ಬೇರೊಬ್ಬರಿಗೆ ಪರಿಹಾರಧನ ಜಮೆ: ಯಕೆಪಿ ಕಚೇರಿ ಪೀಠೋಪಕರಣ ಜಪ್ತಿ
Team Udayavani, Feb 16, 2023, 11:43 AM IST
ಬಾಗಲಕೋಟೆ: ನೈಜ ವಾರಸುದಾರರಿಗೆ ಭೂ ಪರಿಹಾರ ನೀಡದೇ ಬೇರೆಯವರಿಗೆ ಪರಿಹಾರಧನ ಪಾವತಿಸಿದ ಲೋಪ ಸರಿಪಡಿಸದ ಹಿನ್ನೆಲೆಯಲ್ಲಿ ಇಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ವಿವಿಧ ಪೀಠೊಪಕರಣಗಳನ್ನು ಬುಧವಾರ ಜಪ್ತಿ ಮಾಡಲಾಯಿತು. ಇಲ್ಲಿನ ಜೆಎಂಎಫ್ಸಿ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಪ್ರಶಾಂತ ಚಟ್ನಿ ಆದೇಶದನ್ವಯ ಈ ಜಪ್ತಿ ಪ್ರಕ್ರಿಯೆ ನಡೆಸಲಾಯಿತು.
ಪ್ರಕರಣದ ವಿವರ:
ತಾಲೂಕಿನ ಸೀಮಿಕೇರಿ ಗ್ರಾಮದ ರಿ.ಸ ನಂ.248/184 ಎಕರೆ ಜಮೀನಿಗೆ ಶೇಷಗಿರಿರಾವ ಸರದೇಸಾಯಿ ವಾರಸುದಾರರಿದ್ದು, ಅವರು ಅದನ್ನು ಸಾಬಣ್ಣ ಕೆಂಚಣ್ಣವರ ಅವರಿಗೆ ಹಸ್ತಾಂತರಿಸಿ ದಾಖಲೂ ಮಾಡಲಾಯಿತು. ಅವರ ನಿಧನದ ನಂತರ ಪತ್ನಿ ಹೆಸರಿಗೆ ಹಸ್ತಾಂತರವಾಗಿತ್ತು. ಅವರೂ ನಿಧನದರಾದ ನಂತರ ವಾರಸುದಾರರಾದರು ಸುಮಾರು ಒಂದು ವರ್ಷ ಒಂಬತ್ತು ತಿಂಗಳ ಹಿಂದೆ 4 ಎಕರೆ ಪೈಕಿ 3.26 ಗುಂಟೆ ಪುನರ್ವಸತಿ ಕೇಂದ್ರಕ್ಕೆ ಸ್ವಾಧೀನಗೊಂಡಿದ್ದು, 12 ಗುಂಟೆ ಅವರ ಹೆಸರಿನಲ್ಲಿದೆ.
ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರಧನ ಕೊಟ್ಟಿಲ್ಲ ಎಂದು ಕಚೇರಿ ಸಂಪರ್ಕಿಸಿದಾಗ ಪರಿಹಾರಧನ ತಪ್ಪಿನಿಂದಾಗಿ ಅದು ಬೇರೆಯ ವರಿಗೆ ಪಾವತಿಯಾಗಿದ್ದು, ಬೆಳಕಿಗೆ ಬಂದಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಅದನ್ನು ಸರಿಪಡಿಸುವ ಭರವಸೆ ಕಾರ್ಯಗತಗೊಳ್ಳದಿರುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಈ ಕಾರಣಕ್ಕೆ ನ್ಯಾಯಾಲಯ ಎಸ್ಎಲ್ಎಒ ಕಚೇರಿ ಜಪ್ತಿಗೆ ಆದೇಶ ನೀಡಿದ್ದು, ಸೋಮವಾರ ಮಧ್ಯಾಹ್ನ ಜಪ್ತಿ ಮಾಡಲಾಯಿತು. ಪ್ರತಿವಾದಿಗಳ ಪರವಾಗಿ ಈರಣ್ಣ ಕಲ್ಯಾಣಿ ವಕಾಲತ್ತು ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
Bagalkote: ಆನ್ಲೈನ್ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ
ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ
ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.