Padubidri: ವೆಲ್ಡಿಂಗ್ ಕೆಲಸದ ವೇಳೆ ಕೆಳಕ್ಕೆ ಬಿದ್ದು ಸಾವು: ಇಬ್ಬರ ವಿರುದ್ಧ ಪ್ರಕರಣ
Team Udayavani, Aug 14, 2024, 7:42 PM IST
ಪಡುಬಿದ್ರಿ: ತೆಂಕ ಎರ್ಮಾಳಿನಲ್ಲಿ ಆ. 12ರಂದು ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ 12ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ತಲೆಗೆ ತೀವ್ರತರ ಗಾಯಗೊಂಡಿದ್ದ ಉತ್ತರಪ್ರದೇಶದ ಧೀರಜ್ ಚೌಧುರಿ(19) ಎಂಬ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲದ ಆಸ್ಪತ್ರೆಯಲ್ಲಿ ಮಂಗಳವಾರ (ಆ. 13) ಮುಂಜಾವದ ವೇಳೆ ಸಾವಿಗೀಡಾಗಿದ್ದಾರೆ.
ಆತನ ಅಣ್ಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಕೆಲಸದ ಉಸ್ತುವಾರಿ ನಿರ್ವಹಿಸಿದ್ದ ರಾಮಚಂದ್ರ ಮಾಬಿನ್ ಹಾಗೂ ಮಹಮ್ಮದ್ ರಫೀಕ್ ಎಂಬವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಕೆಲಸದ ವೇಳೆ ಉಸ್ತುವಾರಿ ಮಂದಿ ಮಾಡಿರುವ ನಿರ್ಲಕ್ಷ್ಯತೆ ಹಾಗೂ ಸುರಕ್ಷತಾ ವಿಧಾನಗಳನ್ನು ಅನುಸರಿಸಿಲ್ಲದ ಕಾರಣ ಈ ಸಾವು ಸಂಭವಿಸಿರುವುದಾಗಿ ಧೂರಲ್ಲಿ ತಿಳಿಸಲಾಗಿದೆ. ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.