9/11 ಸಿಗದೆ ಜನರ ಪರದಾಟ; ಇ ಸ್ವತ್ತು ತಂತ್ರಾಂಶಕ್ಕೆ ಸರ್ವರ್‌ ಬಾಧೆ

4 ತಿಂಗಳುಗಳಿಂದ ಗ್ರಾ.ಪಂ.ಗಳಲ್ಲಿ ಬಿಗಡಾಯಿಸಿದ ಸಮಸ್ಯೆ

Team Udayavani, Feb 3, 2022, 7:15 AM IST

9/11 ಸಿಗದೆ ಜನರ ಪರದಾಟ; ಇ ಸ್ವತ್ತು ತಂತ್ರಾಂಶಕ್ಕೆ ಸರ್ವರ್‌ ಬಾಧೆ

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಸಹಿತ ರಾಜ್ಯದ ಹೆಚ್ಚಿನ ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಲ್ಲಿ ಇ-ಸ್ವತ್ತು ತಂತ್ರಾಂಶವು ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಸರ್ವರ್‌ ಡೌನ್‌ ಸಮಸ್ಯೆಗೆ ತುತ್ತಾಗಿ ನಮೂನೆ 9/11 “ಎ’ ಪಡೆಯಲಾಗದೆ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಇದರ ಪರಿಹಾರಕ್ಕೆ ಗ್ರಾ.ಪಂ. ನಿಂದ ಮೇಲಿನ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಲಾಗ್‌ ಇನ್‌ ಆದ ತತ್‌ಕ್ಷಣ ಲಾಗ್‌ ಔಟ್‌!
9/11 ಎಗೆ ಸಂಬಂಧಿಸಿ ಪಂಚಾಯತ್‌ ಸಿಬಂದಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ದರೂ ಅಪ್ರೂವಲ್‌ ಆಗುತ್ತಿಲ್ಲ. ಲಾಗ್‌ಇನ್‌ ಆದ ಕೂಡಲೇ ಲಾಗ್‌ಔಟ್‌ ಆಗುತ್ತಿದೆ. ಜನರಿಗೆ ಉತ್ತರ ಕೊಡ ಲಾಗುತ್ತಿಲ್ಲ ಎನ್ನುತ್ತಾರೆ ಜನಪ್ರತಿನಿಧಿಗಳು ಹಾಗೂ ಪಿಡಿಒಗಳು. ಅರ್ಜಿ ಸಲ್ಲಿಸಿದ ನಿಗದಿತ ದಿನಗಳಲ್ಲಿ 9/11 ಎ ಹಾಗೂ 9/11 ಬಿ ನೀಡಬೇಕೆಂಬ ನಿಯಮ ಇದ್ದರೂ ಈಗಿನ ಸಮಸ್ಯೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ.

ಏನಿದು ನಮೂನೆ 9 ಮತ್ತು 11?
ಕರ್ನಾಟಕ ಪಂ.ರಾಜ್‌ ಕಾಯ್ದೆ ಪ್ರಕಾರ ಕೃಷಿ ಯೇತರ ಭೂಮಿ ಮತ್ತು ಕಟ್ಟಡಕ್ಕೆ ತೆರಿಗೆ ನಮೂನೆ 9 ಅನ್ನು ಪಿಡಿಒ ನೀಡಬೇಕಾಗುತ್ತದೆ.

ಇದರಲ್ಲಿ ಮಾಲಕನ ಹೆಸರು, ಭಾವಚಿತ್ರ, ಜಾಗದ ಸರ್ವೇ ನಂಬರ್‌, ಆಸ್ತಿಯ ವಿಸ್ತೀರ್ಣ ಇನ್ನಿತರ ವಿವರಗಳು, ಆಸ್ತಿಯ ಚಿತ್ರ, ಯಾವ ವಿವಿಧ ಆಸ್ತಿ, ಛಾಯಾಚಿತ್ರ ಇತರ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಮೂನೆ 11ರಲ್ಲಿ ಕಟ್ಟಡ ತೆರಿಗೆಗಳ ಬೇಡಿಕೆ, ತೆರಿಗೆ ಪಾವತಿಯ ವಿವರ, ಆಸ್ತಿಯ ವಿವರ, ಆಸ್ತಿಯ ಛಾಯಾಚಿತ್ರ, ಮಾಲಕರ ಭಾವಚಿತ್ರ ಸಹಿತ ಇತರ ಮಾಹಿತಿಯನ್ನು ಪಿಡಿಒ ಭರ್ತಿ ಮಾಡಿ, ಡಿಜಿಟಲ್‌ ಸಹಿ ಮಾಡಬೇಕು. 9/11 ಎ ಅನ್ನು ಆ ಫಲಾನುಭವಿಗೆ ನೀಡಬೇಕು.

ಪಿಡಿಒ ಕದಲುವಂತಿಲ್ಲ
ಸರ್ವರ್‌ ಸಮರ್ಪಕವಾಗಿದ್ದಲ್ಲಿ ಒಂದು 9/11 ಎ ಅರ್ಜಿ ಅಪ್‌ಲೋಡ್‌ ಮಾಡಲು 20 ನಿಮಿಷ ಬೇಕಾಗುತ್ತದೆ. ಸರ್ವರ್‌ ಸಮಸ್ಯೆಯಿಂದ 24 ಗಂಟೆ ದಾಟುವುದುಂಟು. ಪ್ರಸ್ತುತ ಸಮಸ್ಯೆ ಏನೆಂದರೆ ಇ-ಸ್ವತ್ತು ತಂತ್ರಾಂಶದಲ್ಲಿ ಹತ್ತಾರು ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುತ್ತಿರುವ ವೇಳೆಯಲ್ಲೇ ಏಕಾಏಕಿ ಲಾಗ್‌ಔಟ್‌ ಆಗುತ್ತಿದೆ. ಇದರಿಂದ ಪುನಃ ಲಾಗ್‌ ಇನ್‌ ಆಗಿ ದಾಖಲೆಪತ್ರ ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಪಿಡಿಒ ಅಲ್ಲೇ ಇರಬೇಕು. ಏಕೆಂದರೆ ಪಿಡಿಒ ತಂಬಿಂಗ್‌ ಇದ್ದರೆ ಮಾತ್ರ ಇ-ಸ್ವತ್ತು ತಂತ್ರಾಂಶ ಲಾಗ್‌ಇನ್‌ ಆಗುತ್ತದೆ.

ಇದನ್ನೂ ಓದಿ:ನಾಯ್ಸ್ ಕಲರ್‌ಫಿಟ್‌ ಸ್ಮಾರ್ಟ್‌ವಾಚ್‌ ಬಿಡುಗಡೆ; ನಾಲ್ಕು ಬಣ್ಣಗಳಲ್ಲಿ ಲಭ್ಯ

ಪರವಾನಿಗೆ ಪತ್ರ ಸಿಗದು
9/11 “ಎ’ ಇಲ್ಲದೆ ಪಂಚಾಯತ್‌ಗಳಿಂದ ಕಟ್ಟಡ ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಕಟ್ಟಡ ಪರವಾನಿಗೆ, 9/11 ಇಲ್ಲದೆ ಸಾಲಕ್ಕೆ ಅರ್ಜಿ ಸಲ್ಲಿಸಲಾಗದು. ಪರವಾನಿಗೆ ಪತ್ರ ಇಲ್ಲದೆ ಸರಕಾರದ ಸಹಾಯಧನದಲ್ಲಿ ನಿರ್ಮಿಸಲಾಗುವ ಮನೆ ಸಹಿತ ಹಲವು ಕಟ್ಟಡ ನಿರ್ಮಾಣ ಆರಂಭಿಸಲಾಗುತ್ತಿಲ್ಲ. ದಿನಂಪ್ರತಿ ಕೆಲವು ಗಂಟೆಗಳವರೆಗೆ ಸರ್ವರ್‌ ಇದ್ದು ಬಳಿಕ ಕೈ ಕೊಡುತ್ತಿದೆ. ದಿನಕ್ಕೆ ಕನಿಷ್ಠ 25 ದಾಖಲೆ ನೀಡುವ ಸಾಮರ್ಥ್ಯ ಇದ್ದರೂ ಈಗ ಮೂರು ನಾಲ್ಕು ದಾಖಲೆ ನೀಡಲಾಗದ ಸ್ಥಿತಿ ಗ್ರಾ.ಪಂ.ಗಳದ್ದು. ನೆಟ್‌ವರ್ಕ್‌ ಇಲ್ಲದ ಕಡೆಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಏನಿದು ಸಮಸ್ಯೆ?
ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಣಿಜ್ಯ ಅಥವಾ ವಾಸ್ತವ್ಯ ಆಧಾರಿತ ಕಟ್ಟಡ ನಿರ್ಮಿಸಲು ಆ ಸ್ಥಳ ಕನ್ವರ್ಷನ್‌ ಆಗಿರಬೇಕು. ಕನ್ವರ್ಷನ್‌ ಆದ ಬಳಿಕ ಗ್ರಾ.ಪಂ.ನಲ್ಲಿ 9/11ಎಗೆ ಅರ್ಜಿ ಸಲ್ಲಿಸಬೇಕು. ಕನ್ವರ್ಷನ್‌ ನಕ್ಷೆ, ಆದೇಶ ಸಹಿತ ಇತರ ದಾಖಲೆಯೊಂದಿಗೆ ಫಲಾನುಭವಿಯು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ ಬಳಿಕ “ಇ ಸ್ವತ್ತು’ ಸಾಫ್ಟ್ವೇರ್‌ ಮೂಲಕ ಗ್ರಾ.ಪಂ. ಸಿಬಂದಿ ಅಪ್‌ಲೋಡ್‌ ಮಾಡಬೇಕು. ಅಪ್‌ಲೋಡ್‌ ಸಾಫ್ಟ್ವೇರ್‌ ಸರ್ವರ್‌ ಸಮಸ್ಯೆಗೆ ಈಡಾದ ಪರಿಣಾಮ ಜನರಿಗೆ 9/11 “ಎ’ ಸಿಗಲು ವಿಳಂಬವಾಗಿದೆ. ನಾಲ್ಕು ತಿಂಗಳ ಹಿಂದೆಯೇ ಸಾಫ್ಟ್ವೇರ್‌ ಅಪ್‌ಡೇಟ್‌ ಪ್ರಕ್ರಿಯೆ ಆರಂಭಗೊಂಡಿದ್ದು ಪೂರ್ಣಗೊಳ್ಳದ ಕಾರಣ ಸಮಸ್ಯೆ ಪರಿಹಾರ ಕಂಡಿಲ್ಲ ಎನ್ನುತ್ತಾರೆ ಗ್ರಾ.ಪಂ. ಸಿಬಂದಿ.

ಪರಿಶೀಲಿಸಿ ಕ್ರಮ
ಎರಡು ತಿಂಗಳ ಹಿಂದೆ ಸರ್ವರ್‌ ಸಮಸ್ಯೆ ಕಂಡು ಬಂದಿತ್ತು. ಅದನ್ನು ಸರಿಪಡಿಸಲಾಗಿದೆ. ಪ್ರಸ್ತುತ ರಾಜ್ಯಮಟ್ಟದಲ್ಲಿ ಸಮಸ್ಯೆ ಇರುವ ಬಗ್ಗೆ ದೂರು ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವರ್‌ ಸ್ಥಿತಿಗತಿ ಬಗ್ಗೆ ಪರಿಶೀಲಿಸಲಾಗುವುದು.
-ಶಿಲ್ಪಾ ನಾಗ್‌, ಕಮಿಷನರ್‌, ರೂರಲ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಡೈರೆಕ್ಟರ್‌ ಇ-ಗವರ್ನೆನ್ಸ್‌ ಬೆಂಗಳೂರು

- ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ.. ಬೌ.. ಬೌ.. ಎಂದಾಗಲೇ ಗೊತ್ತು

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Thumbe: ಅಗೆದಲ್ಲಿ ಕಡೆಗೂ ಡಾಮರು

Thumbe: ಅಗೆದಲ್ಲಿ ಕಡೆಗೂ ಡಾಮರು

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ.. ಬೌ.. ಬೌ.. ಎಂದಾಗಲೇ ಗೊತ್ತು

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.