Navratri: ಕಲ್ಯಾಣರಾಮನ್ ಕುಟುಂಬದ ನವರಾತ್ರಿ ಪೂಜೆಯಲ್ಲಿ ಬಾಲಿವುಡ್ ತಾರೆಯರು ಭಾಗಿ
Team Udayavani, Oct 26, 2023, 12:37 AM IST
ಬೆಂಗಳೂರು: ಕೇರಳದ ತೃಶ್ಯೂರ್ನಲ್ಲಿ ನಡೆದ ಕಲ್ಯಾಣ ರಾಮನ್ ಕುಟುಂಬದ ನವರಾತ್ರಿ ಮಹೋತ್ಸವದಲ್ಲಿ ಬಾಲಿವುಡ್ ತಾರೆಯರು ಸಂಭ್ರಮದಿಂದ ಭಾಗವಹಿಸಿ ಪೂಜಾ ಸಮಾರಂಭಕ್ಕೆ ಮೆರಗು ನೀಡಿದರು.
ಈ ವರ್ಷದ ನವರಾತ್ರಿ ಉತ್ಸವಗಳು ಪವಿತ್ರ ಜ್ಯೋತಿರ್ಲಿಂಗಗಳಿಂದ ಸಾಕಾರಗೊಂಡಿರುವ ಶಿವನ ದೈವಿಕ ಮಹತ್ವವನ್ನು ಆಧರಿಸಿದ್ದವು. ಜತೆಗೆ ಕಲ್ಯಾಣ ರಾಮನ್ ಕುಟುಂಬವು ಗೊಂಬೆಗಳ ಹಬ್ಬದ ಪ್ರದರ್ಶನವಾದ “ಬೊಮ್ಮೆಕೋಲು” ಪ್ರದರ್ಶಿಸುವ ಸಂಪ್ರದಾಯವನ್ನು ಉಳಿಸಿಕೊಂಡು, ಪಾಲಿಸಿಕೊಂಡು ಬರುತ್ತಿದೆ. ಈ ಗೊಂಬೆಗಳು, ದೈನಂದಿನ ದೃಶ್ಯ ರೂಪಕ ಹಾಗೂ ದೇವತೆಗಳಾದ ಸರಸ್ವತಿ, ಪಾರ್ವತಿ, ಲಕ್ಷ್ಮಿಯ ದೈವಿಕ ರೂಪಗಳನ್ನು ಚಿತ್ರಣದ ಮೂಲಕ ಭೌತಿಕ ಮಟ್ಟದಿಂದ ಉನ್ನತ ಆಧ್ಯಾತ್ಮಿಕ ಮಟ್ಟದವರೆಗಿನ ವಿಕಾಸವನ್ನು ಸಂಕೇತಿಸುತ್ತವೆ.
ಕಲ್ಯಾಣ್ ಜ್ಯುವೆಲರ್ಸ್ನ ಜಾಗತಿಕ ಪ್ರಚಾರ ರಾಯಭಾರಿ ಕತ್ರಿನಾ ಕೈಫ್, ಬಾಲಿವುಡ್ ನಟಿಯರಾದ ಸೋನಾಕ್ಷಿ ಸಿನ್ಹಾ, ಶಿಲ್ಪಾ ಶೆಟ್ಟಿ, ಜಾನ್ಹವಿ ಕಪೂರ್, ರಾಷ್ಟ್ರ ಪ್ರಶಸ್ತಿ ವಿಜೇತೆ – ಕೃತಿ ಸನನ್, ಕಲ್ಯಾಣ್ ಜುವೆಲರ್ಸ್ನ ಪ್ರಚಾರ ರಾಯಭಾರಿ ರಶ್ಮಿಕಾ ಮಂದಣ್ಣ, ಬಾಲಿವುಡ್ ನಟ ಅಜಯ್ ದೇವಗನ್, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದ ನಿರ್ದೇಶಕರು ಮತ್ತು ನಟರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟೋವಿನೊ ಥಾಮಸ್, ವರಲಕ್ಷ್ಮಿ, ಸಾನಿಯಾ ಅಯ್ಯಪ್ಪನ್, ವಿಕ್ರಮ್ ಪ್ರಭು, ನಾಗ ಚೈತನ್ಯ, ರೆಜಿನಾ ಕಸ್ಸಂದ್ರ, ನೀರಜ್ ಮಾಧವ್, ನೈಲಾ ಉಷಾ, ಶ್ರುತಿ ರಾಮಚಂದ್ರನ್, ಕಲ್ಯಾಣಿ ಪ್ರಿಯದರ್ಶನ್, ನಿರ್ದೇಶಕ ಸತ್ಯನ್ ಅಂತಿಕ್ಕಾಡ್, ಸಂಗೀತ ನಿರ್ದೇಶಕ ಔಸೆಪ್ಪಚ್ಚನ್, ಮೇನಕಾ ಮತ್ತು ಸುರೇಶ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ರಾಯಭಾರಿಗಳ ಮೆರುಗು
ಕಲ್ಯಾಣ್ ಜ್ಯುವೆಲರ್ಸ್ನ ಪ್ರಾದೇಶಿಕ ಪ್ರಚಾರ ರಾಯಭಾರಿಗಳಾದ ಪ್ರಭು ಗಣೇಶನ್ (ತಮಿಳುನಾಡು), ಅಕ್ಕಿನೇನಿ ನಾಗಾರ್ಜುನ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಿಂಜಲ್ ರಾಜಪ್ರಿಯಾ (ಗುಜರಾತ್) ಮತ್ತು ವಾಮಿಕಾ ಗಬ್ಬಿ (ಪಂಜಾಬ್) ಉಪಸ್ಥಿತಿಯೊಂದಿಗೆ ಸಂಜೆಯ ಪೂಜಾ ಸಮಾರಂಭಕ್ಕೆ ಹೊಸ ಮೆರುಗು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
Thug Life: ದುಬಾರಿ ಬೆಲೆಗೆ ಕಮಲ್ ಹಾಸನ್ ʼಥಗ್ ಲೈಫ್ʼ ಓಟಿಟಿ ರೈಟ್ಸ್ ಸೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.