![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Mar 31, 2023, 8:21 AM IST
ಹುಣಸೂರು: ಒಂಟಿ ಸಲಗದ ದಾಳಿಯಿಂದ ರೈತನೊರ್ವ ಬೈಕಿನಿಂದ ಹಾರಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡರೂ ಸಲಗ ಆತನ ಬೈಕ್ ಗೆ ಹಾನಿ ಮಾಡಿ ಆಕ್ರೋಶ ಹೊರಹಾಕಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ನಾಗಾಪುರ-2 ಬಳಿ ನಡೆದಿದೆ.
ನಾಗರಹೊಳೆ ಮುಖ್ಯ ರಸ್ತೆ ಬಳಿಯ ಭಾರತವಾಡಿ ಗ್ರಾಮದ ರೈತ ಬೀರೇಗೌಡ ಸಲಗನ ದಾಳಿಯಿಂದ ತಪ್ಪಿಸಿಕೊಂಡವರು. ಸಲಗದ ದಾಳಿಗೆ ಬೈಕ್ ಹಾನಿಯಾಗಿದೆ.
ಬುಧವಾರ ರಾತ್ರಿ 10.30ರ ವೇಳೆ ಪಕ್ಕದ ಪೆಂಜಹಳ್ಳಿಯ ಶುಂಠಿ ಹೊಲಕ್ಕೆ ನೀರು ಹಾಕಿ ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ನಾಗಾಪುರ-2 ಬಳಿ ಸಲಗ ಒಮ್ಮೆಲೆ ಬೀರೇಗೌಡರ ಬೈಕನ್ನು ಅಟ್ಟಿಸಿಕೊಂಡು ಬಂದಿದೆ. ಎಚ್ಚೆತ್ತ ಅವರು ಬೈಕ್ನಿಂದ ಹಾರಿ ಹಾಡಿಯೊಳಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಲಗವು ಬೈಕನ್ನು ತನ್ನ ಸೊಂಡಲಿನಿಂದ ಎತ್ತಿ ಬಿಸಾಡಿ, ತುಳಿದು ಹಾನಿಗೊಳಿಸಿದೆ.
ವೀರನಹೊಸಹಳ್ಳಿ ವಲಯದ ಆರ್.ಎಫ್.ಓ. ಗಣರಾಜ್ ಪಟಗಾರ್ರಿಗೆ ಮಾಹಿತಿ ನೀಡಿದ ಮೇರೆಗೆ ಡಿ.ಆರ್.ಎಫ್.ಓಗಳಾದ ಚಂದ್ರೇಶ್, ದ್ವಾರಕನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸಲಗನನ್ನು ಕಾಡಿಗಟ್ಟಿದರು. ನಜ್ಜುಗುಜ್ಜಾಗಿರುವ ಬೈಕ್ ಅರಣ್ಯ ಇಲಾಖೆ ವಶದಲ್ಲಿದೆ.
ಪುಂಡ ಸಲಗನ ಹಾವಳಿ ತಪ್ಪಿಸಿ:
ಈ ಒಂಟಿ ಸಲಗವು ನಿತ್ಯವೂ ಉದ್ಯಾನದಂಚಿನ ರೈಲ್ವೆ ಹಳಿ ತಡೆಗೋಡೆಯನ್ನೇ ಸರಾಗವಾಗಿ ದಾಟಿ ಹೊರಬರುತ್ತಿದ್ದು, ಕಾಟ ಕೊಡುತ್ತಿದೆ. ಈ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಈ ಭಾಗದ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.