ISIS: ನಕಲಿ ಬಿಲ್ ಸೃಷ್ಟಿಸಿ ಐಸಿಸ್ಗೆ ಹಣ ಸಂಗ್ರಹ!
ಮತಾಂಧ ಉತ್ತರ ರೈಲ್ವೇ ಗುಮಾಸ್ತನಿಂದ ದುಷ್ಕೃತ್ಯ ನೊಯ್ಡಾ ನಿವಾಸಿ ನಾಪತ್ತೆ, ಬಂಧನಕ್ಕಾಗಿ ಶೋಧ
Team Udayavani, Dec 26, 2023, 12:03 AM IST
ಹೊಸದಿಲ್ಲಿ: ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಇತ್ತೀಚೆಗೆ ಮಹಾರಾಷ್ಟ್ರ, ಕರ್ನಾಟಕ ಸೇರಿ ಒಟ್ಟು 44 ಸ್ಥಳಗಳಲ್ಲಿ ದಾಳಿ ನಡೆಸಿ ನಿಷೇಧಿತ ಉಗ್ರ ಸಂಘ ಟನೆ ಐಸಿಸ್ನ ಒಟ್ಟು 15 ಮಂದಿ
ಯನ್ನು ಬಂಧಿಸಿದೆ. ಗಮನಾರ್ಹ ಸಂಗತಿಯೆಂದರೆ ಈ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಉತ್ತರ ರೈಲ್ವೇಯ ಗುಮಾಸ್ತನೊಬ್ಬ ತಲೆತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ಹಲವು ತಂಡಗಳು ಶೋಧ ನಡೆಸುತ್ತಿವೆ. ಈತ ನಕಲಿ ವೈದ್ಯಕೀಯ ಬಿಲ್ಗಳನ್ನು ತಯಾರು ಮಾಡಿ ಇಲಾಖೆಗೆ ಸಲ್ಲಿಸುತ್ತಿದ್ದ. ಪಾವತಿಯಾಗಬೇಕಾದ ಮೊತ್ತಕ್ಕೆ ಐಸಿಸ್ ಉಗ್ರರ ಖಾತೆಯ ವಿವರಗಳನ್ನು ನೀಡಿದ್ದ. ಈ ಹಣವನ್ನು ಉಗ್ರರು ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಿಕೊಳ್ಳಲು ಬಳಸಿಕೊಳ್ಳುತ್ತಿದ್ದರು.
ಏನಿದು ನಕಲಿ ಬಿಲ್ ವಂಚನೆ?
ಉತ್ತರಪ್ರದೇಶದ ನೊಯ್ಡಾ ನಿವಾಸಿಯಾಗಿದ್ದ ಈ “ಗುಮಾಸ್ತ”ನ ತಲೆಗೆ ಐಸಿಸ್ ಉಗ್ರರು ಮತೀಯ ವಿಷವನ್ನು ತುಂಬಿದ್ದರು. ಪರಿಣಾಮವಾಗಿ ಆತ ಉಗ್ರರಿಗೆ ಹಣಕಾಸು ನೆರವು ನೀಡಲು ಆರಂಭಿ ಸಿದ್ದ. ಇದಕ್ಕಾಗಿ ಆತ ಕಂಡುಕೊಂಡ ಮಾರ್ಗ ನಕಲಿ ವೈದ್ಯಕೀಯ ಬಿಲ್ಗಳನ್ನು ಸಿದ್ಧಪಡಿಸಿ ರೈಲ್ವೇ ಇಲಾಖೆಗೆ ಸಲ್ಲಿಸುವುದು. ಆ ಹಣ ಉಗ್ರರ ಖಾತೆ ಸೇರಿಕೊಳ್ಳುತ್ತಿತ್ತು ಎಂದು ಮೂಲಗಳು ಹೇಳಿವೆ.
ಗೊತ್ತಾದದ್ದು ಹೇಗೆ?
ಅಕ್ಟೋಬರ್ ತಿಂಗಳಿನಲ್ಲಿ ಐಸಿಸ್ಗೆ ಸೇರಿದ ಮೂವರು ಉಗ್ರರಾದ ಶಹನವಾಜ್ ಆಲಮ್, ಮೊಹಮ್ಮದ್ ರಿಜ್ವಾನ್ ಅಶ್ರಫ್, ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಈ ಪ್ರಕರಣದ ತನಿಖೆ ಎನ್ಐಎ ಹೆಗಲೇರಿತು. ಆ ವೇಳೆ ಉಗ್ರರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಯಿತು. ಆಗ ಒಂದೇ ಮೂಲದಿಂದ ನಿರಂತರವಾಗಿ ಹಣ ಬರುವುದು ಪತ್ತೆಯಾಯಿತು. ಇದನ್ನು ವಿಚಾರಣೆ ಮಾಡಿದಾಗ ಉತ್ತರ ರೈಲ್ವೇ ವಲಯದ ವಿತ್ತ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತನೊಬ್ಬ ಇಂತಹ ವ್ಯವಸ್ಥೆ ಮಾಡಿರುವುದು ಪತ್ತೆಯಾಯಿತು.
ಇದನ್ನು ಉತ್ತರ ರೈಲ್ವೇ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅವರು ದಿಲ್ಲಿಯ ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ದೂರಿನಲ್ಲಿ ಆಂತರಿಕ ಅವ್ಯವಹಾರ ಎಂದಷ್ಟೇ ಮಾಹಿತಿ ನೀಡಲಾಗಿದ್ದು, ಗುಮಾಸ್ತ ಐಸಿಸ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಮಾಹಿತಿ ಇಲ್ಲ.
ಬಂಧಿತರು ಮಹಾರಾಷ್ಟ್ರದವರು
ಎನ್ಐಎಯಿಂದ ಇತ್ತೀಚೆಗೆ ಬಂಧಿತರಾಗಿ ರುವ ಎಲ್ಲ 15 ಮಂದಿಯೂ ಮಹಾರಾಷ್ಟ್ರದ ಥಾಣೆಯವರು. ಇವರೆಲ್ಲ ಪಾದ್ಘಾ ಬೊರಿವಿಲಿ ಯಿಂದ ಉಗ್ರ ಕೃತ್ಯ ನಡೆಸಲು ಸಂಚು ನಡೆಸುತ್ತಿ ದ್ದರು. ಈ ಘಟಕಕ್ಕೆ 63 ವರ್ಷದ ಸಖೀಬ್ ನಾಚನ್ ಮುಖ್ಯಸ್ಥನಾಗಿದ್ದ. ಈತನ ಮೇಲೆ 12 ಕೇಸ್ಗಳು ದಾಖಲಾಗಿವೆ. ಈತ 1990 ಮತ್ತು 2002-03ರ ಮುಂಬಯಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದ. ಎರಡೂ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿ, 2017ರಲ್ಲಿ ಬಿಡುಗಡೆಯಾಗಿದ್ದ. ಈಗ ಮತ್ತೆ ಎನ್ಐಎನಿಂದ ಬಂಧಿತನಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.