Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
Team Udayavani, Oct 29, 2024, 2:46 AM IST
ಉಡುಪಿ: ದೀಪಾವಳಿ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬೆಂಗಳೂರು ಉಡುಪಿ ಮಾರ್ಗದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿದೆ. ಬೆಂಗಳೂರಿನಿಂದ ಉಡುಪಿಗೆ 2 ರಾಜಹಂಸ ಹಾಗೂ 5 ಸಾರಿಗೆ ಬಸ್ಗಳು ಹಾಗೂ ಕುಂದಾಪುರಕ್ಕೆ 3 ರಾಜಹಂಸ, 2 ಅಶ್ವಮೇಧ ಹಾಗೂ 4 ಸಾರಿಗೆ ಬಸ್ಗಳು ಸಂಚರಿಸಲಿವೆ.
ಇದೇ ಬಸ್ಗಳು ಕುಂದಾಪುರ ಹಾಗೂ ಉಡುಪಿಯಿಂದ ಬೆಂಗಳೂರಿಗೆ ಸಂಚರಿಸಲಿವೆ. ಅಗತ್ಯ ಬಿದ್ದಲ್ಲಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಉಡುಪಿ ವಿಭಾಗದ ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.
ವಿಶೇಷ ರೈಲು
ಕುಂದಾಪುರ: ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರ ಭಾಗಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಕುಂದಾಪುರ ರೈಲು ಹಿತರಕ್ಷಣ ಸಮಿತಿ ಮತ್ತು ಉತ್ತರ ಕನ್ನಡ ರೈಲು ಸಮಿತಿಯು ಮನವಿ ಸಲ್ಲಿಸಿತ್ತು.
ಈ ರೈಲು ನ. 3ರಂದು ಅಪರಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು 12.50 ಕುಮಟ, ಅಪರಾಹ್ನ 2.40ಕ್ಕೆ ಕುಂದಾಪುರದಿಂದ ಹೊರಟು, ಮಧ್ಯಾಹ್ನ 3.30 ಉಡುಪಿ, ಪಡೀಲ್ ಬೈಪಾಸ್ ಮೂಲಕ ಬೆಂಗಳೂರನ್ನು ಸೋಮವಾರ ಬೆಳಗಿನ ಜಾವ 4ಕ್ಕೆ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TVK Party: ವಿಜಯ್ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ
Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…
Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ
Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್ ಪೂಂಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.