ಪ್ರತೀ ಸ್ನೇಹ ಪ್ರೀತಿಯಾಗಬಹುದು, ಆದರೆ ಪ್ರತಿ ಪ್ರೀತಿ ಸ್ನೇಹವಾಗದು!

ಆ ಸಂಜೆ, ಕಡಲಿಗಿಳಿದ ಸೂರ್ಯನಿಗೊಲಿದ ಪ್ರೇಮ ಅವಳಿಗೊಲಿಯಲಿಲ್ಲ

Team Udayavani, Aug 6, 2023, 3:48 PM IST

ಪ್ರತೀ ಸ್ನೇಹ ಪ್ರೀತಿಯಾಗಬಹುದು, ಆದರೆ ಪ್ರತಿ ಪ್ರೀತಿ ಸ್ನೇಹವಾಗದು!

ಹೀಗೆ ಸಿಕ್ಕು ಹಾಗೆ ಜಾರಿ ಹೋಗುವ ಅದೆಷ್ಟೋ ಭೇಟಿಗಳ ನಡುವೆ ನಮ್ಮ ಮನಸ್ಸಿಗೆ ಒಲಿದು, ಇಳಿದು ಮನಸೆಂಬ ಪುಸ್ತಕದ ಸ್ನೇಹದ ಪುಟದಲ್ಲಿ ದಾಖಲಾಗುವುದು ಕೆಲವೊಂದಿಷ್ಟೇ ಪರಿಚಯಗಳು. ಎಲ್ಲ ಪರಿಚಯಗಳು ಸ್ನೇಹವಾಗಬೇಕೆಂದೇನಿಲ್ಲ. ಅಂತೆಯೇ ಎಲ್ಲ ಸ್ನೇಹಗಳು ಪ್ರೀತಿಯಾಗಬೇಕಂತಲೂ ಇಲ್ಲ. ಆದರೂ ಕೆಲವೊಮ್ಮೆ ಮುಂಜಾನೆ ಬಾನಿನಿಂದ ಸೋಸಿ ಬಂದ ಸೂರ್ಯನ ಕಿರಣಕ್ಕೆ ಮೊಗ್ಗೊಡೆದು ಅರಳಿದ ಕಮಲದಂತೆ ಇವೆರಡೂ ಸಂಭವಿಸುತ್ತದೆ.

ಸ್ನೇಹಿತನ ಕೈಹಿಡಿದು ನಡೆಯುವ ಅವಳಿಗೆ, ಪ್ರೀತಿ ಕಣ್ಣಲ್ಲಿದ್ದರೂ ಮಾತಿಗಿಳಿಸದ ಅಸಹಾಯಕತೆ ಕಾಡಿತ್ತು. ಅವಳ ಆ ಅಸಹಾಯಕತೆಗೆ ಇವಳು ನೊಂದಿದ್ದಾಗ ಅವನು ಸ್ನೇಹದ ಹೆಸರಿನಲ್ಲಿ ನೀಡಿದ್ದ ಆ ಸಹಾಯದ ಕಥೆ ಕಾರಣವಾಗಿತ್ತು. ಅವನೊಂದಿಗಿನ ಪ್ರತಿ ಭೇಟಿಗೂ ಅರ್ಥ ಹುಡುಕುವವಳು ಅವಳು. ಇನ್ನು ಅವನಂತೂ, ಅಪರಾತ್ರಿ ತನ್ನ ತಂದೆ ಯಾರದೋ ಕೈ ಹಿಡಿದು ನಡೆದರೆನ್ನುವ ಸುದ್ದಿ ಕೇಳಿದ ತಾಯಿಯ ಒಬ್ಬಂಟಿತನದ ಹಣೆಯನ್ನ ತನ್ನೆದೆಗವಚಿ ಸಂತೈಸಿದವನು. ನೊಂದ ಹೆಣ್ಣಿನ ಮನಸನ್ನು ಸಂತೈಸುವ ಪರಿಯನ್ನು ಅವನಿಗೆ ಹೇಳಿಕೊಡಬೇಕಾಗಿರಲಿಲ್ಲ.

ಹೀಗೆ ಸಮುದ್ರದಡದಲ್ಲಿ ಒಂದು ಸಂಜೆ ಅವರಿಬ್ಬರೂ ಹೆಜ್ಜೆ ಬೆರೆಸಿ ನಡೆಯುತ್ತಿರುವಾಗ ಅವನಮ್ಮ ಕಟ್ಟಿ ಅವನು ತಂದು ಕೊಟ್ಟಿದ್ದ ದುಂಡು ಮಲ್ಲಿಗೆ ಮುಡಿದುಕೊಂಡ ಅವಳು, ಅದನ್ನು ಪದೆ ಪದೇ ಮುಟ್ಟಿ ನೋಡಿಕೊಳ್ಳುತ್ತಿದ್ದಳು. ಅದೇನೋ ಕಾಣದ ವಿನೋದ ಅವಳಿಗೆ. ಅಲೆಗಳಿಂದ ಬೀಸಿದ ಗಾಳಿ, ಅವಳು ಮುಡಿದ ಮಲ್ಲಿಗೆಯ ಗಂಧವನ್ನು ಅವನ ಮುಖದತ್ತ ಹೊತ್ತು ತರುತ್ತಿತ್ತು. ಅದಕ್ಕೆ ಪ್ರತಿಯಾಗಿ ಅವನೂ ನಸುನಗುತ್ತಿದ್ದ. ಅವನ ಆ ನಗುವಿಗೂ ಅವಳು ಒಂದು ಅರ್ಥ ಕಲ್ಪಿಸಿಕೊಳ್ಳುತ್ತಿದ್ದಳು.

ನಾನಾ ಕಾರಣಗಳಿಂದ ಒಂದು ಸಂವತ್ಸರ ಭೇಟಿಯಾಗದ ಅವರು. ಭೇಟಿಯಾಗಬೇಕೆಂದುಕೊಂಡದ್ದು ಆ ಒಂದು ಮಳೆ ನಿಂತ ಸಂಜೆ. ಕಲ್ಲು ಬೆಂಚಿಗೊರಗಿ ಕೂತಿದ್ದ ಅವಳು, ಅವನು ಬಂದೊಡನೆ ತಬ್ಬಿ ಪ್ರೇಮ ನಿವೇದಿಸಿಯೇ ಬಿಟ್ಟಳು. ಏನೂ ಸ್ಪಂದಿಸದ ಅವನು ಕಣ್ಣು ಮುಚ್ಚಿದಾಗ. ಅವನ ತಾಯಿಯ ನೊಂದ ದನಿ ಅವಳ ನೀವೇದನಾ ದನಿಯನ್ನೂ ಮೀರಿ ಅವನ ಕಿವಿಯನ್ನಲಂಕರಿಸಿತ್ತು. ಆ ಸಂಜೆ, ಕಡಲಿಗಿಳಿದ ಸೂರ್ಯನಿಗೊಲಿದ ಪ್ರೇಮ ಅವಳಿಗೊಲಿಯಲಿಲ್ಲ. ಅದೇ ಅವರಿಬ್ಬರ ಕಾತುರದ ಕೊನೆಯ ಭೇಟಿ

ನಂತರ ಅವಳದೆಷ್ಟು ಬಾರಿ ಸ್ನೇಹಕ್ಕೆ ಕೈಚಾಚಿದರೂ. ಅವನು ಒಲ್ಲೆಯೆನ್ನದೆ ಒಟ್ಟಿಗಿದ್ದರೂ ಮುಂಚಿದ್ದ ಸ್ನೇಹದ ಸವಿ ಅವಳಿಗೆ ಸಿಗಲಿಲ್ಲ. ಅವನಿಗೂ ಸಹ. ಹೀಗೆ ಯಾವುದೋ ಭೇಟಿಗಳಿಗೆ ನಮ್ಮದೇ ಅರ್ಥವನ್ನು ನೀಡುವ ಗೋಜಿಗೆ ಹೋಗುವ ನಾವು ಅವರ ಜತೆ ನಮ್ಮನ್ನೂ ಕಳೆದುಕೊಂಡು ಬಿಡುತ್ತೇವೆ. ಸ್ನೇಹಕ್ಕೆ ಪ್ರೀತಿಯ ಹೆಸರನ್ನು ನೀವು ಕೊಡಬೇಡಿ. ಸ್ನೇಹದ ಪರಿ ಯನ್ನು ಮೀರಿದರೆ ಅದು ತನ್ನಷ್ಟಕ್ಕೆ ಆಗುತ್ತದೆ.

ದರ್ಶನ್‌ ಕುಮಾರ್‌
ದ್ವಿತೀಯ ಬಿ ಎ, ಪತ್ರಿಕೋದ್ಯಮ ವಿದ್ಯಾರ್ಥಿ.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.

ಟಾಪ್ ನ್ಯೂಸ್

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.