![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 30, 2023, 8:35 PM IST
ನವದೆಹಲಿ: ವಿಶೇಷಚೇತನ ಯೋಧರ ನೂತನ ಪಿಂಚಣಿ ನಿಯಮಗಳು ಬಿಜೆಪಿಯ ನಕಲಿ ರಾಷ್ಟ್ರವಾದವನ್ನು ಮತ್ತೆ ಬಹಿರಂಗ ಪಡಿಸಿದೆ. ಹೀಗೆಂದು ಅಖೀಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ.
ಪಿಂಚಣಿ ನಿಯಮಗಳ ಬದಲಾವಣೆ ಕುರಿತಂತೆ ಟ್ವಿಟರ್ನಲ್ಲಿ ಖರ್ಗೆ ಪೋಸ್ಟ್ ಮಾಡಿದ್ದು, “ಬಿಜೆಪಿಯ ಈ ನಡೆಯು ನಕಲಿ ರಾಷ್ಟ್ರವಾದವನ್ನು ಬಹಿರಂಗ ಪಡಿಸುತ್ತಿದೆ. ಸೈನಿಕರು ಹಾಗೂ ಸೇನೆಯ ಮಾಜಿ ಸಿಬ್ಬಂದಿಯ ಕಲ್ಯಾಣದ ವಿರುದ್ಧ ಕೆಲಸ ಮಾಡುವಲ್ಲಿ ನರೇಂದ್ರ ಮೋದಿ ಸರ್ಕಾರ ಯಾವಾಗಲೂ ನಿರತವಾಗಿದೆ. ಪ್ರಸಕ್ತ ಶೇ.40ರಷ್ಟು ಯೋಧರು ವೈದ್ಯಕೀಯ ಕಾರಣಗಳಿಂದ ಸೇವೆ ಸಲ್ಲಿಸಲು ಸಾಧ್ಯವಿಲ್ಲವೋ ಅಂಥವರಿಗೆ ನಿಯಮ ತೊಡಕಾಗಲಿದ್ದು, ಈ ಹಿಂದಿನ ಮಾನದಂಡಗಳು, ನಿಯಮಗಳು, ತೀರ್ಪುಗಳನ್ನೂ ಉಲ್ಲಂ ಸುತ್ತವೆ. 2019ರಲ್ಲಿಯೂ ವಿಶೇಷಚೇತನ ಯೋಧರ ಪಿಂಚಣಿ ಮೇಲೆ ತೆರಿಗೆ ವಿಧಿಸುವುದಾಗಿ ಘೋಷಿಸುವ ಮೂಲಕ ಮೋದಿ ಸರ್ಕಾರ ಸೈನಿಕರಿಗೆ ದ್ರೋಹ ಎಸಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಇನ್ನು, ನೂತನ ಪಿಂಚಣಿ ನಿಯಮದ ವಿರುದ್ಧ ಅಖೀಲ ಭಾರತ ಮಾಜಿ ಸೈನಿಕರ ಕಲ್ಯಾಣ ಸಂಘ ಕೂಡ ಪ್ರತಿಭಟನೆ ನಡೆಸುತ್ತಿರುವುದು ವರದಿಯಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.