ಟ್ರೈನಿ ಟೆಕ್ಕಿಯಿಂದ ಸಿಇಒವರೆಗೆ…


Team Udayavani, Feb 12, 2022, 6:05 AM IST

tata-a

ಇದು ಟಾಟಾ ಗ್ರೂಪ್‌ನಲ್ಲಿ ಎನ್‌.ಚಂದ್ರಶೇಖರನ್‌ ಅವರ ದಾರಿ. ತಮಿಳುನಾಡಿನ ಮೂಲದವರಾದ ಇವರು, 1987ರಲ್ಲಿ ಟಿಸಿಎಸ್‌ಗೆ ಟ್ರೈನಿ ಟೆಕ್ಕಿಯಾಗಿ ಸೇರ್ಪಡೆಯಾಗಿದ್ದರು. ಅಲ್ಲಿಂದ ಇಲ್ಲಿವರೆಗೂ ಟಾಟಾ ಗ್ರೂಪ್‌ನಲ್ಲೇ ವೃತ್ತಿಜೀವನ ಸವೆಸಿರುವ ಚಂದ್ರಶೇಖರನ್‌ ಅವರು, 2017ರಲ್ಲಿ ಗ್ರೂಪ್‌ನ ಸಿಇಒ ಆಗಿ ನೇಮಕವಾದರು. ವಿಶೇಷವೆಂದರೆ ಆಗ ಸೈರಸ್‌ ಮಿಸ್ತ್ರಿ ವಿಚಾರದಲ್ಲಿ ಟಾಟಾ ಗ್ರೂಪ್‌ ಕಾನೂನಿನ ಸಮಸ್ಯೆಗಳಿಂದ ನರಳುತ್ತಿತ್ತು. ಆಗ ಟಾಟಾ ಗ್ರೂಪ್‌ ಕೈಹಿಡಿದ ಇವರು, ಗ್ರೂಪ್‌ನ ಅಧ್ಯಕ್ಷ ರತನ್‌ ಟಾಟಾ ಅವರ ಅತ್ಯಂತ ಸಮೀಪವರ್ತಿ.

154 ವರ್ಷಗಳ ಇತಿಹಾಸವಿರುವ ಮತ್ತು 8,00,000 ಮಂದಿ ಉದ್ಯೋಗಿಗಳು ಇರುವ ಟಾಟಾ ಸಂಸ್ಥೆಗೆ ಸದೃಢವಾದ ನಾಯಕತ್ವ ಬೇಕಾಗಿತ್ತು. ಸೈರಸ್‌ ಮಿಸ್ತ್ರಿ ಅವರನ್ನು ದಿಢೀರನೇ ಟಾಟಾ ಗ್ರೂಪ್‌ ಸಿಇಒ ಹುದ್ದೆಯಿಂದ ಕಿತ್ತು ಹಾಕಿತ್ತು. ಬಳಿಕ ಅವರ ಸ್ಥಾನಕ್ಕೆ ಎನ್‌.ಚಂದ್ರಶೇಖರನ್‌ ಅವರನ್ನು ನೇಮಕ ಮಾಡಲಾಗಿತ್ತು. ಒಂದು ಹಂತದಲ್ಲಿ ಎನ್‌ಸಿಎಲ್‌ಎಟಿ ಚಂದ್ರಶೇಖರನ್‌ ಅವರ ನೇಮಕ ಅಸಿಂಧು ಹೇಳಿದ್ದರೂ ಕಡೆಗೆ ಸುಪ್ರೀಂ ಕೋರ್ಟ್‌ ಚಂದ್ರಶೇಖರನ್‌ ಅವರ ನೇಮಕವನ್ನು ಸಿಂಧುಗೊಳಿಸಿತ್ತು. ಅಲ್ಲಿಗೆ ಟಾಟಾ ಗ್ರೂಪ್‌ನಲ್ಲಿ ತಲೆದೋರಿದ್ದ ಸಮಸ್ಯೆ ನಿವಾರಣೆಯಾಗಿತ್ತು. ಅಂದಹಾಗೆ ಚಂದ್ರಶೇಖರನ್‌ ಅವರು ಪತ್ನಿ ಲಲಿತಾ ಅವರ ಜತೆ  ಮುಂಬಯಿಯಲ್ಲೇ ವಾಸವಾಗಿದ್ದಾರೆ. ಇವರಿಗೆ ಫೋಟೋಗ್ರಫಿ ಎಂದರೆ ಅಚ್ಚುಮೆಚ್ಚಂತೆ. ಹಾಗೆಯೇ, ಸಂಗೀತವೆಂದರೆ ಪಂಚಪ್ರಾಣ. ಮ್ಯಾರಥಾನ್‌ ಎಂದರೂ ಚಂದ್ರಶೇಖರನ್‌ ಅವರಿಗೆ ಇಷ್ಟ.

ಚಂದ್ರಶೇಖರನ್‌ ಅವರು ತಿರುಚ್ಚಿಯ ರೀಜನಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವೃತ್ತಿಪರ ವ್ಯಾಸಂಗ ಮಾಡಿದ್ದಾರೆ. 1987ರಲ್ಲಿ ಟ್ರೈನಿ ಟೆಕ್ಕಿಯಾಗಿ ಟಿಸಿಎಸ್‌ಗೆ ಸೇರಿದರು. ಅಲ್ಲಿಂದ ಟಾಟಾ ಸನ್ಸ್‌ ಕಂಪೆನಿಯಲ್ಲಿ ಹಲವಾರು ಜವಾಬ್ದಾರಿ ನಿರ್ವಹಿಸಿದ್ದರು. 2016ರಲ್ಲಿ ಇವರನ್ನು ನಿರ್ದೇಶಕ ಮಂಡಳಿಗೆ ಸೇರಿಸಿಕೊಳ್ಳಲಾಯಿತು. 2017ರಲ್ಲಿ ಅಧಿಕೃತವಾಗಿ ಟಾಟಾ ಸನ್ಸ್‌ನ ಸಿಇಒ ಆದರು. ಸದ್ಯ ಇವರ ನೇತೃತ್ವದಲ್ಲಿ 29 ಕಂಪೆನಿಗಳಿವೆ. 2021ರ ಅಂತ್ಯದ ಹೊತ್ತಿಗೆ ಈ ಗುಂಪಿನ ಒಟ್ಟಾರೆ ಮಾರುಕಟ್ಟೆ ಮೌಲ್ಯ 314 ಬಿಲಿಯನ್‌ ಡಾಲರ್‌ ಆಗಿದೆ. ಚಂದ್ರಶೇಖರನ್‌ ಅವರು ಕಂಪೆನಿಯ ಸಿಇಒ ಹುದ್ದೆ ವಹಿಸಿಕೊಂಡ ಅನಂತರ ಮೊದಲು ಮಾಡಿದ ಕೆಲಸ ನಷ್ಟದಲ್ಲಿದ್ದ ಟಾಟಾ ಟೆಲಿಸರ್ವೀಸಸ್‌ ಅನ್ನು ಏರ್‌ಟೆಲ್‌ಗೆ ಮಾರಾಟ ಮಾಡಿದ್ದು. ಇದು ಕಂಪೆನಿಯ ಮೊಬೈಲ್‌ ಫೋನ್‌ ವ್ಯಾಪಾರ ನಡೆಸುತ್ತಿತ್ತು. 2018ರಲ್ಲಿ ಟಾಟಾ ಸನ್ಸ್‌ 35,200 ಕೋಟಿ ರೂ.ಗಳಿಗೆ ಭೂಷಣ್‌ ಸ್ಟೀಲ್‌ ಕಂಪೆನಿಯನ್ನು ಖರೀದಿ ಮಾಡಿದರು. ಇದು ಭಾರತದ ಕಾರ್ಪೋರೆಟ್‌ ವಲಯದಲ್ಲೇ ಅತ್ಯಂತ ದೊಡ್ಡ ವ್ಯಾಪಾರವಾಗಿದೆ.  2021ರ ಅಕ್ಟೋಬರ್‌ನಲ್ಲಿ ಟಾಟಾ ಕಂಪೆನಿ, ತನ್ನಿಂದಲೇ ದೂರವಾಗಿದ್ದ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಅನ್ನು ಖರೀದಿಸಿತು. ಚಂದ್ರಶೇಖರನ್‌ ಅವರ ನೇತೃತ್ವದಲ್ಲಿ ಆದ ಬಹು ಪ್ರಾಮುಖ್ಯದ ಡೀಲ್‌ ಇದು. ಏರ್‌ ಇಂಡಿಯಾ ಖರೀದಿ ಮಾಡಿದ ಅನಂತರ ಈಗ ಟಾಟಾ ಗ್ರೂಪ್‌, ಒಟ್ಟು 3 ವಿಮಾನಯಾನ ಕಂಪೆನಿಗಳನ್ನು ಹೊಂದಿದಂತೆ ಆಗಿದೆ. ಇದರ ಜತೆಗೆ ಕಳೆದ ವರ್ಷವಷ್ಟೇ ಬಿಗ್‌ಬಾಸ್ಕೆಟ್‌ ಅನ್ನು 9,500 ಕೋಟಿ ರೂ.ಗಳಿಗೆ ಖರೀದಿ ಮಾಡಿತು. ಜತೆಗೆ ಟಾಟಾ ಸ್ಟೀಲ್‌ ಕಂಪೆನಿ ಹೊಂದಿದ್ದ ಸಾಲದ ಮೊತ್ತವನ್ನು ಕಡಿಮೆ ಮಾಡಿದ್ದು ಚಂದ್ರಶೇಖರನ್‌ ಅವರ ಅಸಾಮಾನ್ಯ ಸಾಧನೆ.

ಟಾಪ್ ನ್ಯೂಸ್

manish sisodia

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..

BJP–Cong-sdpi

By Polls: ವಿಧಾನ ಪರಿಷತ್‌ ಉಪಚುನಾವಣೆ: ಅಂತಿಮ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು

rape

Vadodara ; ಗಾರ್ಬಾ ಸಂಭ್ರಮಿಸಲು ಹೋಗುತ್ತಿದ್ದ 16 ವರ್ಷದ ಬಾಲಕಿಯ ರೇ*ಪ್!

ಈ ಕೆರೆಯಲ್ಲಿ ಮಿಂದೆದ್ದರೆ ಸಕಲ ಚರ್ಮ ರೋಗಗಳು ಮಾಯವಾಗುತ್ತಂತೆ… ಎಲ್ಲಿದೆ ಈ ಪುಣ್ಯ ಕ್ಷೇತ್ರ

ಈ ಕೆರೆಯಲ್ಲಿ ಮಿಂದೆದ್ದರೆ ಸಕಲ ಚರ್ಮ ರೋಗಗಳು ಮಾಯವಾಗುತ್ತೆ… ಎಲ್ಲಿದೆ ಈ ಪುಣ್ಯ ಕ್ಷೇತ್ರ

Result 2024: ಅ.8ರಂದು ಜಮ್ಮು-ಕಾಶ್ಮೀರ, ಹರ್ಯಾಣ ಚುನಾವಣ ಫಲಿತಾಂಶ, ಯಾರಿಗೆ ಗದ್ದುಗೆ?

Result 2024: ಅ.8ರಂದು ಜಮ್ಮು-ಕಾಶ್ಮೀರ, ಹರ್ಯಾಣ ಚುನಾವಣ ಫಲಿತಾಂಶ, ಯಾರಿಗೆ ಗದ್ದುಗೆ?

1-chir

Video viral; ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ಬಸ್‌ಗೆ ನುಗ್ಗಲು ಮುಂದಾದ ಚಿರತೆ!

Veerashaiva Lingayat Mahasabha’s opposition to caste census: Shamanur Shivshankarappa

Davanagere: ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾದ ವಿರೋಧ: ಶಾಮನೂರು ಶಿವಶಂಕರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navratri Special: ತಾಯ್ತನ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri Special: ತಾಯ್ತನದ ಭಾವ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

1-weqewewqe

Yakshagana;ಇನ್ನೂ ನೂರಾರು ಸುಶ್ರಾವ್ಯ ರಾಗಗಳ ಅಳವಡಿಕೆ ಸಾಧ್ಯ: ವಿದ್ವಾನ್‌ ಗಣಪತಿ ಭಟ್‌

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

8

Koratagere: ಕುಸಿದು ಬಿದ್ದು ವಿದ್ಯಾರ್ಥಿ ಸಾವು; ಹೃದಯಾಘಾತ ಶಂಕೆ

manish sisodia

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..

ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

BJP–Cong-sdpi

By Polls: ವಿಧಾನ ಪರಿಷತ್‌ ಉಪಚುನಾವಣೆ: ಅಂತಿಮ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು

rape

Vadodara ; ಗಾರ್ಬಾ ಸಂಭ್ರಮಿಸಲು ಹೋಗುತ್ತಿದ್ದ 16 ವರ್ಷದ ಬಾಲಕಿಯ ರೇ*ಪ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.