Fraud Case ಬಾಡಿಗೆ ನೀಡದೆ ವಂಚನೆ, ಜೀವಬೆದರಿಕೆ: ದೂರು ದಾಖಲು
Team Udayavani, Jan 29, 2024, 12:29 AM IST
ಮಂಗಳೂರು: ಮಹೇಶ್ ಫೌಂಡೇಶನ್ ಟ್ರಸ್ಟ್ ಸಂಸ್ಥೆಗೆ ಸೇರಿದ ವ್ಯಕ್ತಿಗಳು ತನಗೆ ಜೀವ ಬೆದರಿಕೆ, ಮೋಸ, ವಿಶ್ವಾಸ ದ್ರೋಹ ಮಾಡಿದ್ದು, 1.90 ಕೋ.ರೂ. ಬಾಡಿಗೆ ನೀಡದೆ ವಂಚನೆ ಮಾಡಿದ್ದಾರೆ ಎಂದು ಗುರುದೇವ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ರಾಮ ಮೋಹನ್ ರೈ ಅವರು ಬರ್ಕೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಕಿ ಇರಿಸಿದ್ದ ಹಣವನ್ನು ಪಾವತಿಸಲು ತಿಳಿಸಿದಾಗ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಕಾಲೇಜಿನ ಒಂದು ಕೋಣೆಯಲ್ಲಿ ಬೀಗ ಹಾಕಿ ಇಟ್ಟಿದ್ದ ಹಾಗೂ ಕಟ್ಟಡದ ಇತರ ಕೋಣೆಗಳಲ್ಲಿದ್ದ ಸುಮಾರು 125 ಬೆಂಚು, 150 ಡೆಸ್ಕ್ ಹಾಗೂ 50 ಕುರ್ಚಿಗಳನ್ನು 2023ರ ಜು. 22ರಂದು ಬೇರೆ ಕಡೆಗೆ ಸಾಗಾಟ ಮಾಡಿದ್ದಾರೆ.
ಇವುಗಳ ಮೌಲ್ಯ ಸುಮಾರು 50 ಲಕ್ಷ ರೂ..
ಮಾತ್ರವಲ್ಲದೆ ಜು. 27ರಂದು ಮಹೇಶ್ ಫೌಂಡೇಶನ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ, ಗೂಂಡಾಗಳ ಜತೆ ಬಂದು ಸೆಕ್ಯುರಿಟಿ ಗಾರ್ಡ್ಗೆ ಹಲ್ಲೆ ಮಾಡಿ ಬೀಗ ಒಡೆದು, ಟ್ಯಾಕ್ಸ್ ರಶೀದಿ, ಪೀಠೊಪಕರಣಗಳ ದಾಖಲೆಯನ್ನು ಕಳ್ಳತನ ಮಾಡಿದ್ದಾರೆ ಎಂದು ಮೋಹನ್ ರೈ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.