Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು


Team Udayavani, May 2, 2024, 2:46 PM IST

Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು

ಉಡುಪಿ: ಕಳೆದ ಹಲವು ದಿನಗಳಿಂದ ಉಪ್ಪೂರು-ಸಂತೆಕಟ್ಟೆ (ರಾಷ್ಟ್ರೀಯ ಹೆದ್ದಾರಿ 66) ಟ್ರಾಫಿಕ್‌ ದಟ್ಟಣೆ ಸಮಸ್ಯೆ ನಿಯಂತ್ರಣಕ್ಕೆ ಬಾರದಾಗಿದ್ದು, ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಉಪ್ಪೂರು-ಕೆಜಿ ರೋಡ್‌ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಟ್ರಾಫಿಕ್‌ ಸಮಸ್ಯೆ ಹೆಚ್ಚಳವಾಗಿದ್ದು, ಬ್ರಹ್ಮಾವರದಿಂದ ಉಡುಪಿವರೆಗೂ ಇದರ ಪರಿಣಾಮ ವ್ಯಾಪಿಸಿದೆ.

ಉಡುಪಿಯಿಂದ ಬ್ರಹ್ಮಾವರೆಗೆ ಕೆಲವು ಹದಗೆಟ್ಟ ರಸ್ತೆ ಭಾಗಗಳನ್ನು ದುರಸ್ತಿಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ರಸ್ತೆಯ ಪೇವರ್‌ ಫಿನಿಶಿಂಗ್‌ ಹಿನ್ನೆಲೆಯಲ್ಲಿ ಒಂದು ಬದಿಯ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇಕ್ಕಟ್ಟಿನ ಸಂಚಾರ ವ್ಯವಸ್ಥೆ ಇಲ್ಲಿದೆ. ಒಂದು ಸಣ್ಣ ಅಪಘಾತ ಸಂಭವಿಸಿದರೂ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ.

ಬುಧವಾರ ಇಡೀ ದಿನ ಟ್ರಾಫಿಕ್‌ ದಟ್ಟಣೆಯಿಂದ ಜನರು ಹೈರಾಣಾದರು. ಕಚೇರಿ ಕೆಲಸ ಕಾರ್ಯ, ಶುಭ ಸಮಾರಂಭಗಳಿಗೆ ತುರ್ತಾಗಿ ತೆರಳಬೇಕಿರುವ ಸವಾರರು ಹಿಡಿಶಾಪ ಹಾಕುವಂತಾಗಿದೆ. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರು ಗಂಟೆಗಟ್ಟಲೇ ಬಿಸಿಲಲ್ಲಿ ರೋಸಿ ಹೋಗಿದ್ದಾರೆ.

ಶುಭಕಾರ್ಯಗಳ ಎಫೆಕ್ಟ್
ಒಂದೆಡೇ ನಿಧಾನಗತಿಯ ಕಾಮಗಾರಿಯಾದರೆ ಇನ್ನೊಂದೆಡೇ ಕಳೆದ ಎರಡುಮೂರು ದಿನಗಳಿಂದ ಶುಭ ಕಾರ್ಯಗಳ
ಸಂಖ್ಯೆ ಹೆಚ್ಚಿರುವುದರಿಂದ ವಾಹನ ದಟ್ಟಣೆ ಹೆಚ್ಚಿದೆ. ಬ್ರಹ್ಮಾವರ-ಉಡುಪಿ ಮಾರ್ಗದ ಈ ಹೆದ್ದಾರಿ ರಸ್ತೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಘನ ಮತ್ತು ಲಘು ವಾಹನ ಸಹಿತ ಸಮೂಹ ಸಾರಿಗೆ, ಸರಕು ಸಾಗಣೆ ವಾಹನಗಳು ನಿತ್ಯ ಸಂಚರಿಸುತ್ತವೆ.

ಇನ್ನೆಷ್ಟು ದಿನ ಕಾಮಗಾರಿ?
ಪ್ರಸ್ತುತ ಕೆಜಿ ರಸ್ತೆ, ಉಪ್ಪೂರು ಭಾಗದಲ್ಲಿ ಕೆಲಸ ನಡೆಯುತ್ತಿದ್ದು, ಬುಧವಾರ ರಾತ್ರಿಯೊಳಗೆ ಇಲ್ಲಿನ ಕೆಲಸ ಪೂರ್ಣವಾಗುತ್ತದೆ. ಅನಂತರ ಸಂತೆಕಟ್ಟೆ, ಅಂಬಾಗಿಲು, ಬಾಳಿಗ ಜಂಕ್ಷನ್‌ ಸಮೀಪ ಕೆಲಸ ಆರಂಭಿಸಲಾಗುತ್ತದೆ. ವ್ಯವಸ್ಥಿತವಾಗಿ ಶಿಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಂಡಿದ್ದೇವೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ತಿಳಿಸಿದ್ದಾರೆ.

ಪರಿಶೀಲನೆ
ಬ್ರಹ್ಮಾವರ-ಉಡುಪಿ ಸಂಚಾರ ವ್ಯತ್ಯಯ ದಿಂದ ಸವಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಮತ್ತು ಸುಗಮ ಸಂಚಾರ ನಿರ್ವಹಣೆಗೆ ಪೊಲೀಸ್‌ ಇಲಾಖೆ ಸೂಚನೆ ನೀಡಲಾಗಿದೆ.
*ಯಶ್‌ಪಾಲ್‌ ಸುವರ್ಣ, ಶಾಸಕರು, ಉಡುಪಿ

ಟಾಪ್ ನ್ಯೂಸ್

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

1-tej

RJD; ಶಿವಲಿಂಗ ತಬ್ಬಿದ‌ ತೇಜ್‌ಪ್ರತಾಪ್‌: ವೀಡಿಯೋ ವೈರಲ್‌

ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Brijesh Chowta ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Naveen Patnaik

BJD; ಚುನಾವಣೆ ಸೋಲು:ಒಡಿಶಾ ಘಟಕ ಪುನಾರಚನೆ

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

supreem

Supreme Court; ದಿವ್ಯಾಂಗರ ಅವಹೇಳನ ತಡೆಗೆ ಮಾರ್ಗಸೂಚಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.