![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 29, 2023, 11:46 PM IST
ಮೈಸೂರು: ಉಡುಪಿ ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ತಮ್ಮ 36ನೇ ಚಾತುರ್ಮಾಸ್ಯ ವ್ರತವನ್ನು ಶುಕ್ರವಾರ ಸಂಪನ್ನಗೊಳಿಸಿದರು.
ಶ್ರೀಪಾದರನ್ನು ಮೈಸೂರಿನಲ್ಲಿ ಜನತೆ ಭಾವುಕರಾಗಿ ಬೀಳ್ಕೊಟ್ಟರು. ಶ್ರೀಗಳು ಸಂಜೆ ನಂಜನಗೂಡಿಗೆ ತೆರಳಿ ಕಪಿಲಾ ನದಿಗೆ ಹಾಲು, ಅರಿಶಿನ, ಕುಂಕುಮ, ಪುಷ್ಪ ಸಹಿತ ಬಾಗಿನ ಅರ್ಪಿಸಿ ಮಂಗಳಾರತಿ ಬೆಳಗಿ ದರು. ಬಳಿಕ ಅಲಂಕೃತ ತೆಪ್ಪ ದಲ್ಲಿ ನದಿಯ ಮತ್ತೂಂದು ದಡ ವನ್ನು ತಲುಪಿ ಸೀಮೋಲ್ಲಂಘನ ವಿಧಿ ಪೂರೈಸಿದರು. ಬಳಿಕ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದರು. ಶ್ರೀಗಳು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ರಾಯರ ಮೃತ್ತಿಕಾ ವೃಂದಾವನ ದರ್ಶನ ಪಡೆದರು.
You seem to have an Ad Blocker on.
To continue reading, please turn it off or whitelist Udayavani.