ಸರಬರಾಜಾಗುತ್ತಿತ್ತು. ಇತ್ತೀಚೆಗೆ ನೀರಿನ ಪೈಪ್ ಒಡೆದಿದ್ದರಿಂದ ಕೊಳಚೆ ನೀರು ಮಿಶ್ರಣವಾಗುತ್ತಿತ್ತು ಎನ್ನಲಾಗಿದೆ. ಕನಸಗೇರಿ ಗ್ರಾಮದಲ್ಲಿ ಬೋರ್ವೆಲ್ ನೀರು ಮನೆ ಮನೆಗಳಿಗೆ ಪೂರೈಸುತ್ತಿದ್ದು, ಈ ನೀರು ಕುಡಿದು ಮಹಿಳೆಗೆ ಭೇದಿ ಆರಂಭವಾಗಿ ಮೃತಪಟ್ಟರು.
ಟಾಪ್ ನ್ಯೂಸ್
![Udupi ಬೈಕ್ ಡೂಮ್ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ!](https://www.udayavani.com/wp-content/uploads/2024/07/u-1-415x250.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.