![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Mar 14, 2024, 7:10 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ “ಯುವ ನ್ಯಾಯ’ ಗ್ಯಾರಂಟಿಗಳನ್ನು ಪ್ರಕಟಿ ಸಿದ್ದ ಕಾಂಗ್ರೆಸ್ ಈಗ ಮಹಿಳಾ ಮತದಾರರನ್ನು ಸೆಳೆಯಲು “ನಾರಿ ನ್ಯಾಯ’ ಭರವಸೆಗಳನ್ನು ಪ್ರಕಟಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಗ್ಯಾರಂಟಿ ಯೋಜನೆಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
“ನಮ್ಮ ಗ್ಯಾರಂಟಿಗಳು ಖಾಲಿ ಭರವಸೆಗಳಲ್ಲ, ಸುಳ್ಳುಹೇಳಿಕೆಗಳಲ್ಲ. ನಮ್ಮ ರಾಜ ಕೀಯ ವಿರೋಧಿಗಳು ಹುಟ್ಟುವು ದಕ್ಕಿಂತಲೂ ಮೊದಲು ಪ್ರಣಾಳಿಕೆ ಗಳನ್ನು ತಯಾರಿಸಿ, ಅವುಗಳನ್ನು ಈಡೇರಿಸುವ ಸಂಪ್ರದಾಯ ನಮ್ಮದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ನಾರಿ ನ್ಯಾಯ ಭರವಸೆಗಳು
1.ಮಹಾಲಕ್ಷ್ಮೀ ಗ್ಯಾರಂಟಿ: ಈ ಯೋಜನೆಯಡಿ ಬಡಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಆರ್ಥಿಕ ನೆರವು.
2.ಮಹಿಳೆಯರಿಗೆ ಶೇ. 50 ಮೀಸಲಾತಿ: “ಅರ್ಧ ಜನಸಂಖ್ಯೆ-ಪೂರ್ತಿ ಹಕ್ಕು’ ಹೆಸರಿನ ಇನ್ನೊಂದು ಭರವಸೆಯಲ್ಲಿ ಕೇಂದ್ರ ಸರಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ.
3.ಶಕ್ತಿ ಸಮ್ಮಾನ್: ಆಶಾ, ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುವ ಕೇಂದ್ರದ ಪಾಲನ್ನು ದುಪ್ಪಟ್ಟುಗೊಳಿಸುವುದು.
4.ಅಧಿಕಾರ ಮೈತ್ರಿ: ಮಹಿಳೆಯರಿಗೆ ತಮ್ಮ ಕಾನೂನು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ಗ್ರಾ.ಪಂ.ನಲ್ಲಿ ಸೆಮಿ ಲೀಗಲ್ ಪದಾಧಿಕಾರಿ ನೇಮಕ.
5.ಸಾವಿತ್ರಿಬಾಯಿ ಫುಲೆ ಹಾಸ್ಟೆಲ್: ಪ್ರತೀ ಜಿಲ್ಲಾ ಕೇಂದ್ರದಲ್ಲಿ ಒಂದರಂತೆ ಉದ್ಯೋಗಸ್ಥ ಮಹಿಳೆಯರಿಗೆ ಮೀಸಲಾದ ಹಾಸ್ಟೆಲ್ಗಳನ್ನು ದುಪ್ಪಟ್ಟು ಮಾಡುವುದು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.