ಆರ್‌ಸಿಬಿ-ಚೆನ್ನೈ : ಇಬ್ಬರಿಗೂ ಗೆಲುವು ಅತ್ಯಗತ್ಯ


Team Udayavani, May 4, 2022, 8:10 AM IST

ಆರ್‌ಸಿಬಿ-ಚೆನ್ನೈ : ಇಬ್ಬರಿಗೂ ಗೆಲುವು ಅತ್ಯಗತ್ಯ

ಪುಣೆ: ಈ ಸಲ ತಂಡದ ಹಣೆಬರಹ ಬದಲಾದಂತಿದೆ ಎಂಬ ರೀತಿಯಲ್ಲಿ ಆಟ ಆರಂಭಿಸಿ, ಈಗ ಸೋಲಿನೊಂದಿಗೆ ಗಾಢ ನಂಟು ಬೆಳೆಸಿರುವ ಆರ್‌ಸಿಬಿ ಬುಧವಾರದ ಮಹತ್ವದ ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಇಲ್ಲಿ ಗೆದ್ದು, ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರೆ ಡು ಪ್ಲೆಸಿಸ್‌ ಬಳಗದ ಪ್ಲೇ ಆಫ್ ಮೇಲೆ ಒಂದು ಹಂತದ ತನಕ ನಿರೀಕ್ಷೆ ಇರಿಸಿಕೊಳ್ಳಬಹುದು. ಸದ್ಯ ಹತ್ತರಲ್ಲಿ 5 ಪಂದ್ಯಗಳನ್ನಷ್ಟೇ ಜಯಿಸಿರುವ ಆರ್‌ಸಿಬಿ ಉಳೆದೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಜಯಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ.

ಚೆನ್ನೈ ತಂಡದ್ದು ಇದಕ್ಕೆ ತದ್ವಿರುದ್ಧ ಕೇಸ್‌. ಅದು ಆರಂಭದಲ್ಲಿ ಸತತವಾಗಿ ಸೋತು, ಇನ್ನೇನು ಹೊರಬೀಳಲಿದೆ ಎನ್ನುವಾಗಲೇ ಗೆಲುವಿನ ಲಯ ಕಾಣಲಾರಂಭಿಸಿದೆ. ಮಹೇಂದ್ರ ಸಿಂಗ್‌ ಧೋನಿಗೆ ಮರಳಿ ನಾಯಕತ್ವ ಲಭಿಸಿದ ಬಳಿಕ ತಂಡದ ಚಹರೆ ಹಾಗೂ ಆಟದ ರೀತಿಯೆರಡೂ ಬದಲಾಗಿದೆ. ಎರಡರಲ್ಲೂ ಧನಾತ್ಮಕ ಸಂಗತಿಗಳೇ ಗೋಚರಿಸುತ್ತಿವೆ.

ಆದರೂ ಚೆನ್ನೈ ಮುಂದಿರುವ ಸವಾಲು ಸುಲಭದ್ದಲ್ಲ. ಅದು 9 ಪಂದ್ಯಗಳಲ್ಲಿ ಗೆದ್ದದ್ದು 3 ಮಾತ್ರ. ಉಳಿದ ಐದೂ ಪಂದ್ಯಗಳನ್ನು ಗೆದ್ದು, ರನ್‌ರೇಟ್‌ ಸುಧಾರಿಸಿಕೊಂಡರೆ 4ನೇ ಸ್ಥಾನಕ್ಕೆ ಪೈಪೋಟಿ ನೀಡಬಹುದು. ಆದರೂ ಇದು ಖಾತ್ರಿಯೇನಲ್ಲ. ಆದರೆ ಉಳಿದ ತಂಡಗಳ ಮುನ್ನಡೆಗೆ ಅಡ್ಡಗಾಲಿಕ್ಕಬಹುದು. ಚೆನ್ನೈಯಿಂದ ಇಂಥ ಸ್ಥಿತಿ ಎದುರಿಸುತ್ತಿರುವ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು!

ಆರ್‌ಸಿಬಿ ಸಾಧನೆ ಸಾಲದು
ಆರ್‌ಸಿಬಿಯ ಆರಂಭ ಹೇಗೆಯೇ ಇರಲಿ, ಈ 10 ಪಂದ್ಯಗಳ ಒಟ್ಟು ಸಾಧನೆಯನ್ನು ಗಮನಿಸುವಾಗ ಕರ್ನಾಟಕದ ಫ್ರಾಂಚೈಸಿಯ ಪ್ರದರ್ಶನ ಏನೂ ಸಾಲದು. ಈವರೆಗೆ ತಂಡದಿಂದ ದಾಖಲಾದದ್ದು 6 ಅರ್ಧ ಶತಕ ಮಾತ್ರ. ಇದರಲ್ಲಿ ಎರಡನ್ನು ನಾಯಕ ಡು ಪ್ಲೆಸಿಸ್‌ ಅವರೇ ಹೊಡೆದಿದ್ದಾರೆ. ಆದರೀಗ ಅವರೂ ಬೇಗನೇ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಹೀಗಾಗಿ ಉಳಿದ ಬ್ಯಾಟರ್‌ಗಳಿಗೆ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಸಾಕಷ್ಟು ಪರದಾಡಿದ ಬಳಿಕ ವಿರಾಟ್‌ ಕೊಹ್ಲಿ ಕಳೆದ ಪಂದ್ಯದಲ್ಲಿ ಐವತ್ತರ ಗಡಿ ದಾಟಿದರು. ಇದಕ್ಕಿಂತ ಉತ್ತಮ ಮಟ್ಟದ ಪ್ರದರ್ಶನವನ್ನು ಅವರಿಂದ ತಂಡ ಬಯಸುತ್ತದೆ. ಯುವ ಆಟಗಾರ ರಜತ್‌ ಪಾಟಿದಾರ್‌ ಓಕೆ. ಆದರೆ ಸ್ಥಿರ ಪ್ರದರ್ಶನ ಅಗತ್ಯ. ದಿನೇಶ್‌ ಕಾರ್ತಿಕ್‌ ಅವರ ಅಬ್ಬರದ ಆಟ ಈಗ ಗೋಚರಿಸುತ್ತಿಲ್ಲ. ಮ್ಯಾಕ್ಸ್‌ವೆಲ್‌ ಕೂಡ ಮಂಕಾಗಿದ್ದಾರೆ. ಇವರಿಬ್ಬರು ಸಿಡಿದು ನಿಂತರೆ ಆರ್‌ಸಿಬಿಯನ್ನು ತಡೆಯುವುದು ಕಷ್ಟ.

ಆರ್‌ಸಿಬಿಯ ಬೌಲಿಂಗ್‌ ಯೂನಿಟ್‌ನಲ್ಲೂ ಸಾಕಷ್ಟು ದೌರ್ಬಲ್ಯಗಳಿವೆ. ಸಿರಾಜ್‌ ಯಾವುದೇ ಪರಿಣಾಮ ಬೀರದಿರುವುದು, ಹರ್ಷಲ್‌ ಪಟೇಲ್‌ ಡೆತ್‌ ಓವರ್‌ಗಳಲ್ಲಿ ಕ್ಲಿಕ್‌ ಆಗದಿರುವುದು ತಂಡದ ಪ್ರಮುಖ ಸಮಸ್ಯೆ.

ಧೋನಿಯೇ ತಂಡದ ಸ್ಫೂರ್ತಿ
ಧೋನಿ ಮರಳಿ ತಂಡದ ಚುಕ್ಕಾಣಿ ಹಿಡಿದದ್ದೇ ಚೆನ್ನೈ ತಂಡಕ್ಕೊಂದು ಸ್ಫೂರ್ತಿ. ಹಾಗೆಯೇ ಕಳೆದ ಋತುವಿನ ಬ್ಯಾಟಿಂಗ್‌ ಹೀರೋ ಋತುರಾಜ್‌ ಗಾಯಕ್ವಾಡ್‌ ಫಾರ್ಮ್ ಕಂಡುಕೊಂಡಿರುವುದೊಂದು ಶುಭ ಸೂಚನೆ. ಡೇವನ್‌ ಕಾನ್ವೆ ಕೂಡ ಭರವಸೆ ಮೂಡಿಸಿದ್ದಾರೆ. ಆದರೂ ಬ್ಯಾಟಿಂಗ್‌ ವಿಭಾಗದಲ್ಲಿ ಫಾರ್ಮ್ನಲ್ಲಿಲ್ಲದ ಆಟಗಾರ ಸಂಖ್ಯೆಯೇ ದೊಡ್ಡದಿದೆ. ನಾಯಕತ್ವದ ಒತ್ತಡದಿಂದ ಮುಕ್ತರಾದ ರವೀಂದ್ರ ಜಡೇಜ ಫಾರ್ಮ್ಗೆ ಮರಳಿಯಾರೇ ಎಂಬುದು ದೊಡ್ಡ ನಿರೀಕ್ಷೆ.

ತಂಡದ ಬೌಲಿಂಗ್‌ ಘಾತಕವೇನಲ್ಲ. ಮುಕೇಶ್‌ ಚೌಧರಿ ಮೋಡಿಗೈಯುತ್ತಿದ್ದಾರೆ. ಮಹೀಶ್‌ ತೀಕ್ಷಣ ಪರಾÌಗಿಲ್ಲ. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.

ಆರ್‌ಸಿಬಿ ವಿರುದ್ಧವೇ ಮೊದಲ ಜಯ
ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ, ಈ ಋತುವಿನ ಮೊದಲ ಜಯ ಸಾಧಿಸಿದ್ದೇ ಆರ್‌ಸಿಬಿ ವಿರುದ್ಧ ಎಂಬುದನ್ನು ಮರೆಯುವಂತಿಲ್ಲ. ಎ. 12ರಂದು ನವೀ ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ 23 ರನ್ನುಗಳ ಗೆಲುವು ಕಂಡಿತ್ತು.

ರಾಬಿನ್‌ ಉತ್ತಪ್ಪ (88) ಮತ್ತು ಶಿವಂ ದುಬೆ (ಅಜೇಯ 95) ಬ್ಯಾಟಿಂಗ್‌ ಶೌರ್ಯದಿಂದ ಚೆನ್ನೈ 4ಕ್ಕೆ 216 ರನ್‌ ರಾಶಿ ಹಾಕಿತು. ಆರ್‌ಸಿಬಿ 9 ವಿಕೆಟಿಗೆ 193ರ ತನಕ ಬಂದು ಶರಣಾಯಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ, ಒಂದೂ ಅರ್ಧ ಶತಕ ದಾಖಲಿಸದ ಹೊರತೂ ಆರ್‌ಸಿಬಿ ಇಷ್ಟೊಂದು ರನ್‌ ಗಳಿಸಿದ್ದೇ ಅಚ್ಚರಿಯಾಗಿ ಕಂಡಿತು. 41 ರನ್‌ ಮಾಡಿದ ಶಬಾಜ್‌ ಅಹ್ಮದ್‌ ಅವರದೇ ಗರಿಷ್ಠ ಗಳಿಕೆಯಾಗಿತ್ತು.ಈ ಸೋಲನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಸೇಡು ತೀರಿಸಿಕೊಂಡೀತೇ ರಾಯಲ್‌ ಚಾಲೆಂಜರ್?

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.