![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 22, 2022, 12:17 AM IST
ಮಂಗಳೂರು: ನಗರದ ಚಿಲಿಂಬಿಗುಡ್ಡೆ ಬಳಿ ರವಿವಾರ ತಡರಾತ್ರಿ ಪೊಲೀಸರ ಮೇಲೆ ಹಲ್ಲೆಗೈದ ಮೂವರು ಆರೋಪಿಗಳಿಗೆ ನ್ಯಾಯಾಲಯವು ಜು. 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ರವಿವಾರ ತಡರಾತ್ರಿ ಚಿಲಿಂಬಿಗುಡ್ಡೆ ಬಳಿ ಮದ್ಯಪಾನ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ 8ರಿಂದ 10 ಮಂದಿ ಯುವಕರ ಗುಂಪಿನ ಬಳಿ ತೆರಳಿ ವಿಚಾರಿಸಿದ ಪೊಲೀಸರ ಮೇಲೆ ದಾಳಿ ನಡೆದಿತ್ತು. ಓರ್ವ ಯುವಕ ಪೊಲೀಸರ ಮೇಲೆ ಬೈಕ್ ಹತ್ತಿಸಲು ಯತ್ನಿಸಿದ್ದ.
ಘಟನೆಯಲ್ಲಿ ಪೊಲೀಸ್ ಸಿಬಂದಿ ವೆಂಕಟೇಶ್ ಮತ್ತು ಧನಂಜಯ್ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಚಿಲಿಂಬಿಗುಡ್ಡೆಯ ದುರ್ಗೇಶ್, ಪ್ರಜ್ವಿತ್, ರಕ್ಷಿತ್ ಅವರನ್ನು ಬಂಧಿಸಿದ್ದರು.
ಇತರ ಆರೋಪಿಗಳಿಗೆ ಶೋಧ: ಇತರ ಸುಮಾರು 7 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಸಂಘಟನೆಯೊಂದಕ್ಕೆ ಸೇರಿದವರೆಂದು ತಿಳಿದುಬಂದಿದೆ.
You seem to have an Ad Blocker on.
To continue reading, please turn it off or whitelist Udayavani.