ಚನ್ನಬಸವೇಶ್ವರ ಮಹಾ ರಥೋತ್ಸವ
ಉಳವಿ ಜಾತ್ರೆಗೆ ಸಕಲ ಸಿದ್ಧತೆ | ಹರಹರ ಮಹಾದೇವ ಉದ್ಘೋಷದೊಂದಿಗೆ ಉಳವಿಯತ್ತ ಭಕ್ತರ ದಂಡು
Team Udayavani, Feb 5, 2023, 5:20 PM IST
ಜೋಯಿಡಾ: ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಸಕಲ ಸಿದ್ಧತೆಗೊಂಡಿದ್ದು, ಹರ ಹರ ಮಹಾದೇವ ಅಡಿಕೇಶ್ವರ ಮಡಿಕೇಶ್ವರ ಉಳವಿ ಚೆನ್ನಬಸವೇಶ್ವರ ಎನ್ನುತ್ತ ದಿನವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಜ.28 ರಿಂದ ಜಾತ್ರೆ ಆರಂಭವಾಗಿದ್ದು, ಫೆ 6 ರಂದು ಸಂಜೆ 4ಕ್ಕೆ ಮಹಾರಥೋತ್ಸವ ಜರುಗಲಿದ್ದು, ದೇವಸ್ಥಾನ ಟ್ರಸ್ಟ್ ಕಮಿಟಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಉಳವಿ ಟ್ರಸ್ಟ್ ಕಮಿಟಿ ಮತ್ತು ಉಳವಿ ಗ್ರಾಪಂ ಮುಂದಾಳತ್ವದಲ್ಲಿ ಬಂದ ಭಕ್ತರಿಗೆ ವಸತಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಅನ್ನಛತ್ರಗಳನ್ನು ಮಾಡಲಾಗಿದೆ. ಜಾತ್ರೆಗೆ ಹೊಸ ರಥಬೀದಿ ನಿರ್ಮಾಣವಾದ ಕಾರಣ ರಥೋತ್ಸವಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಈ ವರ್ಷ ಹೆಚ್ಚಿನ ಭಕ್ತರು ಜಾತ್ರೆಗೆ ಬರುವ ನಿರೀಕ್ಷೆ ಇದೆ ಎಂಬುದು ಟ್ರಸ್ಟ್ ಕಮಿಟಿಯವರ ಮಾತಾಗಿದೆ.
ಕಾಲ್ನಡಿಗೆಯಲ್ಲಿ ಬರುವ ಭಕ್ತರು: ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ದಿನವೂ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಉಳವಿಗೆ ಬರುತ್ತಾರೆ. ಇಲ್ಲಿಗೆ ಬರಬೇಕಾದರೆ ಡಟ್ಟ ಕಾಡಿನ
ಮಧ್ಯದಿಂದಲೇ ಬರಬೇಕು. ಕಾಡಿನ ದಾರಿಯಿದ್ದರು ಸಹಿತ ಭಕ್ತರು ಗುಂಪು ಗುಂಪಾಗಿ ಕಾನೇರಿ ಹೊಳೆ, ಅಂಬುಳಿ ಹೊಳೆ, ಹಳ್ಳಗಳು ಇರುವ ಭಾಗದಲ್ಲಿ ರಾತ್ರಿ ತಂಗುತ್ತಾರೆ.
ವಾರಗಟ್ಟಲೇ ನಡೆದುಕೊಂಡು ಬಂದು ತಮ್ಮ ಇಷ್ಟ ದೇವರ ದರ್ಶನ ಪಡೆಯುತ್ತಾರೆ.
ಚಕ್ಕಡಿ ಎತ್ತುಗಳ ಗೆಜ್ಜೆಯ ನಿನಾದ: ಉಳವಿ ಜಾತ್ರೆಗೆ ಚಕ್ಕಡಿಗಾಡಿಗಳು ಬರುವುದು ಬೇಡ ಎಂಬ ಸರ್ಕಾರದ ಆದೇಶವಿದ್ದರೂ ನೂರಾರು ಚಕ್ಕಡಿಗಾಡಿಗಳು ಈಗಾಗಲೇ ಬಂದಿವೆ. ಉಳವಿ ಚೆನ್ನಬಸವಣ್ಣನ ದರ್ಶನ ಪಡೆದರೆ ನಮ್ಮ ಎತ್ತುಗಳು, ಕುಟುಂಬ, ಊರು ಸುಖದಿಂದ ಇರುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಚಕ್ಕಡಿ ಗಾಡಿಗಳನ್ನು ಭಕ್ತರು ತರುತ್ತಿದ್ದಾರೆ.
ಸಿದ್ಧಗೊಳುಳುತ್ತಿದೆ ತೇರು: ಉಳವಿ ಮಹಾರಥೋತ್ಸವಕ್ಕೆ ತೇರು ಸಜ್ಜಾಗುತ್ತಿದೆ. ಬಣ್ಣ ಬಣ್ಣದ ಕಾಗದಗಳನ್ನು ಬಳಸಿ, ಹೂವುಗಳಿಂದ, ಬಣ್ಣಗಳಿಂದ ತೇರನ್ನು ಸಿದ್ಧಗೊಳಿಸಲಾಗುತ್ತಿದೆ. ಉಳವಿ ಜಾತ್ರೆಯಲ್ಲಿ ಎರಡು ತೇರನ್ನು ಎಳೆಯಲಾಗುತ್ತದೆ. ಒಂದು ಸಣ್ಣ ತೇರು ಹಾಗೂ ಇನ್ನೊಂದು ದೊಡ್ಡ ತೇರು. ನೀರಿನ ವ್ಯವಸ್ಥೆ: ಉಳವಿ ಗ್ರಾಪಂನಿಂದ ಜಾತ್ರೆಗೆ ಬಂದ ಲಕ್ಷಾಂತರ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ ಎಂದು ಪಿಡಿಒ ಮಹಮ್ಮದ್ ಹನೀಫ್ ತಿಳಿಸಿದ್ದಾರೆ.
ಪೊಲೀಸ್-ಅರಣ್ಯ ಇಲಾಖೆ ಸಹಕಾರ: ಶ್ರೀಕ್ಷೇತ್ರ ಉಳವಿ ಜಾತ್ರೆಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಹಕಾರ ಅತ್ಯಗತ್ಯವಾಗಿದೆ. ಪೊಲೀಸರು ಟ್ರಾಫಿಕ್ ಕಿರಿಕಿರಿ ತಪ್ಪಿಸಿದರೆ, ಹಚ್ಚ ಹಸಿರಿನ ಕಾಡಿಗೆ ಯಾವುದೇ ತರಹದ ಹಾನಿಯಾಗದಂತೆ ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ.
ಸಂದೇಶ ದೇಸಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ
Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ
Uttarakannada DC: ದಾಂಡೇಲಿಗೆ ಆಗಮಿಸಿದ ಜಿಲ್ಲಾಧಿಕಾರಿ… ಆಸ್ಪತ್ರೆ, ಶಾಲೆಗಳಿಗೆ ಭೇಟಿ
Dandeli: ಸಮರ್ಪಕ ಬೀದಿ ದೀಪ ನಿರ್ವಹಣೆಗೆ ಆಗ್ರಹಿಸಿ ಬಿಜೆಪಿ ನಗರಸಭಾ ಸದಸ್ಯರಿಂದ ಪ್ರತಿಭಟನೆ
Shiruru: ದುರಂತದಲ್ಲಿ ಸಾವು; ಮೃತದೇಹ ಸಿಗದಿದ್ದರೂ ಕುಟುಂಬಕ್ಕೆ ಪರಿಹಾರ: ಡಿಸಿ
MUST WATCH
ಹೊಸ ಸೇರ್ಪಡೆ
INDvsNZ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ದಾಖಲೆ ಬರೆದ ರವಿ ಅಶ್ವಿನ್
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ
Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್ದೇವ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.