Politics: ಚುನಾವಣ ಸ್ಪರ್ಧೆ 18 ವರ್ಷಕ್ಕೆ ಇಳಿಸುವ ಚಿಂತನೆ: ಕುಟುಂಬದ ಹಸ್ತಕ್ಷೇಪ ಹೆಚ್ಚು

ಚುನಾವಣ ಸ್ಪರ್ಧೆ ವಯೋಮಿತಿ 25 ರಿಂದ 18 ವರ್ಷಕ್ಕೆ ಇಳಿಸುವ ಚಿಂತನೆ ಕೇಳಲು ಚೆನ್ನಾಗಿದೆ. ಆದರೆ ಅದು ಸೂಕ್ತವಾದ ನಿರ್ಧಾರವಲ್ಲ ಎನ್ನಬಹುದು.

Team Udayavani, Aug 20, 2023, 11:50 PM IST

politi

ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿ ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಯುವಕರಿಗೆ ರಾಜಕಾರಣದಲ್ಲಿ ಆಸಕ್ತಿ ಮೂಡಿಸಬೇಕು, ಅವರನ್ನು ರಾಜಕಾರಣದ ಕಡೆ ಆಕರ್ಷಿತರಾಗಿ ಮಾಡಬೇಕು ಎಂಬ ವಿಚಾರದಿಂದ ಸಂಸದೀಯ ಸಮಿತಿಯೊಂದು ಮಾಡಿದ ಶಿಫಾರಸು ಉತ್ತಮವಾದ ನಿಲುವು. ಆದರೆ ಅದು 18 ವರ್ಷಕ್ಕೆ ತರುವುದು ಸೂಕ್ತವಲ್ಲ, ಇದು ಹಲವಾರು ಸಮಸ್ಯೆಗಳು ಉದ್ಭವಿಸಲು ಕಾರಣವಾಗಬಹುದು.

18ನೇ ವಯಸ್ಸಿನ ಯುವಕನಿಗೆ ಪರಿಣಾಮಕಾರಿಯಾಗಿ ನಿರ್ಧಾರ ಮತ್ತು ಆಡಳಿತಕ್ಕೆ ಅಗತ್ಯವಾದ ಅನುಭವ, ಪ್ರಭುದ್ದತೆ ಕಡಿಮೆ ಇರುತ್ತದೆ. ಜತೆಗೆ‌ ಸರಿಯಾದ ಶಿಕ್ಷಣ ಇರುವುದಿಲ್ಲ. 18ನೇ ವಯಸ್ಸಿನ ವ್ಯಕ್ತಿ ಚುನಾ ವಣೆಯಲ್ಲಿ ಸ್ಪರ್ಧಿಸಿದರೆ ಅವರು ಬಾಹ್ಯ ಪ್ರಭಾವಕ್ಕೆ ಹೆಚ್ಚು ಒಳಗಾಗಬಹುದು.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಹೊಣೆಗಾರಿಕೆ ಬಗ್ಗೆ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಬಗ್ಗೆ ಮತ್ತು ದೇಶದ ಆಡಳಿತ ವ್ಯವಸ್ಥೆ ಬಗ್ಗೆ ಚುನಾವಣೆ ನಿಲ್ಲುವ ವ್ಯಕ್ತಿಗೆ ಜ್ಞಾನ ಇರಬೇಕು. ಅದನ್ನು ಪಡೆಯಲು ಸರಿಯಾದ ಶಿಕ್ಷಣ ಅವಶ್ಯ ಅಥವಾ ರಾಜಕೀಯದಲ್ಲಿ ಅನು ಭವ ಅವಶ್ಯ. ಆದರೆ 18ನೇ ವಯಸ್ಸಿಗೆ ಪದವಿ ಶಿಕ್ಷಣ ಕೂಡಾ ಪಡೆಯಲು ಸಾಧ್ಯ ವಿಲ್ಲ.

ಸರಿಯಾದ ಶಿಕ್ಷಣ, ಅನುಭವವಿಲ್ಲದೆ ಇರುವ ವ್ಯಕ್ತಿಗೆ ಚುನಾವಣೆ ನಿಲ್ಲಲು ಅವಕಾಶ ನೀಡುದರೆ ಆ ವ್ಯಕ್ತಿಯು ಅಧಿಕಾರ ನಡೆಸಲು ಬೇರೆಯವರನ್ನು ಅವಲಂ ಬಿಸಬೇಕಾಗುತ್ತದೆ. ಅವರ ಅಧಿಕಾರದಲ್ಲಿ ಕುಟುಂಬದವರು ಹಸ್ತಕ್ಷೇಪ ಮಾಡುವ ಸಾಧ್ಯತೆ ಹೆಚ್ಚು.

ಲೋಕಸಭೆ ಮತ್ತು ವಿಧಾನಸಭೆಯ ವ್ಯಾಪ್ತಿಯ ದೊಡ್ಡದಾಗಿರುತ್ತದೆ. ಜವಾಬ್ದಾರಿ ಹೆಚ್ಚು ಇರುತ್ತದೆ ಮತ್ತು ಅಲ್ಲಿ ಲಕ್ಷಾಂತರ ಜನರ ಸಮಸ್ಯೆ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಚಿಂತನೆೆ ಇರುವ ವ್ಯಕ್ತಿ ಬಹಳ ಅವಶ್ಯ. ಅಂತಹ ಹುದ್ದೆಗಳಿಗೆ ಅಧಿಕಾರಕ್ಕೆ ಬರುವ ವ್ಯಕ್ತಿ ಉತ್ತಮವಾದ ಶಿಕ್ಷಣ ಅಥವಾ ರಾಜಕೀಯ ಬಗ್ಗೆ ತಿಳಿದುಕೊಂಡ ವ್ಯಕ್ತಿ ಇರಬೇಕು.
ಜನರ ಸಮಸ್ಯೆ ಬಗ್ಗೆ,ಕ್ಷೇತ್ರದ ಅಭಿವೃದ್ದಿ ಬಗ್ಗೆ ಕನಸು ಹೊತ್ತುಕೊಂಡ ಪ್ರಜ್ಞಾವಂತ ವ್ಯಕ್ತಿ ಇದ್ದರೆ ಸೂಕ್ತ. ಇದರಿಂದ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಆದರೆ 18 ವರ್ಷದ ಯುವಕನಿಂದ ಇದನ್ನು ನಿರೀಕ್ಷಿಸುವುದು ಕಷ್ಟ. ಹಾಗಾಗಿ ಚುನಾವಣೆ ನಿಲ್ಲಲು 18ನೇ ವಯಸ್ಸಿಗೆ ಇಳಿಸುವ ನಿರ್ಧಾರ ಸರಿಯಲ್ಲ. ಇದರ ಬಗ್ಗೆ ಬಹಳಷ್ಟು ಅಧ್ಯಯನ, ತಜ್ಞರ ಜತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಎಚ್‌.ಎಚ್‌.ಬೇಪಾರಿ

ಟಾಪ್ ನ್ಯೂಸ್

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupati: ಲಡ್ಡು ಪ್ರಸಾದ ಪ್ರಮಾದ!

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Colera

Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.