ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

ಪತ್ತನಾಜೆ ಜಾನಪದ ಹಬ್ಬ ಉದ್ಘಾಟನೆ

Team Udayavani, May 20, 2024, 1:14 AM IST

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

ಬಂಟ್ವಾಳ: ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಿದಾಗ ಭಾಷೆಯ ಉಳಿವಿನ ಜತೆಗೆ ಜಾನಪದ ಪರಂಪರೆಯ ಆಚರಣೆಗಳು ಉಳಿಯಲು ಸಾಧ್ಯ. ನಾವು ಮಕ್ಕಳ ಕೈಗೆ ಮೊಬೈಲ್‌ ಕೊಡುವ ಬದಲು ದಿನಪತ್ರಿಕೆ ಕೊಟ್ಟು ಓದುವ ಹವ್ಯಾಸ ಬೆಳೆಸಿದಾಗ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾವಿರಾರು ರೂಪಾಯಿ ವ್ಯಯಿಸಿ ಕೋಚಿಂಗ್‌ ಕೊಡಿಸುವುದು ತಪ್ಪುತ್ತದೆ ಎಂದು ಡಾ| ಜೋಗತಿ ಮಂಜಮ್ಮ ಹೇಳಿದರು.

ಅವರು ರವಿವಾರ ಬಿ.ಸಿ.ರೋಡಿನ ಲಯನ್ಸ್‌ ಸೇವಾ ಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಆಯೋಜಿಸಿದ್ದ ಆಹಾರ ಮೇಳ, ವಸ್ತು ಪ್ರದರ್ಶನ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಮೇಳ ಒಳಗೊಂಡ “ಪತ್ತನಾಜೆ ಜಾನಪದ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಜಾತಿ, ಧರ್ಮವನ್ನು ಮೀರಿ ಬದುಕಿದಾಗಲೇ ನಮ್ಮ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ. ಜಾನಪದ ಲೋಕವನ್ನು ಗಟ್ಟಿಗೊಳಿಸಿದ ಕೀರ್ತಿ ಜಾನಪದ ಪರಿಷತ್ತಿನ ಸ್ಥಾಪಕ ನಾಗೇಗೌಡರಿಗೆ ಸಲ್ಲುತ್ತದೆ ಎಂದರು.

ಸ್ವಾಭಿಮಾನದ ಬದುಕು ಕೊಡಿ
ಜೀವನದಲ್ಲಿ ಕಾಲೇಜು ಮೆಟ್ಟಿಲು ಹತ್ತಲು ಸಾಧ್ಯವಾಗದೇ ಇದ್ದರೂ ನಾನು ಕಲಿತ ಜಾನಪದವು ನೂರಾರು ಕಾಲೇಜುಗಳಲ್ಲಿ ಉಪನ್ಯಾಸ ನೀಡುವಂತೆ ಮಾಡಿದೆ. ಎಂಬಿಬಿಎಸ್‌, ಪಿಎಚ್‌ಡಿ ಮಾಡದೇ ಇದ್ದರೂ ಹೆಸರಿನ ಮುಂದೆ ಡಾಕ್ಟರ್‌ ಎಂದು ಬರೆಯುವಂತೆ ಮಾಡಿದೆ. ಅಂದು ಯಾರಿಗೂ ಬೇಡವಾಗಿದ್ದ ನನ್ನ ಜೀವನದ ಸಾಧನೆ ಇಂದು ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದೆ. ಸಮಾಜದಲ್ಲಿ ನಿಮ್ಮೊಡನೆ ತೃತೀಯ ಲಿಂಗಿಗಳು ಇದ್ದರೆ ಅವರನ್ನು ದೂರ ಮಾಡದೆ ಶಿಕ್ಷಣ ಕೊಡಿಸುವ ಕಾರ್ಯ ಮಾಡಿ, ಆಗ ಅವರು ಕೂಡ ಸ್ವಾಭಿಮಾನದ ಜೀವನ ರೂಪಿಸಿಕೊಳ್ಳುತ್ತಾರೆ. ಇಲ್ಲದೇ ಇದ್ದರೆ ಟೋಲ್‌ಗೇಟ್‌, ಟ್ರಾಫಿಕ್‌ ಸಿಗ್ನಲ್‌, ಇತರ ಕಡೆಗಳಲ್ಲಿ ಭಿಕ್ಷೆ ಬೇಡುವುದೇ ಅವರ ಜೀವನವಾಗುತ್ತದೆ ಎಂದು ಹೇಳಿದರು.

ಭಾವುಕರಾದ ಮಂಜಮ್ಮ
ಹೆಣ್ಣೂ ಅಲ್ಲ-ಗಂಡೂ ಅಲ್ಲ ಎಂಬ ಸ್ಥಿತಿ ನಿರ್ಮಾಣವಾದಾಗ ಮನೆಯವರು, ಕುಟುಂಬದವರು, ಸಮಾಜದವರಿಗೆ ಬೇಡ ವಾಗಿದ್ದೆ. ಅವಮಾನದ ಬದುಕು ಬೇಡವೆಂದು ತೀರ್ಮಾನಿಸಿದ್ದೆ. ಆದರೆ ಸ್ವಾಭಿಮಾನದಿಂದ ಬದುಕುವ ಹುಮ್ಮಸ್ಸು ಇಲ್ಲಿಯ ತನಕ ತಂದು ನಿಲ್ಲಿಸಿದೆ. ಹಿಂದೆ ಬಸ್ಸಿನಲ್ಲಿ ಹೋಗಬೇಕಾದರೆ ಯಾರೂ ಹತ್ತಿರ ಕೂರುತ್ತಿರಲಿಲ್ಲ. ಆದರೆ ಪದ್ಮಶ್ರೀ ಪ್ರಶಸ್ತಿ ಬಂದಾಗ ಅವರೆಲ್ಲರೂ ಪಡೆಯುವ ಟಿಕೆಟ್‌ನಲ್ಲಿ ನನ್ನ ಭಾವಚಿತ್ರ ಇದ್ದು, ಅಭಿನಂದನೆ ಬರೆಯ ಲಾಗಿತ್ತು ಎಂದು ಹೇಳುತ್ತ ಮಂಜಮ್ಮ ಭಾವುಕರಾದರು.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

05856

Sullia: ಮರ್ಕಂಜ; ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.