![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 21, 2023, 1:19 PM IST
ಗಂಗಾವತಿ: ಮೂರು ತಾಸಿಗೂ ಹೆಚ್ಚು ಚಿಣಿಮಿಣಿ ಹಾವೊಂದು ಬೈಕ್ ಗಳಲ್ಲಿ ಹೊಕ್ಕ ಪರಿಣಾಮ ಬೈಕ್ ಮಾಲೀಕರು ಪರದಾಡಿದ ಘಟನೆ ನಗರದ ಜಗಜೀವನರಾಂ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ವಡ್ಡರಹಟ್ಟಿ ಗ್ರಾ.ಪಂ. ಸದಸ್ಯ ಪ್ರಭುರಾಜ ಎಂಬವರು ಕೆಲಸದ ನಿಮಿತ್ತ ಜಗಜೀವನರಾಂ ವೃತ್ತದಲ್ಲಿ ಹತ್ತಿರ ಜೆರಾಕ್ಸ್ ಅಂಗಡಿ ಬಳಿ ಬೈಕ್ ನಿಲ್ಲಿಸಿದ ಸಂದರ್ಭದಲ್ಲಿ ಗಿಡದ ಮೇಲಿಂದ ಚಿಣಿಮಿಣಿ ಹಾವು ಸೈನ್ ಬೈಕ್ ಮೇಲೆ ಬಿದ್ದಿದೆ.
ಹಾವನ್ನು ಓಡಿಸಲು ಅಲ್ಲಿದ್ದವರು ಶಬ್ದ ಮಾಡಿದ ತಕ್ಷಣ ಹಾವು ಬೈಕ್ ಸೀಟಿನೊಳಗೆ ಹೋಗಿ ಕುಳಿತುಕೊಂಡಿದ್ದರಿಂದ ಬೈಕ್ ಸೀಟ್ ತೆಗೆದು ಹುಡುಕಿದರೂ ಹಾವು ಕಂಡು ಬರಲಿಲ್ಲ.
ನಂತರ ಒಂದು ಬಕೇಟ್ ನೀರು ಬೈಕ್ ಮೇಲೆ ಸುರಿದ ತಕ್ಷಣ ಹೊರಗೆ ಬಂದ ಹಾವು ಮೆಹಮೂದ್ ಎಂಬ ಯುವಕನ ಬೈಕ್ ನೊಳಗೆ ಹೊಕ್ಕಿದೆ. ನಂತರ ಮಹೆಬೂಬ ಎನ್ನುವ ಉರಗತಜ್ಷ (ಹಾವು ಹಿಡಿಯುವ ವ್ಯಕ್ತಿ) ನನ್ನು ಕರೆಸಿ ಹಲವು ಪ್ರಯತ್ನದ ನಂತರ ಹಲವು ತಂತ್ರಗಳ ಮೂಲಕ ಹಾವನ್ನು ಹಿಡಿದು ನಂತರ ಬೆಟ್ಟ ಪ್ರದೇಶಕ್ಕೆ ಬಿಡಲಾಯಿತು.
ಹಾವುಗಳು ಪರಿಸರ ಸ್ನೇಹಿ: ಹಾವುಗಳು ಪರಿಸರ ಸ್ನೇಹಿಯಾಗಿದ್ದು ಬೇಸಿಗೆ ಬಿಸಿಲಿನ ತಾಪಕ್ಕೆ ಹೊರಗೆ ಬರುತ್ತವೆ. ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಹಾವುಗಳನ್ನು ಹೊಡೆಯಬಾರದು. ಒಂದು ವೇಳೆ ಹಾವು ಬಂದರೂ ತಮ್ಮನ್ನು ಸಂಪರ್ಕಿಸಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ. ಈಗಾಗಲೇ 10 ಸಾವಿರ ಹಾವುಗಳನ್ನು ಉಚಿತವಾಗಿ ಹಿಡಿದು ಅರಣ್ಯ ಕ್ಕೆ ಬಿಡಲಾಗಿದೆ.
ಮನೆ ಮತ್ತು ಜನ ನಿಬಿಡ ಪ್ರದೇಶದಲ್ಲಿ ಹಾವು ಕಂಡು ಬಂದಲ್ಲಿ ಅವುಗಳನ್ನು ಕೊಲ್ಲದೇ ತಮ್ಮನ್ನು ಸಂಪರ್ಕಿಸುವಂತೆ ಮಹೆಬೂಬ ಪಂಪನಗರ ಮನವಿ ಮಾಡಿದ್ದಾರೆ. ಮೊ.ಸಂ. 9916582793 ಗೆ ಕರೆ ಮಾಡಿ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.