Dandeli: ಅಂಬೇವಾಡಿಯ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ಜನತೆಯಲ್ಲಿ ಹೆಚ್ಚಿದ ಆತಂಕ
Team Udayavani, Aug 19, 2024, 3:14 PM IST
ದಾಂಡೇಲಿ: ಐವರನ್ನು ಬಲಿ ಪಡೆದ ನಂತರ ದಾಂಡೇಲಿಯ ಮೊಸಳೆಗಳು ಸಲುವಾಗಿ ನಗರದಲ್ಲಿ ಮೊಸಳೆಗಳ ಬಗ್ಗೆ ಇದೀಗ ಭಯದ ವಾತಾವರಣ ನಿರ್ಮಾಣವಾಗಿದೆ.
ಅಂದ ಹಾಗೆ ಇಂದು ಸೋಮವಾರ ನಗರದ ಅಂಬೇವಾಡಿಯ ನಾಗದೇವತಾ ದೇವಸ್ಥಾನದ ಹತ್ತಿರ ಜಿ+2 ಮನೆಗಳ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಮಗಾರಿ ನಿಮಿತ್ತ ತೆಗೆದ ಹೊಂಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಅಂದಾಜು 4 ಅಡಿ ಉದ್ದದ ಮೊಸಳೆಯು ನೀರಿನಿಂದ ಹೊರಬಂದು ವಿಶ್ರಾಂತಿ ಪಡೆಯುತ್ತಿರುವಾಗ ಸ್ಥಳಿಯ ನಿವಾಸಿ ವಿಜಯ ಮಾಶಾಳ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಮೊಸಳೆ ಪ್ರತ್ಯಕ್ಷವಾಗಿರುವುದು ಜನವಸತಿ ಪ್ರದೇಶದ ಹತ್ತಿರದಲ್ಲೆ ಆಗಿರುವುದರಿಂದ ಸ್ಥಳೀಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಇನ್ನೂ ಇಲ್ಲೇ ಹತ್ತಿರದ ರಸ್ತೆಯಲ್ಲಿ ಶಾಲೆಯು ಕೂಡ ಇದ್ದು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆಗೆ ಹೋಗಿ ಬರುತ್ತಾರೆ. ಇಂಥ ಸಂದರ್ಭದಲ್ಲಿ ಏನಾದರೂ ಅನಾಹುತ ನಡೆದರೆ ಹೊಣೆ ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola: ಸಿಸಿ ಕೆಮರಾ ನಿಷ್ಕ್ರಿಯಗೊಳಿಸಿ ಶಿಕ್ಷಣ ಸಂಸ್ಥೆಯಿಂದ ಲಕ್ಷಾಂತರ ರೂ. ದೋಚಿದ ಕಳ್ಳರು!
Nagamangala Case; ಹಿಂದೂಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ: ಹರಿಪ್ರಕಾಶ ಕೋಣೆಮನೆ
Sirsi: ಹಕ್ಕು ಪ್ರಾಪ್ತವಾಗುವವರೆಗೂ, ಹೋರಾಟದ ಘರ್ಜನೆ ನಿಲ್ಲಿಸದಿರಿ; ಕಾಗೋಡ ತಿಮ್ಮಪ್ಪ
Sirsi ಟಿಆರ್ಸಿಗೆ ರಾಜ್ಯಮಟ್ಟದ ಪ್ರಶಸ್ತಿ
Eco Park: ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ದಾಂಡೇಲಿಯ ದಂಡಕಾರಣ್ಯ ಇಕೋ ಪಾರ್ಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.