![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 6, 2021, 4:41 PM IST
ಆನೇಕಲ್: ತಾಲೂಕಿನ ಜಿಗಣಿ ಯಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಜನ ಗಾಯಗೊಂಡಿರುವ ಅವಘಡ ಶನಿವಾರ ಬೆಳಗ್ಗೆ ನಡೆದಿದೆ.
ಗಾಯಾಳುಗಳು ಕಾರ್ಮಿಕರಾದ ಜಗದೀಶ್, ಶಾಂತಿಬೈ, ಪ್ರಕಾಶ್, ಕಾಡು,ಜೈಮುಲ್, ಮಂಜು,ವಲ್ಲಿ ಎಂದು ತಿಳಿದು ಬಂದಿದೆ.
ಜಿಗಣಿ ಪೊಲೀಸ್ ಠಾಣೆ ಹಿಂಭಾಗದ ಬಾಡಿಗೆ ಮನೆಯಲ್ಲಿ 15 ಕೆಜಿ ಸಿಲಿಂಡರ್ ಲಿಕೇಜ್ ಆಗಿದ್ದು, ಬೆಳಿಗ್ಗೆ ಮನೆಯಲ್ಲಿ ಗ್ಯಾಸ್ ತುಂಬಿ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಆದ ರಭಸಕ್ಕೆ ಮನೆಯ ಗೋಡೆಗಳು ದ್ವಂಸಗೊಂಡಿದ್ದು, ಬಿಲ್ಡಿಂಗ್ ನಲ್ಲಿದ್ದ 6 ಮನೆಗಳ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಅಕ್ಕಪಕ್ಕದ ಬಿಲ್ಡಿಂಗ್ ಗಳಿಗೂ ಹಾನಿಯಾಗಿದೆ. ಸ್ಪೋಟದ ಬಳಿಕ ಮನೆ ಹೊತ್ತಿ ಉರಿದಿದೆ. ಸ್ಪೋಟದ ಬಳಿಕ ಅಕ್ಕಪಕ್ಕದ ನಿವಾಸಿಗಳು ಆತಂಕ ಗೊಂಡಿದ್ದರು.
ಕಂಬಳಿ ಹಾಗೂ ಬ್ಯಾಗ್ ವ್ಯಾಪಾರ ಮಾಡುತ್ತಿದ್ದ ಉತ್ತರ ಭಾರತ ಮೂಲದ ದಂಪತಿ ಮನೆಗೆ ಕಳೆದ ರಾತ್ರಿ ದೀಪಾವಳಿ ಹಿನ್ನೆಲೆ ಮನೆಗೆ ಐದು ಜನ ಸ್ನೇಹಿತರು ಮನೆಗೆ ಆಗಮಿಸಿದ್ದರು.
. ಗಾಯಗೊಂಡವರಿಗೆ ಜಿಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಜುನಾಥ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ ಎರಡು ವರ್ಷದಿಂದ ಬಾಡಿಗೆ ಮನೆಯಲ್ಲಿ ಕಾರ್ಮಿಕರು ವಾಸವಿದ್ದರು.
ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.