ಕೌಟುಂಬಿಕ ಕಲಹ: ದೂರು-ಪ್ರತಿದೂರು ದಾಖಲು
Team Udayavani, Apr 2, 2024, 1:03 AM IST
ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಕರ್ನಂತೊಡಿ ಎಂಬಲ್ಲಿ ಪತಿ ರಾತ್ರಿ ಮನೆಗೆ ಬಂದಾಗ ಪತ್ನಿ ತಡವಾಗಿ ಬಾಗಿಲು ತೆಗೆದ ವಿಚಾರವಾಗಿ ಪತಿ ಹಲ್ಲೆ ಮಾಡಿದರೆಂದು ದೂರು ದಾಖಲಾಗಿದ್ದು, ಮತ್ತೂಂದೆಡೆ ಮನೆಯಲ್ಲಿದ್ದ ವ್ಯಕ್ತಿಗೆ ಪತ್ನಿ ಮನೆಯವರು ಹಲ್ಲೆ ನಡೆಸಿರುವ ವಿಚಾರವಾಗಿ ಪತಿ ಠಾಣೆಗೆ ದೂರು ನೀಡಿದ ಘಟನೆ ಮಾ. 30ರಂದು ನಡೆದಿದೆ.
ಓಡಿಲಾ°ಳ ಗ್ರಾಮದ ರಾಘವೇಂದ್ರ ಗೌಡ (40) ಅವರು ಪತ್ನಿಯೊಂದಿಗೆ ಕನ್ಯಾಡಿಯಲ್ಲಿ ನಡೆದ ಗೃಹ ಪ್ರವೇಶಕ್ಕೆ ತೆರಳಿದ್ದು, ಅಲ್ಲಿ ಪತ್ನಿಯ ಸಂಬಂಧಿ ಆತ್ಮೀಯತೆಯಿಂದ ಮಾತನಾಡಿಸಿದ್ದರು. ಬಳಿಕ ಅಲ್ಲಿಂದ ಪತಿ ಸಂಬಂಧಿಕರ ಮನೆಗೆ ದೈವದ ಕಾರ್ಯಕ್ರಮಕ್ಕೆ ತೆರಳಿ ವಾಪಸು ರಾತ್ರಿ ಸುಮಾರು 12.30ಕ್ಕೆ ಮನೆಗೆ ಬಂದು ಬಾಗಿಲು ಬಡಿದಾಗ ಬಾಗಿಲು ತೆರೆಯಲು ತಡವಾಗಿರುವ ವಿಚಾರವಾಗಿ ಪತ್ನಿ ಜತೆ ಜಗಳವಾಡಿದ್ದಾರೆ.
ಅನಂತರ ಜೀವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ಅಣ್ಣನಿಗೆ ತಿಳಿಸಿದ್ದರು. ಅದರಂತೆ ಅಣ್ಣ ರಾತ್ರಿ ಅವರ ತಂದೆ ಮತ್ತು ಇತರರ ಜತೆಯಲ್ಲಿ ಬಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಕರೆದುಕೊಂಡು ಹೋಗುವಾಗ ಜಗಳವಾಡಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತಿಯಿಂದ ಪ್ರತಿದೂರು
ಈ ವಿಚಾರವಾಗಿ ಪತಿ ರಾಘವೇಂದ್ರ ಗೌಡ ಅವರು ಸಂಬಂಧಿಕರ ಮನೆಯ ದೈವದ ಕಾರ್ಯಕ್ರಮದಿಂದ ರಾತ್ರಿ ಬಂದು ಬಾಗಿಲು ತೆಗೆಯುವ ವಿಚಾರದಲ್ಲಿ ಪತ್ನಿ ಜತೆ ಜಗಳವಾಗಿದ್ದು ಈ ವೇಳೆ ಬಾಗಿಲನ್ನು ದೂಡಿದ ಪರಿಣಾಮ ಬಾಗಿಲು ಪತ್ನಿಯ ಹಣೆಗೆ ತಾಗಿ ಗಾಯವಾಗಿದೆ. ಮಾರನೇ ದಿನ ಬೆಳಗ್ಗೆ ಮಾ. 31ರಂದು ಪತ್ನಿ ಮನೆಯವರು ಹಾಗೂ ಇತರರಾದ ಸಂಜೀವ ಗೌಡ, ವಿಜಯ ಗೌಡ, ಹರೀಶ, ಚಂದ್ರಶೇಖರ, ಸದಾನಂದ ರಂಜಿತ್, ಶಶಿಧರ ಹಾಗೂ ಇತರರು ಕಾರಿನಲ್ಲಿ ಬಂದು ಏಕಾಏಕಿ ಬೆತ್ತದಲ್ಲಿ ಮತ್ತು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು, ಬಿಡಿಸಲು ಬಂದ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಪತ್ನಿಯನ್ನು ಅವರೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಚಾರವಾಗಿ ರಾಘವೇಂದ್ರ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ
Eid Milad: ರ್ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ
Sullia: ಬೈಕ್ ಗಳ ನಡುವೆ ಅಪಘಾತ
ವಿಟ್ಲ: ಅಡಿಕೆ ಸುಲಿಯುವ ಯಂತ್ರ ಕಂಡು ಹಿಡಿದ ನರಸಿಂಹ ಭಟ್ ವಿಧಿವಶ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.