ಜಿಯೋ- ಫೇಸ್‌ಬುಕ್‌: ಭಾಯಿ ಭಾಯಿ


Team Udayavani, Apr 27, 2020, 1:06 PM IST

ಜಿಯೋ- ಫೇಸ್‌ಬುಕ್‌: ಭಾಯಿ ಭಾಯಿ

ಟೆಲಿಕಾಂ ಕ್ಷೇತ್ರದ ದೈತ್ಯ ಎಂದೇ ಹೆಸರಾದ ಜಿಯೋ ಮತ್ತು ಸಾಮಾಜಿಕ ಜಾಲತಾಣದ ದೊರೆಯಾಗಿರುವ ಫೇಸ್‌ಬುಕ್‌ ಇದೀಗ ಒಂದಾಗಿವೆ. ಇದರಿಂದ ಉದ್ಯಮ ಲೋಕದಲ್ಲಿ ಹಲವು ಬದಲಾವಣೆಗಳು ಆಗಲಿವೆ ಎಂಬುದು ಹಲವರ ಲೆಕ್ಕಾಚಾರದ ಮಾತು…

ಜಿಯೊ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿಯೆಬ್ಬಿಸಿದ್ದ ರಿಲಯನ್ಸ್, ಈಗ ರೀಟೇಲ್‌ ಮತ್ತು ಡಿಜಿಟಲ್‌ ಪೇಮೆಂಟ್‌ ಕ್ಷೇತ್ರದಲ್ಲಿ ಅಂಥದ್ದೇ ಸಂಚಲನ ಸೃಷ್ಟಿಸುವ ಸೂಚನೆಯನ್ನು ನೀಡಿದೆ. ಅದಕ್ಕೆ ಕಾರಣವಾಗಿರುವುದು, ಜಿಯೊ ಮತ್ತು ಫೇಸ್‌ಬುಕ್‌ ಸಂಸ್ಥೆಯ ನಡುವೆ ಏರ್ಪಟ್ಟಿರುವ ಒಪ್ಪಂದ. ಜಿಯೊ ಸಂಸ್ಥೆಯ ಶೇ.10ರಷ್ಟು ಷೇರನ್ನು, ಬರೋಬ್ಬರಿ 43,574 ಕೋಟಿ ರೂ ತೆತ್ತು, ಫೇಸ್‌ಬುಕ್‌ ಖರೀದಿಸಿದೆ.

ರಿಲಯನ್ಸ್ ಲೆಕ್ಕಾಚಾರ ಜಿಯೊ ಎನ್ನುವುದು ಮೂಲವಾಗಿ
ಟೆಲಿಕಾಂ ಸಂಸ್ಥೆ ನಿಜ. ಆದರೆ, ಅದರಡಿ ಜಿಯೊ ಪ್ಲಾಟ್‌ ಫಾರ್ಮ್ ಕೂಡಾ ಬರುತ್ತದೆ. ಈ ಜಿಯೊ ಪ್ಲಾಟ್‌ ಫಾರ್ಮಿನಲ್ಲಿ ಜಿಯೊ ಮಾರ್ಟ್‌, ಜಿಯೊ ಸಾವನ್‌ ಮತ್ತು ಜಿಯೊ ಸಿನೆಮಾ- ಇವೆಲ್ಲಾ ಸೇವೆಗಳು ಬರುತ್ತವೆ. ಜಿಯೊ- ಫೇಸ್‌ಬುಕ್‌ ಒಪ್ಪಂದದ ನೇರ ಪರಿಣಾಮ, ಜಿಯೊ ಮಾರ್ಟ್‌ ಮೇಲಾಗುತ್ತದೆ. ಸದ್ಯ, ಜಿಯೊ ಮಾರ್ಟ್‌ ಆಯ್ದ ಸ್ಥಳಗಳಲ್ಲಿ ಸುತ್ತಮುತ್ತ ಮಾತ್ರ ಕಾರ್ಯಾಚರಿಸುತ್ತಿದೆ. ಇದು, ಗ್ರಾಹಕರ ಮನೆ ಬಾಗಿಲಿಗೇ ದಿನಸಿಯನ್ನು ತಲುಪಿಸುವ ಸೇವೆ. ಉಚಿತ ಹೋಂ ಡೆಲಿವರಿ. ಈಗ, ಫೇಸ್‌ಬುಕ್‌ ಜೊತೆಗಿನ ಒಪ್ಪಂದದ ನೆರವಿನಿಂದ, ರೀಟೇಲ್‌ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ರಿಲಯನ್ಸ್ ಮುಂದಾಗಲಿದೆ.

ವಾಟ್ಸ್‌ಆ್ಯಪ್‌ ಪೇಗೆ ಮರುಜೀವ
ರಿಲಯನ್ಸ್ ನಂತೆಯೇ, ಫೇಸ್‌ ಬುಕ್‌ಗೆ ಕೂಡ ಒಂದು ಉದ್ದೇಶವಿದೆ. ಈ ಒಪ್ಪಂದದ ಮೂಲಕ ತನ್ನ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ “ವಾಟ್ಸ್‌ ಆ್ಯಪ್‌ ಪೇ’ ಎಂಬ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಗೆ ಮರುಜೀವ ಕೊಡುವ ಸಾಧ್ಯತೆ ಇದೆ. ಪೇಟಿಎಂ, ಗೂಗಲ್‌ ಪೇ ರೀತಿ, ತಾನೂ ಒಂದು ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವುದು ಫೇಸ್‌ ಬುಕ್‌ನ ಕನಸಾಗಿತ್ತು. ಅದಕ್ಕಾಗಿಯೇ ವಾಟ್ಸ್‌ ಆ್ಯಪ್‌ನ ಸಂಪನ್ಮೂಲಗಳನ್ನು ಬಳಸಿಕೊಂಡು “ವಾಟ್ಸ್‌ ಆ್ಯಪ್‌ ಪೇ’ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಸರ್ಕಾರದ “ಡಾಟಾ ಲೋಕಲೈಸೇಷನ್‌’ ಷರತ್ತಿಗೆ ಫೇಸ್‌ಬುಕ್‌ ಒಪ್ಪದೇ ಇದ್ದುದರಿಂದ ಆ ಯೋಜನೆ ಅನುಷ್ಠಾನಕ್ಕೆ ಬರಲೇ ಇಲ್ಲ. ಡಾಟಾ ಲೋಕಲೈಸೇಷನ್‌ ಎಂದರೆ, ದೇಶದ ನಾಗರಿಕರ ಮಾಹಿತಿಯನ್ನು. ದೇಶದೊಳಗಡೆಯೇ ಸರ್ವರ್‌ ಸ್ಥಾಪಿಸಿ ಸಂಗ್ರಹಿಸಿಡುವುದು, ಮಾಹಿತಿ ಸಂಸ್ಕರಿಸುವುದು. ಈಗ ಜಿಯೊ ಜೊತೆ ಒಪ್ಪಂದವಾಗಿರುವುದರಿಂದ “ಡಾಟಾ ಲೋಕಲೈಸೇಷನ…’ ಷರತ್ತಿಗೆ ಫೇಸ್‌ಬುಕ್‌ ಸಮ್ಮತಿಸಿದೆ.

ಜಂಟಿ ಕಾರ್ಯಾಚರಣೆ
ಫೇಸ್‌ಬುಕ್‌ ಅಧೀನದ ಮೆಸೇಜಿಂಗ್‌ ಸಂಸ್ಥೆ ವಾಟ್ಸ್‌ಆ್ಯಪ್‌ ಹಾಗೂ ಟೆಲಿಕಾಂ ಆಪರೇರ್ಟ ಜಿಯೊ, ದೇಶಾದ್ಯಂತ ಸುಮಾರು 3 ಕೋಟಿ ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು, ಸುತ್ತಮುತ್ತಲ ಜನರು ಅಲ್ಲಿ ಡಿಜಿಟಲ್‌ ವ್ಯವಹಾರ ನಡೆಸುವಂತೆ ಪೋ›ತ್ಸಾಹ ನೀಡಲಿವೆ. ಇಲ್ಲಿ ಡಿಜಿಟಲ್‌ ವ್ಯವಹಾರ, ವಾಟ್ಸ್‌ ಆ್ಯಪ್‌ ಪೇ ಮುಖಾಂತರ ನಡೆಯಲಿದೆ. ನಂತರ ಈ ಡಿಜಿಟಲ್‌ ಪೇಮೆಂಟ್‌ ಸೇವೆಯನ್ನು ಕೃಷಿ, ಶಿಕ್ಷಣ ಮತ್ತಿತರ ಕ್ಷೇತ್ರಗಳಗೂ ವಿಸ್ತರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಈ ಒಂದು ನಡೆಯಿಂದಾಗಿ, ವಾಟ್ಸ್‌ ಆ್ಯಪ್‌ ಪೇಟಿಎಂ,
ಗೂಗಲ್‌ ಪೇ, ಫೋನ್‌ ಪೆ ಡಿಜಿಟಲ್‌ ಪೇಮೆಂಟ್‌ ಸಂಸ್ಥೆಗಳ ಮೇಲೆ ನೇರ ಪರಿಣಾಮ ಉಂಟಾಗಿದೆ. ಇವು ಮೂರು, ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಡಿಜಿಟಲ್‌ ಪೇಮೆಂಟ್‌ ಆ್ಯಪ್‌ ಗಳಲ್ಲಿ ಮುಖ್ಯವಾದವು.ವಾಟ್ಸ್‌ಆ್ಯಪ್‌ ಭಾರತದಲ್ಲಿನ ತನ್ನ ಮುಂದಿನ ಯೋಜನೆಗಳಿಗಾಗಿ ಇಲ್ಲಿ ತಾನು ಹೊಂದಿರುವ 40 ಕೋಟಿಯಷ್ಟು ಬಳಕೆದಾರರ ಸಹಕಾರವನ್ನು ಬಳಸಿಕೊಳ್ಳಲಿದೆ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.