![ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ](https://www.udayavani.com/wp-content/uploads/2024/07/HEALTH-415x287.jpg)
ಮನೆಯ ಕಂಪೌಂಡ್ ಕುಸಿತ: ಮೂರರ ಹರೆಯದ ಮಗು ಸಾವು
Team Udayavani, Jun 8, 2020, 9:14 PM IST
![ಮನೆಯ ಕಂಪೌಂಡ್ ಕುಸಿತ: ಮೂರರ ಹರೆಯದ ಮಗು ಸಾವು](https://www.udayavani.com/wp-content/uploads/2020/06/Compound-crash-620x376.jpg)
ಉಳ್ಳಾಲ: ಮನೆಯ ಕಂಪೌಂಡ್ ಕುಸಿದು ಬಿದ್ದು ಅದರಡಿ ಸಿಲುಕಿದ್ದ ಮೂರರ ಹರೆಯದ ಮಗು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮುನ್ನೂರು ಗ್ರಾಮದ ಸಂತೋಷ್ ನಗರದ ಮಸೀದಿ ಬಳಿ ಸೋಮವಾರ ಸಂಜೆ ನಡೆದಿದೆ.ಮೃತ ಮಗುವಿನ ಸಹೋದರನಿಗೆ ತರಚು ಗಾಯಗಳಿಂದ ಪಾರಾಗಿದ್ದಾರೆ.
ಅಂಬ್ಲಿಮೊಗರು ಗ್ರಾಮದ ಸಣ್ಣ ಮದಕ ನಿವಾಸಿ ಅಶ್ರಫ್ ಆಯೇಷಾ ದಂಪತಿಗಳ ಪುತ್ರ ಐಮಾನ್ (3) ಮೃತಪಟ್ಟ ಮಗುವಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಸಂತೋಷ್ ನಗರದ ಮಸೀದ ಬಳಿ ನಿವಾಸಿ ಇಲಿಯಾಸ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು, ಸಂಜೆ ಐಮಾನ್ ಮತ್ತು ಆತನ ಸಹೋದರ ಕಂಪೌಂಡ್ ಬಳಿಯ ಗೇಟ್ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮೃತ ಐಮಾನ್ ತನ್ನು ಸಹೋದರ ಆರು ವರ್ಷದ ಅಯಾನ್ನೊಂದಿಗೆ ಮನೆ ಎದುರಿನ ಕಂಪೌಂಡ್ನ ಗೇಟ್ನಲ್ಲಿ ಆಟವಾಡುತ್ತಿದ್ದರು. ಅಯಾನ್ ಗೇಟ್ನಲ್ಲಿ ಆಟವಾಡುತ್ತಿದ್ದಂತೆ ಗೇಟ್ನೊಂದಿಗೆ ಇಡೀ ಕಂಪೌಂಡ್ ಸಂಪೂರ್ಣ ಕುಸಿದು ಐಮಾನ್ ಮೇಲೆ ಬಿದ್ದಿದ್ದು, ಅಯಾನ್ ಸ್ವಲ್ಪದರಲ್ಲೇ ಪಾರಾಗಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಐಮಾನ್ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಮಗು ಮೃತಪಟ್ಟಿದ್ದು, ಗಾಯಗೊಂಡ ಅಯಾನ್ಗೆ ಚಿಕಿತ್ಸೆ ನೀಡಲಾಗಿದೆ. ಬಡಕುಟುಂಬದ ಅಶ್ರಪ್ ಚಾಲಕನಾಗಿದ್ದು, ಘಟನೆ ಸಂದರ್ಭದಲ್ಲಿ ಮನೆಯಲ್ಲಿ ತಾಯಿ ಮತ್ತು ಮಕ್ಕಳಿಬ್ಬರು ಇದ್ದರು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ](https://www.udayavani.com/wp-content/uploads/2024/07/HEALTH-415x287.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ](https://www.udayavani.com/wp-content/uploads/2024/07/HEALTH-150x104.jpg)
Mangaluru ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ
![1-ghgg](https://www.udayavani.com/wp-content/uploads/2024/07/1-ghgg-150x81.jpg)
T20 World Cup ವಿಜಯೋತ್ಸವವೆಲ್ಲ ಮುಗಿದ ಬಳಿಕ ಕೊಹ್ಲಿ-ಕೋಚ್ ಆತ್ಮೀಯ ಅಪ್ಪುಗೆ
![Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ](https://www.udayavani.com/wp-content/uploads/2024/07/ROAD-HIGHWAY-150x108.jpg)
Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ
![ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ](https://www.udayavani.com/wp-content/uploads/2024/07/byndoor-2-150x91.jpg)
Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ
![Rain-M](https://www.udayavani.com/wp-content/uploads/2024/07/Rain-M-150x90.jpg)
Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ಜು.6 ರಂದು ರಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.