![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Nov 9, 2021, 5:47 AM IST
ಮಂಗಳೂರು: ದುಬಾೖ-ಮಂಗಳೂರು ಮತ್ತು ಮಂಗಳೂರು- ದುಬಾೖ ನಡುವಣ ಸ್ಪೈಸ್ಜೆಟ್ ವಿಮಾನ ಯಾನದಲ್ಲಿ ವಿಳಂಬ ಆಗುತ್ತಿದೆ ಎಂಬ ದೂರುಗಳು ಪ್ರಯಾಣಿಕರಿಂದ ಕೇಳಿ ಬಂದಿವೆ.
ನ. 7ರಂದು ದುಬಾೖ -ಮಂಗಳೂರು ವಿಮಾನ 11 ಗಂಟೆಗಳಷ್ಟು ವಿಳಂಬವಾಗಿ ಮಂಗಳೂರು ವಿಮಾನನಿಲ್ದಾಣಕ್ಕೆ ಬಂದಿಳಿದರೆ ಮಂಗಳೂರು- ದುಬಾೖ ವಿಮಾನ 12 ಗಂಟೆ ವಿಳಂಬವಾಗಿ ಯಾನ ಬೆಳೆಸಿತ್ತು ಎಂಬುದಾಗಿ ಟ್ವಿಟರ್ನಲ್ಲಿ ಸಂದೇಶಗಳು ಹರಿದಾಡಿವೆ.
ಈ ಬಗ್ಗೆ ಸ್ಪೈಸ್ ಜೆಟ್ ಸಂಸ್ಥೆ ಮರು ಟ್ವೀಟ್ ಮಾಡಿ ಯಾನ ನಿರ್ವಹಣ ಕಾರಣಗಳಿಂದಾಗಿ ವಿಳಂಬವಾಗಿತ್ತು ಎಂಬುದಾಗಿ ಸ್ಪಷ್ಟೀಕರಣ ನೀಡಿದೆ.
ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು. ಆದರೆ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ವಿಳಂಬ ಆಗುವುದನ್ನು ತಪ್ಪಿಸಲಾಗದು.
ಇದನ್ನೂ ಓದಿ:ರಫೇಲ್ ಕಿಕ್ಬ್ಯಾಕ್ ತನಿಖೆ ನಡೆಸದಿರಲು ಸಿಬಿಐ ನಿರ್ಧಾರ: ಹೊಸ ವರದಿಯಲ್ಲಿ ಆರೋಪ
ಪ್ರಯಾಣಿಕರಿಗೆ ಆಗಿರುವ ಅನನುಕೂಲತೆಗೆ ವಿಷಾದ ವ್ಯಕ್ತ ಪಡಿಸುತ್ತೇವೆ ಎಂದು ಸ್ಪೈಸ್ ಜೆಟ್ ಸಂಸ್ಥೆ ಹೇಳಿದೆ.
You seem to have an Ad Blocker on.
To continue reading, please turn it off or whitelist Udayavani.