ಸಾಗರೋತ್ಪನ್ನ ರಫ್ತು: ದೇಶದಲ್ಲಿ ಏರಿಕೆ; ರಾಜ್ಯದಲ್ಲಿ ಇಳಿಕೆ!


Team Udayavani, Jun 24, 2024, 7:28 AM IST

ಸಾಗರೋತ್ಪನ್ನ ರಫ್ತು: ದೇಶದಲ್ಲಿ ಏರಿಕೆ; ರಾಜ್ಯದಲ್ಲಿ ಇಳಿಕೆ!

ಮಂಗಳೂರು: ದೇಶವು ಕಳೆದ ಆರ್ಥಿಕ ವರ್ಷದಲ್ಲಿ 17.81 ಲಕ್ಷ ಮೆಟ್ರಿಕ್‌ ಟನ್‌ ಸಾಗರೋತ್ಪನ್ನಗಳ ರಫ್ತಿನ ಮೂಲಕ ಏರಿಕೆ ದಾಖಲಿಸಿದ್ದರೆ, ರಾಜ್ಯದ ಸಾಗರೋತ್ಪನ್ನಗಳ ರಫ್ತಿನಲ್ಲಿ ಈ ಬಾರಿ ಇಳಿಕೆ ಕಂಡಿದೆ.

2022-23ರಲ್ಲಿ ರಾಜ್ಯದಿಂದ 3,12,347.18 ಟನ್‌ ಸಾಗರೋತ್ಪನ್ನಗಳು ರಫ್ತು ಆಗಿದ್ದರೆ, 2023-24ರಲ್ಲಿ ಇದು 3,01,183.43ಕ್ಕೆ ಇಳಿಕೆಯಾಗಿದೆ.

ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಘಟಕದ ಅಂಕಿಅಂಶಗಳ ಪ್ರಕಾರ, ಈ ಬಾರಿಯ ರಫ್ತಿನಲ್ಲಿ ಸುಮಾರು ಶೇ. 3.57 ಪ್ರಮಾಣದಷ್ಟು ಇಳಿಕೆ ಕಂಡುಬಂದಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗದಲ್ಲಿ ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲಿ ಸಾಗರೋತ್ಪನ್ನಗಳಲ್ಲಿ ರಫ್ತು ಕಡಿಮೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಾರಿ ರಾಜ್ಯದಿಂದ ರಫ್ತಾದ ಸಾಗರೋತ್ಪನ್ನಗಳ ಭಾರತೀಯ ಮೌಲ್ಯದಲ್ಲಿ ಮಾತ್ರ ಕೊಂಚ ಏರಿಕೆ ಕಾಣಲಾಗಿದೆ. ಕಳೆದ ವರ್ಷ ರಫ್ತಾದ ಸಾಗರೋತ್ಪನ್ನಗಳ ಮೌಲ್ಯ 4,73,722.95 ಲಕ್ಷ ರೂ.ಗಳಾಗಿದ್ದರೆ, 2023-24ನೇ ಸಾಲಿನಲ್ಲಿ ರಫ್ತಾದ ಸಾಗರೋತ್ಪನ್ನಗಳ ಮೌಲ್ಯ 4,78,504.60 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ.

ರಾಜ್ಯದ ಸಾಗರೋತ್ಪನ್ನಗಳ ರಫ್ತಿನಲ್ಲಿ 2ನೆ ಅತಿ ದೊಡ್ಡ ಸಾಗರೋತ್ಪನ್ನವಾದ ಶೀತಲೀಕರಿಸಿದ ಮೀನುಗಳ ರಫ್ತಿನ ಪ್ರಮಾಣದಲ್ಲಿ ಶೇ. 20.34ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಕರ್ನಾಟಕದಿಂದ 35,495.86 ಟನ್‌ ರಫ್ತಾಗಿದ್ದರೆ, ಈ ಬಾರಿ ಆ ಪ್ರಮಾಣ 27,241.99ಕ್ಕೆ ಕುಸಿದಿದೆ.

ಆದರೆ ಶೀತಲೀಕರಿಸಿದ ಸಿಗಡಿ ರಫ್ತಿನ ಪ್ರಮಾಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಳವಾಗಿದೆ. 2022-23ರಲ್ಲಿ 1,676.25 ಟನ್‌ ರಫ್ತಾಗಿದ್ದರೆ, ಈ ಬಾರಿ 2,431.70 ಟನ್‌ ಸಿಗಡಿ ರಾಜ್ಯದಿಂದ ರಫ್ತಾಗುವ ಮೂಲಕ ಶೇ. 45.07ರಷ್ಟು ಏರಿಕೆ ದಾಖಲಾಗಿದೆ. ಯುಎಸ್‌ಎ ಮತ್ತು ಚೀನದಲ್ಲಿ ಭಾರತದ ಶೀತಲೀಕರಿಸಿದ ಸಿಗಡಿಗೆ ಭಾರೀ ಬೇಡಿಕೆ ಇದ್ದ ಕಾರಣದಿಂದ ಇದರಲ್ಲಿ ಏರಿಕೆ ಆಗಿದೆ.

ಟಾಪ್ ನ್ಯೂಸ್

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

prahlad-joshi

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Rain ಕರಾವಳಿಯಲ್ಲಿ ಬಿಡುವು ನೀಡಿದ ಮಳೆ

Rain ಕರಾವಳಿಯಲ್ಲಿ ಬಿಡುವು ನೀಡಿದ ಮಳೆ

Ivan D’Souza”ನೀಟ್‌’ನಿಂದ ರಾಜ್ಯ ಹೊರಗೆ ಬರಲು ನಿಲುವಳಿ ಸೂಚನೆ

Ivan D’Souza”ನೀಟ್‌’ನಿಂದ ರಾಜ್ಯ ಹೊರಗೆ ಬರಲು ನಿಲುವಳಿ ಸೂಚನೆ

Captain Brijesh Chowta ಹಿಂದುತ್ವದ ಆಧಾರದಲ್ಲಿ ವಿಕಸಿತ ದಕ್ಷಿಣ ಕನ್ನಡ

Captain Brijesh Chowta ಹಿಂದುತ್ವದ ಆಧಾರದಲ್ಲಿ ವಿಕಸಿತ ದಕ್ಷಿಣ ಕನ್ನಡ

dc

Electrical failure: ವರದಿ ನೀಡುವಂತೆ ಮೆಸ್ಕಾಂ ಎಂ.ಡಿ.ಗೆ ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

robbers

Hunsur; ಮನೆಗೆ ಕನ್ನ ಹಾಕಿದ ಕಳ್ಳರಿಂದ ಕೋಟ್ಯಂತರ ರೂ. ನಗ, ನಗದು ದರೋಡೆ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

1-qeqewqe

Ballari: ನಾಲ್ವರು ರೈತರಿಂದ ವಿಷಸೇವಿಸಿ ಆತ್ಮಹತ್ಯೆ ಯತ್ನ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.