Desi Swara: ದೇವನೊಬ್ಬ ನಾಮ ಹಲವು-ನಿಸರ್ಗ ಸ್ವರ್ಗದಲ್ಲಿಅಂತರ್ಜಾತೀಯ ಸಮ್ಮೇಳನ

ಮತಗಳಿಗೂ ಭೂಮಿಗೂ ಇರುವ ಸಂಪರ್ಕವೇನು?

Team Udayavani, Aug 10, 2024, 2:20 PM IST

Desi Swara: ದೇವನೊಬ್ಬ ನಾಮ ಹಲವು-ನಿಸರ್ಗ ಸ್ವರ್ಗದಲ್ಲಿಅಂತರ್ಜಾತೀಯ ಸಮ್ಮೇಳನ

ಅಲ್ಲಾ ತುಮ್‌ಹೋ, ಈಶ್ವರ್‌ ತುಮ್‌ಹೋ, ತುಮ್‌ ಹೀ ಹೊ ರಾಮರಹೀಂ ……. ಹಾಡು ಪ್ರತಿಧ್ವನಿಸಿ ಮರಗಳ ಹಸುರಿನ ಹೊದ್ದಿಕೆಯ ತೂರಿ ತಲುಪಿತ್ತು ನೀಲಿ ಆಕಾಶವ ಕಮಾಲ್ಡೋಲಿ ಅನ್ನುವ ನಿಸರ್ಗ ಸ್ವರ್ಗದಲ್ಲಿ ಏರ್ಪಡಿಸಿದ್ದ ಅಂತರ್ಜಾತೀಯ ಸಮ್ಮೇಳನದಲ್ಲಿ. SAE ( segreteriato attivita’ ecumeniche) ಇದು ಒಂದು ಹಳೆಯ ಸಂಸ್ಥೆ. ಇದರ ಉದ್ದೇಶ ದೇವನೊಬ್ಬ ನಾಮಹಲವು, ಇದೇ ನಿಟ್ಟಿನಲ್ಲಿ ಎಲ್ಲ ಕ್ರೈಸ್ತ ಪಂಗಡಗಳ ಜತೆಗೆ ಬೇರೆ ಧರ್ಮಗಳಿಗೂ ಉತ್ತೇಜನ ನೀಡುತ್ತಾರೆ. ಇದರ ಅಂಗವಾಗಿ ಪ್ರತೀ ವರ್ಷ ಒಂದು ವಾರ ಸಮ್ಮೇಳನ ಏರ್ಪಡಿಸುತ್ತಾರೆ. ಇದರಲ್ಲಿ ಯುವ ಜನಾಂಗ ಕೂಡ ಭಾಗವಹಿಸಿ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಈ ವರ್ಷ 60ನೇ ಸಂವತ್ಸರದ ಸಮ್ಮೇಳನ, ಇಟಲಿಯ ಕಮಾಲ್ಡೋಲಿ ಅನ್ನುವ ಜಾಗದಲ್ಲಿ ನಡೆಯಿತು. “ದೇವ ಮಾನವನನ್ನಾರಿಸಿ ಎಡೆನ್‌ ತೋಟದಲ್ಲಿ ಬಿಟ್ಟು ಇದನ್ನು ಬೆಳೆಸಿ ಕಾಪಾಡು’ ಬೈಬಲ್‌ ಗ್ರಂಥದಿಂದ ಆರಿಸಿದ ಈ ಸಾಲುಗಳ ಆಧಾರಿತ “ಭೂಮಿ ವಾಸಿಸಲು ಹಾಗೂ ರಕ್ಷಿಸಲು ‘ ಇದೆ ಸಮ್ಮೇಳನದ ವಿಷಯವಾಗಿತ್ತು. ನಾನು ಮಾತಾಡುತ್ತ ಪಂಚಮಹಾಭೂತಗಳಲ್ಲಿ ಒಂದಾದ ಭೂಮಿ ನಮಗೆ ಭೂಮಾತಾ. ಹಾಗೆಯೆ ಪ್ರಕೃತಿ ದೇವರು, ಇದನ್ನು ಸಂತ ಫ್ರಾನ್ಸಿಸ್ಕೋ ತನ್ನ ಕಾಂತಿಕೆ ದೆಲ್ಲೆ ಕ್ರೆಯಾತುರೆ ಗ್ರಂಥದಲ್ಲಿ ಹೇಳಿದ್ದಾರೆ. ಈ ಗ್ರಂಥ ಪಂಚ ಮಹಾಭೂತಗಳ ವರ್ಣನೆ. ಇದರಲ್ಲಿ ಜಲ,ಅಗ್ನಿ, ಭೂಮಿ, ಆಕಾಶ, ವಾಯು ಎಲ್ಲ ದೇವರೆಂದಿದ್ದಾರೆ.

“ಮತಗಳಿಗೂ ಭೂಮಿಗೂ ಇರುವ ಸಂಪರ್ಕವೇನು? ಭೂರಕ್ಷಣೆ ಏಕೆ ಬೇಕು?’ ಈ ವಿಷಯದ ಬಗ್ಗೆ ಸಮ್ಮೇಳನ ಒಂದು ವಾರ ನಡೆಯಿತು. ಮುಗಿಲೆತ್ತರದ ಹಚ್ಚ ಹಸುರಿನ ಬೆಟ್ಟಗಳು, ಫಲವತ್ತಾದ ಬೆಟ್ಟಗಳು, ಕಣ್ಣು ಹಾಯಿಸಿದಷ್ಟು ಮರಗಳು. ಸೂರ್ಯನ ಕಿರಣ ನೆಲ ತಾಕಲು ಸಾಧ್ಯವಿಲ್ಲದಷ್ಟು ಮರಗಳು, ಎಲೆಗಳು, ಕೊಂಬೆಗಳು. ಇಂತಹ ನಿಸರ್ಗದ ನಡುವೆ ಒಂದು ಕ್ರೈಸ್ತ ಸನ್ಯಾಸಿಗಳ ಆಶ್ರಮ. ಒಳಗೆ ಗ್ರಂಥಾಲಯ, ಎಲ್ಲ ಮತಗಳ ಗ್ರಂಥಗಳು, ವೇದಗಳು , ಉಪನಿಷತ್ತುಗಳು ಇವುಗಳು ಓದಿಗೆ ಲಭ್ಯವಿತ್ತು. ಸಾಯಿ ವಿದ್ಯಾ ಅನುವಾದದ ನಮ್ಮ ಸಂಘ ಮಾಡಿದ ಯೋಗ ವಸಿಷ್ಠ ಈ ಗ್ರಂಥಾಲಯಕ್ಕೆ ಕೊಡುವ ಭಾಗ್ಯ ನನ್ನದಾಯಿತು.

ಇಲ್ಲಿಂದ ಎಂಟು ಕಿಲೋ ಮೀಟರ್‌ದೂರದಲ್ಲಿ ಒಂದು ಹಳೆಯ ಕಾಲದ ದೊಡ್ಡ ತೊಟ್ಟಿಮನೆ. ನಾಲ್ಕು ಅಂತಸ್ತು ಕೋಣೆಗಳು ಪ್ರವಾಸಿಗರಿಗೆ, ಅಲ್ಲಿ SAE(segreteiato attivita ecumenica) ಸಮ್ಮೇಳನ ಒಂದುವಾರ ನಡೆದಿತ್ತು. ಈ ಸಂದರ್ಭದಲ್ಲಿ ಒಂದು ಬೆಳಗ್ಗೆ ಮೂರು ಗಂಟೆ ಇಸ್ಲಾಂ, ಬೌದ್ಧ, ಕ್ರಿಶ್ಚಿಯನ್‌, ಹಿಂದೂ ಮತಗಳಿಗೆ ಮೀಸಲಾಗಿಟ್ಟು ಹಿಂದೂ ಮತದ ಬಗ್ಗೆ ಮಾತಾಡಲು ನನ್ನನ್ನು ಆಹ್ವಾನಿಸಿದ್ದರು.

Desi Swara: ದೇವನೊಬ್ಬ ನಾಮ ಹಲವು-ನಿಸರ್ಗ ಸ್ವರ್ಗದಲ್ಲಿಅಂತರ್ಜಾತೀಯ ಸಮ್ಮೇಳನ

ಸಮ್ಮೇಳನದ ವಿಷಯ “ಮತಗಳು ಮತ್ತು ಭೂಮಿ’ ಎರಡಕ್ಕೂ ಇರುವ ಸಂಪರ್ಕ. ಪಂಚೇದ್ರಿಯಗಳಲ್ಲಿ ಒಂದಾದ ಭೂಮಿ ಭೂಮಾತಾ ಇದನ್ನು ಹೇಗೆ ಕಾಪಾಡುವುದು? ಇದರ ಬಗ್ಗೆ ಚರ್ಚೆ ನಡೆದಿತ್ತು. “ಈ ಭೂಮಿ ಬಣ್ಣದ ಬುಗುರಿ’ ಜಿಯನ್ನ ಅವರ ಗಾಯನದ ಮೂಲಕ ನನ್ನ ಭಾಷಣ ಆರಂಭಿಸಿ, ಈ ಹಾಡಿನ ಅರ್ಥ ಎಷ್ಟು ಚೆನ್ನಾಗಿ ಭೂಮಿಯನ್ನು ಒಂದು ಬಣ್ಣದ ಬುಗುರಿಗೆ ಹೋಲಿಸಿ ಮಾನವನ ಕರ್ತವ್ಯಗಳನ್ನು ವಿವರಿಸಿದ್ದಾರೆ ಎಂದು ಹೇಳಿ ನಾವು ಭೂಮಿಯಲ್ಲಿ ಹುಟ್ಟಿ ಅದರಲ್ಲಿ ಒಂದಾಗುತ್ತೇವೆ ಎಂದು ಸಮರ್ಥಿಸಿದೆ.

ಭೂಮಿ ನಮಗೆ ಭೂಮಾತಾ ಎಲ್ಲವು ಭೂಗರ್ಭದಲ್ಲಿ ಅಡಗಿದೆ, ವಿಷ್ಣು ವರಾಹಾವತಾರ ತಾಳಿ ರಕ್ಕಸ ಕಡಲಲ್ಲಿ ಮುಳುಗಿಸಿದ್ದ ಭೂಮಿಯನ್ನು ರಕ್ಷಿಸಿದನು. ಕೃಷ್ಣ ಭೂಮಂಡಲವನ್ನು ತನ್ನ ಬಾಯಲ್ಲಿ ಯಶೋದೆಗೆ ತೋರಿದನು. ಸೃಷ್ಟಿಕರ್ತ ಬ್ರಹ್ಮನು ವಿಷ್ಣುವಿನ ಹೊಕ್ಕಳಿಂದ ಹೊರಟ ಕಮಲದಲ್ಲಿ ಕುಳಿತು ಓಂಕಾರದೊಂದಿಗೆ, ವೇದಘೋಷಣೆಯೊಂದಿಗೆ, ಭೂಮಿಯನ್ನು ಸೃಷ್ಟಿ ಮಾಡಿದ ಬ್ರಹ್ಮ ಮತ್ತೆ ಎಲ್ಲ ಸುಖ ಸಂಪತ್ತುಗಳನ್ನು ಮಾನವನಿಗಿಟ್ಟ. “ಕೈಮುಗಿದು ಒಳಗೆ ಬಾ ಇದು ಸಸ್ಯಕಾಶಿ’ ಸಸ್ಯ ಸಂಪತ್ತು ಪವಿತ್ರ ಕಾಶಿಯಷ್ಟೇ ಪವಿತ್ರ. ದೇವರು ಸಸ್ಯ ಕಾಶಿ ಸೃಷ್ಟಿಸಿ ಪವಿತ್ರ ಮರಗಳನ್ನು ನೀಡಿ ಬಿಲ್ಪತ್ರೆಯ ಒಂದು ಎಲೆ ಶಿವನಿಗರ್ಪಿಸಿದರೆ ಮೋಕ್ಷ ಸಾಧ್ಯ ಎಂದೆ.

ಜೀವನದ ಮೋಕ್ಷ ಹಾಗೂ ಸಂಸಾರದ ಬಗ್ಗೆ, ದಶಾವತಾರಾ, ರಾಮಾಯಣದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡೆ. ನಮ್ಮ ದಿನಚರಿಯಲ್ಲಿ ಭೂಮಿಯ ಪಾತ್ರ ಹೇಳುವಾಗ ತುಳಸಿಯ ಪ್ರಾಮುಖ್ಯ, ಬಾಳೆ ಎಲೆಯ ಶ್ರೇಷ್ಠತೆ, ಬಿಲ್ಪತ್ರೆಯ ಮಹತ್ವ, ವೀಲೆÂàದೆಲೆ ಗುಣಗಳು ಮತ್ತೆ ಭೂದಾನದ ಫಲ, ನೆಲಕ್ಕೆ ಏಕೆ ನಮಸ್ಕರಿಸುತ್ತೇವೆ, ಭೂಮಿ ಪೂಜೆ ಭೂದಾನಗಳ ವಿಷಯ ಹೇಳಿದೆ.

ಭೂಮಿಯ ರಕ್ಷಣೆ ಏಕೆ ಬೇಕು ? ಇದನ್ನು ಹೇಗೆ ಮಾಡಬೇಕು ?
ನಾವು ನಮ್ಮ ಮನೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೋ ಹಾಗೆಯೇ ನಮ್ಮ ಭೂಮಿಯನ್ನು ಕಾಪಾಡಬೇಕು. ಭೂಮಿಯ ಆರೋಗ್ಯವೇ ಶಾಂತಿ! ಶಾಂತಿ ಸ್ಥಾಪನೆಗೆ ಉತ್ತಮ ಮಾಧ್ಯಮ ಧರ್ಮ ಎಂದು ಹೇಳಿ ಮನುಸ್ಮತಿಯನ್ನು ಸಂಕ್ಷಿಪ್ತವಾಗಿ ವಿವರಿಸಿ ಧರ್ಮವಷ್ಟೇ ಮುಖ್ಯ ಸತ್ಕರ್ಮ, ಕರ್ಮ ಮತ್ತು ಧರ್ಮ ಮಾರ್ಗದಿಂದ ವಸುಧೈವ ಕುಟುಂಬಕಂ ನಡೆದರೆ ಈ ಭೂಮಿ ಶಾಂತಿಧಾಮ ಆಗುವುದರಲ್ಲಿ ಸಂದೇಹವಿಲ್ಲ.

ಭೂರಕ್ಷಣೆಯಲ್ಲಿ ಧರ್ಮದ ಪಾತ್ರ
ಹಿಂದೂಮತದ ದೃಷ್ಟಿಕೋನದಲ್ಲಿ ಭೂಮಿ, ಧರ್ಮೋ ರಕ್ಷತಿ ರಕ್ಷಿತಃ ಅನ್ನುವಂತೆ ಧರ್ಮ ಒಂದು ಉತ್ತಮ ಮಾಧ್ಯಮ ಎರಡನೇ ಶತಮಾನದಲ್ಲಿ ಬರೆದ ಮನು ಚಕ್ರವರ್ತಿಯ ಮನು ಧರ್ಮ ಶಾಸ್ತ್ರ ದ ಬಗ್ಗೆ ವಿವರಿಸಿ ಇಂದಿಗೂ ಧರ್ಮಶಾಸ್ತ್ರದ ಅನೇಕ ನೀತಿಗಳು ಶಾಸ್ತ್ರಗಳು ನಮ್ಮ ದಿನಚರಿ ಯಲ್ಲಿದೆ. ಈ ಶಾಸ್ತ್ರಗಳಿಗೆ ವಿರುದ್ಧ ನಡೆದು ಅಧರ್ಮ ತಲೆ ಎತ್ತಿದರೆ ಜನರಿಗೆ ತೊಂದರೆ ಉಂಟಾಗಿ ಶಾಂತಿ ಸ್ಥಾಪನೆಗೆ ಕುಂದು ಬರಬಹುದು. ಧರ್ಮದ ಜತೆ ಸತ್ಕರ್ಮಗಳನ್ನು ಮಾಡಬೇಕು. ಶಾಂತಿ ಸ್ಥಾಪನೆಗೆ ಎಂದು ಹೇಳಿದಾಗ ನೂರಾರು ಜನ ಮೆಚ್ಚಿ ತಲೆ ತೂಗಿದಾಗ ಆತ್ಮತೃಪ್ತಿ ಆಯಿತು.”ವೈಷ್ಣವ ಜನತೋ’ ಹಾಡಿಗೆ ಆತ್ಮಾನಂದ ಅವರ ನೃತ್ಯ ಎಲ್ಲರನ್ನು ಸಂತಸಗೊಳಿಸಿತ್ತು. ನಿಸರ್ಗದಲ್ಲಿ ಮಾಡಿದ ನೃತ್ಯ ಭೂಮಾತೆಗೆ ನಮಿಸಿತ್ತು.

*ಜಯಮೂರ್ತಿ, ಇಟಲಿ

 

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.