ಸದಾ ಗಿಜಿಗಿಡುತ್ತಿದ್ದ ಮಂಗಳೂರಿನಲ್ಲಿ ಈಗ ಗಾಢ ಮೌನ !


Team Udayavani, Apr 17, 2020, 6:20 AM IST

ಸದಾ ಗಿಜಿಗಿಡುತ್ತಿದ್ದ ಮಂಗಳೂರಿನಲ್ಲಿ ಈಗ ಗಾಢ ಮೌನ !

ವಿಶೇಷ ವರದಿ-ಮಂಗಳೂರು: ಸುಮಾರು ಒಂದು ತಿಂಗಳಿನಿಂದ ಮಂಗಳೂರು ಮಹಾನಗರ ಸ್ತಬ್ಧಗೊಂಡಿದೆ. ತುಳುನಾಡಿನ ವ್ಯಾಪಾರ-ವಹಿವಾಟು, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಮಾಲ್‌ಗ‌ಳು, ಚಿತ್ರ ಮಂದಿರ, ಸೆಂಟ್ರಲ್‌ ಮಾರ್ಕೆಟ್‌, ಶಾಲಾ- ಕಾಲೇಜುಗಳು, ಪ್ರಮುಖ ಬೀದಿಗಳು, ಬಸ್‌ ನಿಲ್ದಾಣಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ನಗರಕ್ಕೆ ಈ ಹಿಂದಿದ್ದ ಗತ್ತು ಈಗಿಲ್ಲ. ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಮಾತ್ರ ಬೆರಳೆಣಿಕೆಯ ಮಂದಿ ಕಂಡು ಬರುತ್ತಿದ್ದಾರೆ.

ಮೀನುಗಾರಿಕಾ ಬಂದರು ಸ್ತಬ್ಧ
ಸದಾ ಜನಜಂಗುಳಿಯಿಂದಿರುವ ಬಂದ ರಿನ ದಕ್ಕೆಯ ಮೀನುಗಾರಿಕೆ ಬಂದರು ಒಂದು ತಿಂಗಳಿನಿಂದ ಸ್ತಬ್ಧಗೊಂಡಿದೆ. ಸಾಮಾನ್ಯ ದಿನಗಳಲ್ಲಿ ಬಂದರಿನಲ್ಲಿ ಮೀನು ಗಾರ ಕಾರ್ಮಿಕರು, ಐಸ್‌ ಪ್ಲಾಂಟ್‌ ಮಂದಿ, ಗ್ರಾಹಕರು ಸಹಿತ ಮೂರರಿಂದ ನಾಲ್ಕು ಸಾವಿರ ಮಂದಿ ಕಂಡು ಬರುತ್ತಿದ್ದರು. ಈಗ ಬಂದರಿನಲ್ಲಿ ಲಂಗರು ಹಾಕಿರುವ ನೂರಾರು ಬೋಟ್‌ಗಳಷ್ಟೇ ಕಾಣಸಿಗುತ್ತಿವೆ. ಜತೆಗೆ ಹೊರ ರಾಜ್ಯಗಳ ಕೆಲವು ಮೀನುಗಾರರು ಮಾತ್ರ ಅಲ್ಲೇ ಅನಿವಾರ್ಯವಾಗಿ ಉಳಿದು ಕೊಂಡಿದ್ದಾರೆ.

ಬಿಕೋ ಎನ್ನುತ್ತಿರುವ ಬಸ್‌ ನಿಲ್ದಾಣ
ನಗರದಲ್ಲಿ ಅತಿ ಹೆಚ್ಚು ಜನರು ಹಾಗೂ ವಾಹನಗಳು ಬಂದು ಹೋಗುತ್ತಿದ್ದ ಬಿಜೈಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಈಗ ಬಿಕೋ ಎನ್ನುತ್ತಿದೆ. ಮಾಮೂಲಿ ದಿನಗಳಲ್ಲಿ ಸಾವಿರಾರು ಮಂದಿ ಓಡಾಡುತ್ತಿದ್ದ ಇಲ್ಲಿ ಈಗ ಪಾರ್ಕ್‌ ಮಾಡಿರುವ ಬಸ್‌ಗಳಷ್ಟೇ ಇವೆ. ಮುಖ್ಯದ್ವಾರದಲ್ಲಿ ಭದ್ರತಾ ಸಿಬಂದಿ ಸೇವೆಯಲ್ಲಿದ್ದಾರೆ.

ನಗರಕ್ಕೆ ಹೊಸ ಲವಲವಿಕೆ ನೀಡುತ್ತಿದ್ದ ಸಿಟಿ ಬಸ್‌ ನಿರ್ವಾಹಕರ ದನಿ ಕೇಳದೆ ದಿನ ಹಲವು ಸಂದಿವೆ. ದಿನಂಪ್ರತಿ 350ಕ್ಕೂ ಮಿಕ್ಕಿ ಬಸ್‌ಗಳು ಒಂದೇ ಕಡೆಯಿಂದ ಸಂಚಾರ ನಡೆಸುತ್ತಿದ್ದ ಸಿಟಿ ಬಸ್‌ ನಿಲ್ದಾಣದಲ್ಲಿ ಗಾಢ ಮೌನ ಆವರಿಸಿದೆ. ಕೆಲವು ಮೆಡಿಕಲ್‌ ಶಾಪ್‌ಗ್ಳನ್ನು ಹೊರತುಪಡಿಸಿದರೆ ಇತರ ಅಂಗಡಿಗಳು ಮುಚ್ಚಿವೆ. ಲಾಕ್‌ಡೌನ್‌ ಆರಂಭವಾದಾಗಿನಿಂದ ಪಕ್ಕದ ಖಾಸಗಿ ಬಸ್‌ ನಿಲ್ದಾಣದಲ್ಲಿ 30ಕ್ಕೂ ಮಿಕ್ಕಿದ ಬಸ್‌ಗಳನ್ನು ನಿಲ್ಲಿಸಲಾಗಿದೆ.

ಕಾವಲಿಗೆ ಭದ್ರತಾ ಸಿಬಂದಿ
ನಗರದಲ್ಲಿರುವ ಪ್ರಮುಖ 3 ಮಾಲ್‌ಗ‌ಳು ಬಾಗಿಲು ಮುಚ್ಚಿವೆ. ಹಿಂದೆಲ್ಲ ವೀಕೆಂಡ್‌ನ‌ಲ್ಲಿ ಮಾಲ್‌ ಸುತ್ತಿ, ಸಿನೆಮಾ ವೀಕ್ಷಿಸುತ್ತಿದ್ದ ಮಂದಿ ಈಗ ಕೊರೊನಾಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನಗರದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು, ಬಟ್ಟೆ, ಚಿನ್ನದ ಮಳಿಗೆ, ವಾಹನಗಳ ಶೋ ರೂಂಗಳು, ಕೆಲವು ಸರಕಾರಿ ಕಚೇರಿಗಳು ಮುಚ್ಚಿದ್ದು, ಕೇವಲ ಭದ್ರತಾ ಸಿಬಂದಿ ಮಾತ್ರ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೀದಿಗಳು ಖಾಲಿ
ನಗರದಲ್ಲಿ ಸಾಮಾನ್ಯ ದಿನಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಅದರಲ್ಲೂ ನಂತೂರು ವೃತ್ತ, ಎಂ.ಜಿ. ರಸ್ತೆ, ಹಂಪನಕಟ್ಟೆ, ಲಾಲ್‌ಬಾಗ್‌, ಕಂಕನಾಡಿ, ಪಂಪ್‌ವೆಲ್‌, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಸ್ಟೇಟ್‌ಬ್ಯಾಂಕ್‌ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಿರುತ್ತಿತ್ತು. ಆದರೆ ಲಾಕ್‌ಡೌನ್‌ ಆರಂಭವಾದಾಗಿನಿಂದ ಮಧ್ಯಾಹ್ನ 12 ಗಂಟೆ ಬಳಿಕ ವಾಹನ ಸಂಚಾರ ಬಂದ್‌ ಆಗಿರುತ್ತದೆ.

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

7

Mangaluru: ನಿತ್ಯ ಟ್ರಾಫಿಕ್‌ ಜಾಮ್‌ ಗೋಳು; ವಾಹನ ಸವಾರರ ಪರದಾಟ

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.