Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
1993ರಲ್ಲಿ ತಮ್ಮ ನೃತ್ಯಶಾಲೆ "ಪಾಯಲ್ ಡಾನ್ಸ್ ಅಕಾಡೆಮಿ'ಯನ್ನು ಸ್ಥಾಪನೆ
Team Udayavani, Sep 21, 2024, 2:15 PM IST
ಅಮೆರಿಕದ ಉತ್ತರ ಕ್ಯಾರೋಲಿನಾ ರಾಜ್ಯದ ಮೊರೀಸ್ವಿಲ್ ನಗರದ ಮೇಯರ್ ಟಿ.ಜೆ. ಕಾಲಿಯವರು ಇದೇ ಸೆ.7ರಂದು, ಕನ್ನಡ ಕಲಾಶ್ರೀ, ನೃತ್ಯಗುರು, ಕ್ರಿಕೆಟ್ ಪೋಷಕಿ, ಸಮಾಜ ಸೇವಕಿ ಸುಪ್ರಿಯಾ ದೇಸಾಯಿ ಅವರ ಸತತ ಮೂರು ದಶಕಗಳ ನಿರಂತರ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಮಾನ್ಯತಾ ಪತ್ರ (Proclamation) ಕೊಟ್ಟು ಸಮ್ಮಾನಿಸಿದರು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು 33 ವರ್ಷಗಳ ಹಿಂದೆ ಉತ್ತರ ಕ್ಯಾರೋಲಿನಾದ ರಿಸರ್ಚ್ ಟ್ರೈ ಆಂಗಲ್ ಪ್ರದೇಶಕ್ಕೆ ವಲಸೆ ಹೋಗಿ, ಅಪಾರ ಸಾಧನೆಗಳನ್ನು ಮತ್ತು ಸಮಾಜ ಸೇವೆಯನ್ನು ಮಾಡಿದ್ದಾರೆ. ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗುರು ಸುಪ್ರಿಯಾ ದೇಸಾಯಿಯವರು 1993ರಲ್ಲಿ ತಮ್ಮ ನೃತ್ಯಶಾಲೆ “ಪಾಯಲ್ ಡಾನ್ಸ್ ಅಕಾಡೆಮಿ’ಯನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸಿದ್ದಾರೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕ್ರಿಕೆಟ್ ಪ್ರಚಾರ ಮಾಡುವಲ್ಲಿ, ಬರಹಗಾರರಾಗಿ ಮತ್ತು ಕ್ರೀಡಾ ವಕ್ತಾರರಾಗಿ ಇವರು ವಹಿಸಿರುವ ಪಾತ್ರವು ಅಪಾರವಾಗಿದೆ. ಮೊರೀಸ್ವಿಲ್ ನಗರವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೇಂದ್ರವನ್ನಾಗಿ ರೂಪಿಸಲು ಹಗಳಿರಲು ದುಡಿದಿದ್ದಾರೆ.
ಕನ್ನಡ ಸೇವೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಗಿಟ್ಟಿರುವ ಇವರು ಪ್ರತಿಷ್ಠಿತ “ಅಕ್ಕ’ (ಅಮೆರಿಕನ್ ಕನ್ನಡ ಕೂಟಗಳ ಒಕ್ಕೂಟ) ಸಂಸ್ಥೆಯ ಸಂಸ್ಥಾಪಕ ಸದಸ್ಯರು ಹಾಗೂ ಮೊದಲ ಖಜಾಂಚಿ. ಹಲವಾರು ಅಕ್ಕ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುವಲ್ಲಿ ವಿವಿಧ ಕಮಿಟಿಗಳ ನಾಯಕತ್ವ ವಹಿಸಿದ್ದಾರೆ.
ಇವರು ಅತ್ಯುತ್ತಮ ನಾಯಕಿ. ಉತ್ತರ ಕ್ಯಾರೋಲಿನಾ ರಾಜ್ಯದ “ಸಂಪಿಗೆ’ ಕನ್ನಡ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿ ಮತ್ತು ಪ್ರಥಮ ಅಧ್ಯಕ್ಷೆಯಾಗಿ ಕನ್ನಡ ಸೇವೆಯನ್ನು ಮಾಡಿದ್ದಾರೆ. ಅವರ ಮೇಲಿನ ಎಲ್ಲ ಸಾಧನೆಗಳನ್ನು ಮೆಚ್ಚಿಕೊಂಡು, ಮೊರಿಸ್ವಿಲ್ಲ ನಗರವು ಆ.13ರಂದು ಇವರಿಗೆ ಸಮ್ಮಾನ ಪದಕ ಘೋಷಣೆ ಮಾಡಿತ್ತು. ಸೆ. 7ರಂದು ನಡೆದ ಸಮಾರಂಭದಲ್ಲಿ ಮೇಯರ್ ಟಿ.ಜೆ. ಕಾಲಿಯವರು ಸುಪ್ರಿಯಾ ದೇಸಾಯಿರ ಸಾಧನೆಗಳನ್ನು ಮೆಚ್ಚಿ, ಹೊಗಳಿ, ಪ್ರಶಸ್ತಿ ಪ್ರದಾನ ಮಾಡಿದರು.
ವರದಿ: ಬೆಂಕಿ ಬಸಣ್ಣ , ನ್ಯೂಯಾರ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು
Desi Swara: ಪದ್ಮಭೂಷಣ ಡಾ| ಶಿವತಾನು ಪಿಳ್ಳೈ ಅವರಿಂದ ಉಪನ್ಯಾಸ
Desi Swara: ಕರ್ನಾಟಕ ಸಂಘ ಕತಾರ್: ಚೊಚ್ಚಲ ಶಿಕ್ಷಕರ ದಿನಾಚರಣೆ ಸಮಾರಂಭ
Desi Swara: ದೋಹಾ- ಐಸಿಸಿಯಿಂದ ಶಿಕ್ಷಕರಿಗೆ ಗೌರವ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Vijayapura: ತಿರುಪತಿ ಲಡ್ಡು ಪಾವಿತ್ರ್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.