Sugarcane; ಬುಗುರಿಕಡು ಕಬ್ಬಿಗೆ ಈ ಬಾರಿ ರೋಗ ಬಾಧೆ: ಮಳೆ ಹೆಚ್ಚಳ ಮುಖ್ಯ ಕಾರಣ

ಪ್ರಮುಖ ಹಬ್ಬಗಳಿಗೆ ಕಬ್ಬು ಕೊರತೆ

Team Udayavani, Sep 5, 2024, 7:20 AM IST

Sugarcane; ಬುಗುರಿಕಡು ಕಬ್ಬಿಗೆ ಈ ಬಾರಿ ರೋಗ ಬಾಧೆ: ಮಳೆ ಹೆಚ್ಚಳ ಮುಖ್ಯ ಕಾರಣ

ಕುಂದಾಪುರ: ಗೌರಿ- ಗಣೇಶ ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿಯಿದ್ದು, ಎಲ್ಲೆಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಚೌತಿ ಹಬ್ಬ ಬಂತೆಂದರೆ ಕಬ್ಬಿಗೆ ಬಹುಬೇಡಿಕೆ. ಗಣಪತಿಗೆ ಕಬ್ಬು ಎಂದರೆ ವಿಶೇಷ. ಕುಂದಾಪುರ, ಬೈಂದೂರು ಭಾಗದ ಬಹುತೇಕ ಕಡೆ ಚೌತಿ ಹಬ್ಬ ಸಹಿತ ಮುಂದಿನ ಹಬ್ಬಗಳಿಗೆ ಹೆಮ್ಮಾಡಿ ಗ್ರಾಮದ ಬುಗುರಿಕಡುವಿನಲ್ಲಿ ಬೆಳೆಯುವ ಕಬ್ಬು ಸಿಹಿ ಉಣಿಸುತ್ತದೆ.

ಹೆಮ್ಮಾಡಿ ಗ್ರಾಮದ ಸಂತೋಷನಗರ ಸಮೀಪದ ಬುಗುರಿಕಡುವಿನಲ್ಲಿ ಶೀನ ಪೂಜಾರಿ ಅವರು 20 ವರ್ಷಗಳಿಗೂ ಹೆಚ್ಚು ಕಾಲದಿಂದ ಗೌರಿ – ಗಣೇಶ ಹಬ್ಬ, ನವರಾತ್ರಿ, ತುಳಸಿ ಹಬ್ಬಕ್ಕೆಂದೇ ಕಬ್ಬು ಬೆಳೆಯುತ್ತಿದ್ದಾರೆ.

ಹಳದಿ ಕಬ್ಬಿಗೆ ರೋಗ ಬಾಧೆ
ಈ ಬಾರಿ ಮಳೆಗಾಲದಲ್ಲಿ ಹಾಗೂ ಕಬ್ಬಿನ ಬೆಳವಣಿಗೆ ವೇಳೆಯೂ ನಿರಂತರ ಮಳೆಯಾದ ಕಾರಣ ಹಳದಿ ಕಬ್ಬಿಗೆ ರೋಗ ಬಾಧಿಸಿದೆ. ಶೀನ ಪೂಜಾರಿಯವರು 60-70 ಸೆಂಟ್ಸ್‌ ಜಾಗದಲ್ಲಿ ಕಬ್ಬು ಬೆಳೆದಿ ದ್ದಾರೆ. ಈ ಪೈಕಿ 25 ಸೆಂಟ್ಸ್‌ ಜಾಗದಲ್ಲಿ ಕೆಂಪು ಕಬ್ಬು ಬೆಳೆದಿದ್ದು, ಅದಕ್ಕೆ ಯಾವುದೇ ರೋಗ ಬಾಧೆ ಇಲ್ಲ. ಉಳಿದ ಜಾಗದಲ್ಲಿರುವ ಹಳದಿ ಕಬ್ಬು ಬಹುತೇಕ ರೋಗಕ್ಕೆ ತುತ್ತಾಗಿದೆ. ಚೌತಿಗೆ ಹೆಚ್ಚಿನ ಬೇಡಿಕೆ ಇರುವುದೇ ಹಳದಿ ಕಬ್ಬಿಗೆ. ಬಾಧಿಸಿರುವ ರೋಗ ಎನ್ನುವುದು ಸ್ಪಷ್ಟವಾಗಿಲ್ಲ. ಬೆಂಕಿ ರೋಗ ಕಂಡುಬರುತ್ತಿದೆ ಎನ್ನುತ್ತಾರೆ ಶೀನ ಪೂಜಾರಿ.

ಚೌತಿಯಿಂದ ಆರಂಭಗೊಂಡು, ಉತ್ಥಾನ ದ್ವಾದಶಿ (ತುಳಸಿ ಹಬ್ಬ) ಹಬ್ಬ, ನವರಾತ್ರಿ, ದೀಪಾವಳಿ, ಕೊಡಿ ಹಬ್ಬ, ಉಪ್ಪುಂದ ಹಬ್ಬಗಳಿಗೆ ಇಲ್ಲಿಂ ದಲೇ ಅನೇಕ ಮಂದಿ ಕಬ್ಬು ತೆಗೆದುಕೊಂಡು ಹೋಗುತ್ತಾರೆ. ಕುಂದಾಪುರ, ಬೈಂದೂರು, ಕೋಟೇಶ್ವರ, ಗಂಗೊಳ್ಳಿ, ಹೆಮ್ಮಾಡಿ ಸಹಿತ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಇವರಲ್ಲಿಗೆ ಕಬ್ಬಿಗಾಗಿ ಜನ ಬರುತ್ತಿದ್ದಾರೆ. ತುಳಸಿ ಹಬ್ಬಕ್ಕೆ ಹೆಮ್ಮಾಡಿ ಗ್ರಾಮದ ಬಹುತೇಕ ಮನೆಯವರು ಇವರಿಂದಲೇ ಕಬ್ಬು ಖರೀದಿಸುವುದು ವಾಡಿಕೆ. ಮೊದಲು ಹೆಮ್ಮಾಡಿಯ ಈ ಬುಗುರಿಕಡುವಿನಲ್ಲಿ ಅನೇಕ ಮಂದಿ ಕಬ್ಬು ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದುಬಾರಿ ಕೂಲಿ, ಕೆಲಸಕ್ಕೆ ಜನ ಸಿಗದಿರುವುದು, ನೀರಿನ ಸಮಸ್ಯೆ, ಪ್ರತಿಕೂಲ ಹವಾಮಾನ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತ ಸಹಿತ ಇನ್ನಿತರ ಕಾರಣಗಳಿಂದ ಈಗ ಕೇವಲ ಒಬ್ಬರು ಮಾತ್ರ ಬೆಳೆಯುತ್ತಿದ್ದಾರೆ.

ಬೇಡಿಕೆಯಷ್ಟು ಕಬ್ಬಿಲ್ಲ
ಕಬ್ಬಿಗೆ ಬೇಡಿಕೆಯಿದೆ. ಆದರೆ ಅಷ್ಟೊಂದು ಕಬ್ಬು ಇಲ್ಲ. ಹಳದಿ ಕಬ್ಬು ಜಾಸ್ತಿ ಬೇಡಿಕೆಯಿದ್ದರೂ, ರೋಗದಿಂದಾಗಿ ಇಳುವರಿಯೇ ಇಲ್ಲ. ಕೆಂಪು ಕಬ್ಬಿನ ಒಂದು ಜೊಲ್ಲೆಗೆ 25-30 ರೂ., ಜೋಡಿಗೆ ಆದರೆ 50 ರೂ.ಗೆ ಮಾರುತ್ತಿದ್ದೇನೆ.
– ಶೀನ ಪೂಜಾರಿ ಬುಗುರಿಕಡು, ಕಬ್ಬು ಬೆಳೆಗಾರರು

ಟಾಪ್ ನ್ಯೂಸ್

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

Udupi1

International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

1-mmmm

PM Modi ಕಿಡಿ ; ರೊಹಿಂಗ್ಯಾ ಜತೆ ಜೆಎಂಎಂ ಶಾಮೀಲಾಗಿದೆ

1-weewqeqwe

Bihar;ಹೊಲಕ್ಕೆ ನುಗ್ಗಿದ ರೈಲು ಎಂಜಿನ್‌: ನೆಟ್ಟಿಗರ ಕಟು ಟೀಕೆ

Malpe

Holiday: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

Udupi1

International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ

Malpe

Holiday: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು

Karkala

Karkala: ಬಹುಭಾಷೆ, ಬಹುಶಿಸ್ತೀಯ ಶಿಕ್ಷಣ ಅತ್ಯಗತ್ಯ: ಪ್ರೊ.ಅನಿಲ್‌ ಸಹಸ್ರಬುದ್ಧೆ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

train-track

Landslide: ತುರ್ತು ಬ್ರೇಕ್‌ ಹಾಕಿದ ಕಾರಣ ತಪ್ಪಿದ ರೈಲು ದುರಂತ

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

1-ghhh

ಹೃದಯಾಘಾತ: ಶಾಲೆಯಲ್ಲೇ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

CBI

Trainee doctor ಹ*ತ್ಯೆ ಕೇಸು: ಮಾಜಿ ಪ್ರಿನ್ಸಿ ಸಂದೀಪ್‌ 17ರ ವರೆಗೆ ಸಿಬಿಐ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.