![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 23, 2021, 10:30 PM IST
ಸುವರ್ಣವಿಧಾನಸೌಧ: ಧಾರ್ಮಿಕ ಸ್ವಾತಂತ್ರ್ಯಹಕ್ಕು ಸಂರಕ್ಷಣಾ ವಿಧೇಯಕ ಕುರಿತ ಬಿಸಿ ಚರ್ಚೆ ನಡುವೆ ಪ್ರೀತಿ, ಮದುವೆ, ವಯಸ್ಸು ವಿಚಾರ ವಿಧಾನಸಭೆಯಲ್ಲಿ ಕೆಲಕಾಲ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿತು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಯ್ದೆಯ ಒಂದು ಅಂಶ ಪ್ರಸ್ತಾಪಿಸುತ್ತಾ “ನಾನು ಲವ್ ಮಾಡಿ ಮದುವೆ ಯಾದರೆ ಅದನ್ನು ತಡೆಯಲಿಕ್ಕೆ ಇವರ್ಯಾರು’ ಎಂದು ಪ್ರಶ್ನಿಸಿ “ಬೇಡ, ನನಗೆ ವಯಸ್ಸಾಯ್ತು ಸಮ್ ಎಕ್ಸ್’ ಎಂದು ಹೇಳಿದರು.
ಆಗ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, “ಪ್ರೀತಿಗೂ ಮದುವೆಗೂ ವಯಸ್ಸಿಗೂ ಲಿಂಕ್ ಇದೆಯಾ’ ಎಂದು ಚಟಾಕಿ ಹಾರಿಸಿದರು.
ಆಗ, ಸಿದ್ದರಾಮಯ್ಯ, “ಹಾಗಲ್ಲ, ಪ್ರೀತಿ ಬೇರೆ, ಮದುವೆ ಬೇರೆ. ಪ್ರೀತಿ ಯಾವ ವಯಸ್ಸಿನಲ್ಲಾದರೂ ಮಾಡಬಹುದು, ಮದುವೆ ಆಗಕ್ಕೆ ಆಗಲ್ಲ’ ಎಂದರು . ಆಗ ಸಚಿವ ಈಶ್ವರಪ್ಪ, “ನಿಮಗೆ ವಯಸ್ಸಾಗಿದೆ ಎಂದು ಹೇಳಿದವರು ಯಾರು’ ಎಂದು ಕೇಳಿದರು.
ಅದಕ್ಕೆ ಸಿದ್ದರಾಮಯ್ಯ, ನಾನೇ ಅಂದುಕೊಂಡಿದ್ದೇನೆ ಎಂದರು. ಈಶ್ವರಪ್ಪ ಮತ್ತೆ, ನಿಮ್ಮ ಮನೆಯವರು ಹಾಗೆಂದು ಹೇಳಿದ್ದಾರಾ ಎಂದಾಗ, ಇಲ್ಲ ಅವರು ಹೇಳಿಲ್ಲ. ಹೇಳಿ, ನನಗೆ ವಯಸ್ಸಾಗಿಲ್ಲ ಎಂದು ನಿನಗೆ ಅನಿಸಿದೆಯಾ ಎಂದರು. ಈಶ್ವರಪ್ಪ ಹೌದು ಎಂದಾಗ, ಥ್ಯಾಂಕ್ಸ್ ಎಂದು ಮಾತು ಮುಂದುವರಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿಂದು 299 ಕೋವಿಡ್ ಪಾಸಿಟಿವ್ ಪತ್ತೆ: 2 ಸಾವು
ಮತ್ತೊಂದು ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತಿಗೆ ಈಶ್ವರಪ್ಪ ಅವರು ಕುಳಿತಲ್ಲಿಯೇ ಪ್ರತಿಕ್ರಿಯೆ ಕೊಟ್ಟು ನಗುತ್ತಿರುವಾಗ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯ ಅವರನ್ನು ಕುರಿತು “ನಿಮ್ಮ ಹಾಗೂ ಈಶ್ವರಪ್ಪ ಸಂಬಂಧ ಏನು ಎಂದು ಸ್ವಲ್ಪ ಹೇಳಿ’ ಎಂದರು.
ಅದಕ್ಕೆ ಸಿದ್ದರಾಮಯ್ಯ, ನಂದೂ ಈಶ್ವರಪ್ಪದು ಲವ್ ಆ್ಯಂಡ್ ಹೇಟ್ ಸಂಬಂಧ ಎಂದು ಹೇಳಿದರು. ಅಶೋಕ್, ಅದು ಹೇಗೆ ಅಂತ ಹೇಳಿ ಎಂದು ಕಾಲೆಳೆದರು. ಆಗ ಸಿದ್ದರಾಮಯ್ಯ, ನಾನೂ ನೀನು ಈಶ್ವರಪ್ಪ ಮೂವರೇ ಇದ್ದಾಗ ಮಾತನಾಡೋಣ ಎಂದರು. ಆಗ, ಸ್ಪೀಕರ್, ಆಗ ನನ್ನನ್ನೂ ಕರೆಯಿರಿ ಎಂದು ಹೇಳಿದಾಗ, ಒಕೆ ಆಯ್ತು ಎಂದು ಸಿದ್ದರಾಮಯ್ಯ ಮಾತು ಮುಂದುವರಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.