![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Nov 24, 2023, 11:39 PM IST
ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮತ್ತಷ್ಟು ವಿಳಂಬವಾಗಿದೆ. ಪದೇ ಪದೆ ಡ್ರಿಲ್ಲಿಂಗ್ ಯಂತ್ರ ಕೈಕೊಡುತ್ತಿರುವುದೇ ಇದಕ್ಕೆ ಕಾರಣ. ಗುರುವಾರ ರಾತ್ರಿ ಆಗರ್ ಯಂತ್ರವು ದುರಸ್ತಿಗೀಡಾದ ಕಾರಣ, ಕೊರೆಯುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ಸಂಜೆ ವೇಳೆಗೆ ಯಂತ್ರ ದಲ್ಲಿದ್ದ ತಾಂತ್ರಿಕ ದೋಷ ಸರಿಪಡಿಸಿ ಇನ್ನೇನು ಡ್ರಿಲ್ಲಿಂಗ್ ಆರಂಭಿಸಬೇಕು ಎನ್ನುವಷ್ಟರಲ್ಲಿ ಮತ್ತೆ ಸಮಸ್ಯೆ ತಲೆದೋರಿದ ಕಾರಣ, ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.
ಕಾರ್ಮಿಕರನ್ನು ತಲುಪಲು ಇನ್ನು 12 ಮೀ. ಕೊರೆಯಲು ಬಾಕಿಯಿದೆ. ಆಗರ್ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸಿದರೆ ಗಂಟೆಗೆ 4-5 ಮೀ. ಕೊರೆಯುತ್ತದೆ. ಒಮ್ಮೆ ಪೂರ್ತಿ ಡ್ರಿಲ್ಲಿಂಗ್ ಮುಗಿದು, ಸ್ಟೀಲ್ ಪೈಪ್ ಅನ್ನು ತೂರಿಸುವ ಕೆಲಸ ಪೂರ್ಣಗೊಂಡರೆ, ಕಾರ್ಮಿಕರನ್ನು ಹೊರಕರೆತರಲು ಸಾಧ್ಯವಾಗುತ್ತದೆ ಎಂದು ಎನ್ಡಿಆರ್ಎಫ್ ಹೇಳಿದೆ. ಇದೇ ವೇಳೆ ಗಾಲಿಗಳಿರುವ ಸ್ಟ್ರೆಚರ್ಗೆ ಹಗ್ಗ ಕಟ್ಟಿ ಕಾರ್ಮಿಕರನ್ನು ಹೇಗೆ ಹೊರಗೆ ಎಳೆಯಲಾಗುತ್ತದೆ ಎಂಬ ರಿಹರ್ಸಲ್ ಕೂಡ ಶುಕ್ರವಾರ ನಡೆದಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.