ಕೋವಿಡ್ ನಿಂದ ಅರ್ಥವ್ಯವಸ್ಥೆಗೆ ಪೆಟ್ಟು: ಪರವಾನಿಗೆ ಉಳಿಸಲು ವಿಮಾನಯಾನ ಸಂಸ್ಥೆ ಪ್ರಯತ್ನ


Team Udayavani, Jul 26, 2020, 3:57 PM IST

ಅರ್ಥ ವ್ಯವಸ್ಥೆ ಅಸ್ತವ್ಯಸ್ಥ: ಪರವಾನಿಗೆ ಉಳಿಸಿಕೊಳ್ಳಲು ವಿಮಾನಯಾನ ಸಂಸ್ಥೆ ಪ್ರಯತ್ನ

ಮಣಿಪಾಲ: ಕೋವಿಡ್ ಸೋಂಕಿನಿಂದಾಗಿ ಜಾಗತಿಕ ಅರ್ಥವ್ಯವಸ್ಥೆಯೇ ಅಸ್ತವ್ಯಸ್ಥಗೊಂಡಿದ್ದು, ಬಹುತೇಕ ಉದ್ಯಮ ಕ್ಷೇತ್ರಗಳು ಶಾಶ್ವತವಾಗಿ ಮುಚ್ಚುವ ಭೀತಿಯಲ್ಲಿವೆ. ಆರ್ಥಿಕತೆಯ ಪ್ರಮುಖ ಆದಾಯ ಮೂಲಗಳೆಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಹಾಗೂ ವಿಮಾನಯಾನ ಸಂಸ್ಥೆಗಳು ಹಿಂದೆಂದೂ ಕಾಣದ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ನಡುವೆ ಸಿಲುಕಿ ಒದ್ದಾಡುತ್ತಿವೆ. ಇಷ್ಟು ಮಾತ್ರವಲ್ಲದೇ ಭಾರಿ ನಷ್ಟ ಅನುಭವಿಸುತ್ತಿವೆ.

ಕೆಲವು ಕಂಪೆನಿಗಳು ನಷ್ಟದ ಹೊಡೆತವನ್ನು ತಗ್ಗಿಸಲು ಸಿಬಂದಿ, ಸಂಬಳ ಕಡಿತ ಹಾಗೂ ಸಂಬಳ ರಹಿತ ರಜೆ ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆಯೇ ವಾಯುಯಾನ ಕ್ಷೇತ್ರಕ್ಕೆ ಮತ್ತೂಂದು ತಲೆನೋವು ಶುರುವಾಗಿದ್ದು, ವಿಮಾನ ಟೇಕ್‌ ಆಫ್ ಆಗದ ಕಾರಣ ಲೈಸನ್ಸ್‌ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಪ್ರಯಾಣಿಕರಿಲ್ಲದ ಹಾಗೂ ಪ್ರಯಾಣ ನಿರ್ಬಂಧದ ಕಾರಣದಿಂದ ಸದ್ಯ ನಿಗದಿಗಿಂತಲೂ ಶೇ.50ಕ್ಕೂ ಕಡಿಮೆ ಹಾರಾಟ ನಡೆಸುತ್ತಿರುವ ವಿಮಾನ ಸಂಸ್ಥೆಗಳಿಗೆ ಪ್ರಯಾಣಿಕರಿಲ್ಲದಿದ್ದರೂ ಟೇಕ್‌ ಆಫ್ ಆಗುವ ವಿಚಿತ್ರ ಸಮಸ್ಯೆಯೊಂದು ಸದ್ಯ ಆರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಏರ್‌ಬಸ್‌ ಎಸ್‌ಇ ಎ380 ವಿಮಾನ ದಕ್ಷಿಣ ಕೊರಿಯಾದ ವಾಯು ಮಾರ್ಗದಲ್ಲಿ ಸತತ ಮೂರು ದಿನಗಳ ಕಾಲ ಹಲವು ಗಂಟೆಗಳವರೆಗೆ ಹಾರಾಟ ನಡೆಸಿದ್ದು, ಲೈಸನ್ಸ್‌ ಉಳಿಸಿಕೊಳ್ಳುವುದಕ್ಕಾಗಿ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ ಪ್ರಕ್ರಿಯೆ ನಡೆಸಿದೆ. 495 ಆಸನ ಸಾಮರ್ಥ್ಯವಿರುವ ಈ ವಿಮಾನ ಒಮ್ಮೆ ಟೇಕ್‌ ಆಪ್‌ ಆದರೆ ಭಾರೀ ಹಣ ಖರ್ಚಾಗುತ್ತದೆ. ಆದರೂ ಲೈಸನ್ಸ್‌ ಕಳೆದುಕೊಳ್ಳದಿರಲು ವಿಮಾನ ಹಾರಾಟ ಅನಿವಾರ್ಯ ಎಂದು ಹೇಳಿವೆ.

ಇನ್ನು ಬೇರೆ ದೇಶಗಳಲ್ಲಿರುವ ಸಿಮ್ಯುಲೇಟರ್‌ಗಳಲ್ಲಿ ಅಭ್ಯಾಸ ನಡೆಸಬೇಕೆಂದರೆ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಗೊಳ್ಳ ಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಆರಂಭ ಅಸಾಧ್ಯವಾಗಿದ್ದರಿಂದ ಹಲವು ವಿಮಾನಯಾನ ಸಂಸ್ಥೆಗಳು ತೊಂದರೆಗೀಡಾಗಿವೆ. ಸೂಪರ್‌ ಜಂಬೋ ಜೆಟ್‌ಗಳ ಹಾರಾಟಕ್ಕೆ ಪರವಾನಗಿ ಚಾಲ್ತಿಯಲ್ಲಿ ಇರಬೇಕೆಂದರೆ, 90 ದಿನಗಳಲ್ಲಿ ಕನಿಷ್ಠ 3 ಬಾರಿಯಾದರೂ ಪೈಲಟ್‌ ಅಂತಹ ವಿಮಾನವನ್ನು ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ ಮಾಡಿರಬೇಕು.

ಟಾಪ್ ನ್ಯೂಸ್

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Elon Musk: ಬೈಡೆನ್‌, ಕಮಲಾ ಮೇಲೇಕೆ ಹ*ತ್ಯಾ ಪ್ರಯತ್ನ ನಡೆಯುತ್ತಿಲ್ಲ? ಎಲಾನ್‌ ಮಸ್ಕ್

Elon Musk: ಬೈಡೆನ್‌, ಕಮಲಾ ಮೇಲೇಕೆ ಹ*ತ್ಯಾ ಪ್ರಯತ್ನ ನಡೆಯುತ್ತಿಲ್ಲ?ಎಲಾನ್‌ ಮಸ್ಕ್

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ

Sheik Hasina

Bangladesh; ಕೊ*ಲೆ ಆರೋಪ: ಹಸೀನಾ ವಿರುದ್ಧ 155ನೇ ಪ್ರಕರಣ

Maldievs

India ಜತೆ ಸಂಬಂಧ ಈಗ ಸುಧಾರಿಸಿದೆ: ಮಾಲ್ದೀವ್ಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.