![Supreme Court](https://www.udayavani.com/wp-content/uploads/2024/07/Supreme-Court-415x234.jpg)
Brahmavar: ಬಸ್-ಗೂಡ್ಸ್ ಢಿಕ್ಕಿ: ಐವರಿಗೆ ಗಾಯ
Team Udayavani, Aug 31, 2023, 8:06 PM IST
![accuident](https://www.udayavani.com/wp-content/uploads/2023/08/accuident-2-620x372.jpg)
ಬ್ರಹ್ಮಾವರ: ಇಲ್ಲಿನ ಬಸ್ಸ್ಟಾಂಡ್ ಬಳಿ ರಾ.ಹೆ.ಯಲ್ಲಿ ಗುರುವಾರ ಮಧ್ಯಾಹ್ನ ಬಸ್ ಹಾಗೂ ಗೂಡ್ಸ್ ಟೆಂಪೊ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಗಾಯಗೊಂಡರು.
ಟೆಂಪೊದಲ್ಲಿದ್ದ ಉದ್ಯಾವರ ಸಂಪಿಗೆನಗರ ನಿವಾಸಿಗಳಾದ ಜಿತೇಂದ್ರ, ಇಂದ್ರಪಾಲ್, ನಿರ್ಪಾದ್, ಉಸ್ತಾದ್ ಮಹಮ್ಮದ್, ಸುನೀಲ್ ಗಾಯಗೊಂಡವರು. ನಾಲ್ವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ, ಸುನೀಲ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ.ಗೆ ದಾಖಲಿಸಲಾಗಿದೆ.
ಸೆಂಟ್ರಿಂಗ್ ಸಾಮಗ್ರಿಗಳನ್ನು ಕೋಟೇಶ್ವರದಲ್ಲಿ ಇಳಿಸಿ ವಾಪಸಾಗುತ್ತಿದ್ದ ಟೆಂಪೊಗೆ ಹೊನ್ನಾಳದಿಂದ ಬ್ರಹ್ಮಾವರ ಬಸ್ಸ್ಟಾಂಡ್ ಕಡೆ ಬರುತ್ತಿದ್ದ ಬಸ್ ಮುಖಾಮುಖೀ ಢಿಕ್ಕಿಯಾಯಿತು. ಬಸ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![Supreme Court](https://www.udayavani.com/wp-content/uploads/2024/07/Supreme-Court-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.