ಎಚ್ಚರ! ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚುವ ಸಾಧ್ಯತೆಯಿದೆ : ಭಾಸ್ಕರ್ ರಾವ್


Team Udayavani, Jun 1, 2020, 11:05 PM IST

ಎಚ್ಚರ! ರಾಜ್ಯದಲ್ಲಿ ಕ್ರೈಮ್ ಹೆಚ್ಚುವ ಸಾಧ್ಯತೆಯಿದೆ : ಭಾಸ್ಕರ್ ರಾವ್

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದರಿಂದ ತಮ್ಮ ಮತ್ತು ತಮ್ಮವರ ರಕ್ಷಣೆ ತಾವೇ ಮಾಡಿಕೊಳ್ಳಬೇಕಾಗಿದೆ ಸಾಕಷ್ಟು ಮಂದಿಗೆ ಕೆಲಸವಿಲ್ಲದೇ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಯಾವ ಕೃತ್ಯಕ್ಕಾದರೂ ಪ್ರಚೋದನೆ ಸಂಭವಿಸುವ ಸಾಧ್ಯತೆ ಇದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಹೀಗಾಗಿ ಕೆಲವೊಂದು ಅಗತ್ಯ ಅಂಶಗಳನ್ನು ಮನದಲ್ಲಿಟ್ಟುಕೊಂಡಿರಲು ಅವರು ಮನವಿ ಮಾಡಿದ್ದಾರೆ .

1. ಜನರು ತುಂಬಾ ಜಾಗರೂಕರಾಗಿರಬೇಕು ಮತ್ತು ಮನೆಯಲ್ಲಿರುವವರು, ಸ್ಕೂಲ್​ಗೆ ಹೋಗುವ ಮಕ್ಕಳು, ಕಾಲೇಜಿಗೆ ಹೋಗುವ ಹುಡುಗ ಅಥವಾ ಹುಡುಗಿಯರು, ಕೆಲಸಕ್ಕೆ ಹೋಗುವ ಹೆಂಗಸರು ಅಥವಾ ಗಂಡಸರು ಜಾಗ್ರತೆಯಿಂದಿರಬೇಕು .

2. ಯಾರೂ ಸಹ ದುಬಾರಿ ವಾಚ್ ಧರಿಸಬೇಡಿ .

3. ದುಬಾರಿ ಬೆಲೆಯ ಸರಗಳು, ಬಳೆಗಳು, ಕಿವಿಯೋಲೆ ಧರಿಸಬೇಡಿ ಮತ್ತು ನಿಮ್ಮ ಕೈಚೀಲದ ಬಗ್ಗೆ ಜೋಪಾನವಿರಲಿ .

4. ಗಂಡಸರೇ ಅದಷ್ಟೂ ದುಬಾರಿ, ವಾಚ್, ಬ್ರಾಸ್ಲೈಟ್ ಮತ್ತು ಚೈನ್ ಧರಿಸುವುದರಿಂದ ದೂರವಿರಿ .

5. ಸಾರ್ವಜನಿಕವಾಗಿ ಹೆಚ್ಚು ಮೊಬೈಲ್ ಪೋನ್ ಬಳಕೆ ಮಾಡಬೇಡಿ. ಅದಷ್ಟೂ ಕಡಿಮೆ ಬಳಸಿ .

6. ಯಾವುದೇ ಅಪರಿಚಿತರಿಗೆ ತಮ್ಮ ವಾಹನದಲ್ಲಿ ಡ್ರಾಪ್ ನೀಡಬೇಡಿ .

7. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಡಿ .

8. ಚಾಲನೆಯ ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಗ್ಗೆ ಎಚ್ಚರವಹಿಸಿ .

9. ಆಗಾಗ ಮನೆಗೆ ಕರೆ ಮಾಡಿ ನಿಮ್ಮ ಕುಟುಂಬದವರ ಜೊತೆ ಮಾತನಾಡಿ, ಹಿರಿಯರು, ಮಕ್ಕಳ ಬಗ್ಗೆ ತಿಳಿದುಕೊಳ್ಳಿ .

10. ನಿಮ್ಮ ಮನೆಯವರಿಗೆ ತಿಳಿಸಿ, ಹಿರಿಯರು ಮಹಿಳೆಯರು ಬಾಗಿಲು ತೆಗೆಯುವ ವೇಳೆ ಸುರಕ್ಷತೆ ವಹಿಸಲು ತಿಳಿಸಿ, ಗೇಟ್ ಅಥವಾ ಗ್ರಿಲ್ ಲಾಕ್ ಮಾಡಿರಿ . ಯಾವುದೇ ಪಾರ್ಸಲ್ ತೆಗೆದುಕೊಳ್ಳುವ ವೇಳೆ ಗೇಟ್ ಅಥವಾ ಗ್ರಿಲ್ ಬಳಿ ತುಂಬಾ ಹತ್ತಿರ ಹೋಗಬೇಡಿ .

11. ಮನೆಯಾಚೆ ಹೋಗುವ ಮಕ್ಕಳಿಗೆ ಅದಷ್ಟೂ ಬೇಗ ಮನೆಗೆ ವಾಪಸ್ ಆಗಲು ತಿಳಿಸಿ .

12. ಮನೆಗೆ ಹೋಗುವಾಗ ಯಾವುದೇ ಶಾರ್ಟ್​ಕಟ್ ರಸ್ತೆಗಳನ್ನ ಬಳಸಬೇಡಿ, ಅದಷ್ಟೂ ಪ್ರಮುಖ ರಸ್ತೆಗಳನ್ನೇ ಬಳಸಿ .

13. ಯುವಕರು ಮನೆಯಾಚೆ ಇರುವ ವೇಳೆ ಆದಷ್ಟೂ ನಿಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಗಮನವಿಡಿ .

14. ಆದಷ್ಟೂ ಮೊಬೈಲ್​ನಲ್ಲಿ ಎಮರ್ಜೆನ್ಸಿ ನಂಬರ್ ಇಟ್ಟುಕೊಂಡಿರಿ .

15. ಆದಷ್ಟೂ ಜನರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಅಲ್ಲದೇ ಸಾರ್ವಜನಿಕರು ಆದಷ್ಟೂ ಮಾಸ್ಕ್ ಧರಿಸಿರಬೇಕು .

16. ಕ್ಯಾಬ್ ಸರ್ವೀಸ್ ಪಡೆಯುವವರು ಆದಷ್ಟೂ ನಿಮ್ಮ ಟ್ರಾವೆಲ್ ಡಿಟೇಲ್ಸ್ ಅನ್ನು ನಿಮ್ಮ ಪೋಷಕರಿಗೆ, ಸಂಬಂಧಿಕರಿಗೆ, ಒಡಹುಟ್ಟಿದವರಿಗೆ, ಸ್ನೇಹಿತರಿಗೆ, ಕೇರ್ ಟೇಕರ್ಸ್ ಜೊತೆ ಹಂಚಿಕೊಂಡು ಓಡಾಡಿ .

17. ಸರ್ಕಾರಿ ವಾಹನದ ಸರ್ವೀಸ್ ಹೆಚ್ಚು ಬಳಸಲು ಯತ್ನಿಸಿ. ಅದರಲ್ಲೂ ಹೆಚ್ಚು ರಷ್ ಇರುವ ಬಸ್​ಗಳನ್ನು ಸಹ ಅವೈಡ್ ಮಾಡಿ.

18. ಆದಷ್ಟೂ ಬೆಳಗ್ಗೆ 6 ಗಂಟೆಯ ನಂತರ ವಾಕ್​ಗೆ ಹೋಗಿ, ಸಂಜೆ 8ರ ಒಳಗೆ ವಾಕ್ ಮುಗಿಸಿ ಮನೆ ಸೇರಿಕೊಳ್ಳಿ, ಅದಷ್ಟೂ ಮುಖ್ಯ ರಸ್ತೆಯ ಅಕ್ಕ-ಪಕ್ಕದಲ್ಲೇ ವಾಕ್ ಮಾಡಿ .

20. ಮಾಲ್, ಬೀಚ್, ಪಾರ್ಕ್​ಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ .

21. ಚಿಕ್ಕ ಮಕ್ಕಳನ್ನು ಟ್ಯೂಷನ್​ಗೆ ದೊಡ್ಡವರೇ ಕರೆದುಕೊಂಡು ಹೋಗಿ ಕರೆದುಕೊಂಡು ಬನ್ನಿ.

22. ಬೆಲೆಬಾಳುವ ವಸ್ತುಗಳನ್ನ ವಾಹನದಲ್ಲಿ ಇಡಬೇಡಿ .

ಟಾಪ್ ನ್ಯೂಸ್

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.