ಯೋಗಾಸನದಿಂದ ಉತ್ತಮ ಆರೋಗ್ಯ ಕಂಡುಕೊಂಡ ವಾಯುವಿಹಾರಿ ಮಹಿಳೆಯರು

ಸರ್ವ ರೋಗಕ್ಕೂ ಯೋಗ ಮದ್ದು ; ಯೋಗದಿಂದ ರೋಗ ಮುಕ್ತಿ

Team Udayavani, Jun 21, 2022, 10:00 AM IST

1

ರಬಕವಿ-ಬನಹಟ್ಟಿ : ವಾಯುವಿಹಾರ, ವ್ಯಾಯಾಮ ಮತ್ತು ಯೋಗಗಳನ್ನು ಮಹಿಳೆಯರು ಕೂಡಾ ನಿರಂತರವಾಗಿ ಕೈಗೊಂಡು ಉತ್ತಮ ಆರೋಗ್ಯವನ್ನು ಹೊಂದಬಹುದು ಎಂಬುದಕ್ಕೆ ಸ್ಥಳೀಯ ಬನಹಟ್ಟಿಯ ಮಹಿಳೆಯರ ಸಂಜೀವಿನಿ ವಾಯು ವಿಹಾರಿಗಳ ಸಂಘವೇ ಸಾಕ್ಷಿ. ಸತತ ಹದಿನಾರು ವರ್ಷಗಳಿಂದ ಇಲ್ಲಿಯ ಸಂಘದ ಸದಸ್ಯರು ಪ್ರತಿದಿನ ಬೆಳಗ್ಗೆ 6 ರಿಂದ 7 ರವರೆಗೆ ಸ್ಥಳೀಯ ಎಸ್. ಆರ್.ಎ ಮೈದಾನದಲ್ಲಿ ಯೋಗಾಸನ ಮಾಡುತ್ತಾ ಬಂದಿರುವುದು ವಿಶೇಷ.

2001ರಲ್ಲಿ ಎಕ್ಸಂಬಾದ ಯೋಗ ಗುರು ಸಂಗಮದೇವರಿಂದ ಇಲ್ಲಿಯ ಕೆಲವು ಮಹಿಳೆಯರು ಯೋಗಾಸನಗಳನ್ನು ಕಲಿತುಕೊಂಡರು. ಆರಂಭದಲ್ಲಿ ಕೆಲವು ಜನ ಮಾತ್ರ ಯೋಗಾಸನಗಳನ್ನು ಮಾಡುತ್ತಿದ್ದರು. ಆದರೆ 2006 ರಲ್ಲಿ ಪತಂಜಲಿಯಿಂದ ಯೋಗ ತರಬೇತಿ ಪಡೆದುಕೊಂಡು ಬಂದ ಯೋಗ ಶಿಕ್ಷಕ ಅಥಣಿಯ ಪಾಟೀಲ ದಂಪತಿಗಳು ಬನಹಟ್ಟಿಯಲ್ಲಿ ಏಳುದಿನಗಳ ಕಾಲ ಯೋಗಾಸನ ಶಿಭಿರ ಹಮ್ಮಿಕೊಂಡಿದ್ದರು.

ಅಂದಿನ ಶಿಬಿರದಲ್ಲಿ ಬಹಳಷ್ಟು ಜನ ಮಹಿಳೆಯರು ಭಾಗವಹಿಸಿದ್ದರು. ಏಳು ದಿನಗಳ ಕಾಲ ಭಾಗವಹಿಸಿ ಮುಂದೆ ಅದನ್ನೇ ಇನ್ನೂ ಕೆಲ ಮಹಿಳೆಯರು ಮುಂದುವರೆಸಿಕೊಂಡು ಬಂದರು. ಹೀಗಾಗಿ ಯೋಗಾಸನ ಮಾಡುವ ಮಹಿಳೆಯರ ಸಂಖ್ಯೆ ಮತಷ್ಟು ಹೆಚ್ಚಾಯಿತು. ಸದ್ಯ 31 ಕ್ಕೂ ಹೆಚ್ಚು ಮಹಿಳೆಯರು ಐದಾರು ವರ್ಷಗಳಿಂದ ಪ್ರತಿನಿತ್ಯ ಯೋಗಾಸನದಲ್ಲಿ ತೊಡಗಿದ್ದಾರೆ.

ಅಲ್ಪಕಾಲದ ನಡಿಗೆಯ ನಂತರ ಮೈದಾನದಲ್ಲಿ ಶಿಸ್ತು ಬದ್ಧವಾಗಿ ಕುಳಿತುಕೊಂಡು 45 ನಿಮಿಷಗಳ ಕಾಲ ವಿವಿಧ ಯೋಗಾಸನಗಳನ್ನು ಮಾಡುತ್ತಾರೆ. ಇವರು ಯೋಗಾಸನ ಮಾಡುವುದನ್ನು ನೋಡಿ ಕೆಲವು ಮಹಿಳೆಯರು ಅವರ ಪಕ್ಕದಲ್ಲಿ ಕುಳಿತು ಯೋಗಾಸನ ಮಾಡುತ್ತಿರುವುದು ವಿಶೇಷ.

ಪ್ರತಿ ನಿತ್ಯ ಯೋಗಾಸನ ಮಾಡುತ್ತಿರುವುದರಿಂದ ನಮಗೆ ಯಾವುದೇ ರೀತಿಯ ಕಾಯಿಲೆಗಳು ಬರುತ್ತಿಲ್ಲ ನಮ್ಮ ಸದಸ್ಯರಲ್ಲಿ ಇದ್ದ ಕೆಲವು ಕಾಯಿಲೆಗಳು ಯೋಗದಿಂದ ನಿವಾರಣೆಯಾಗಿವೆ ಆದ್ದರಿಂದ ನಾಔಉ ಪ್ರತಿ ನಿತ್ಯ ತಪ್ಪದೇ ಯೋಗದಲ್ಲಿ ಪಾಲ್ಗೊಳ್ಳುತ್ತೇವೆ ಎನ್ನುತ್ತಾರೆ ವಾಯು ವಿಹಾರಿ ಬಳಗದ ಮಹಿಳೆಯರು

ಶಾಂತಾ ಮಂಡಿ, ಭಾರತಿ ಆಸಂಗಿ, ಮಹಾದೇವಿ ಕಾಡದೇವರ, ಮಹಾದೇವಿ ಮೂಳೇಗಾವಿ, ಸಾವಿತ್ರಿ ಕಾಡದೇವರ, ಸುವರ್ಣಾ ಮದಬಾವಿ, ಪುಸ್ಪಾ ಸುಟ್ಟಟ್ಟಿ, ಬಾಳವ್ವ ಮಾಲಾಪೂರ, ರಾಜೇಶ್ವರಿ ಕರಲಟ್ಟಿ, ಕಮಲಾ ಹಾರೂಗೇರಿ, ಮಹಾದೇವಿ ಮೂಳೆಗಾಂವಿ, ಜಯಶ್ರೀ ಹುಲಜತ್ತಿ, ಸವಿತಾ ಕಣಗೊಂಡ, ಲಲಿತಾ ಪತ್ತಾರ, ಮಾಲಾ ಸರವದೆ, ಅಶ್ವಿನಿ ಪಿಟಗಿ, ವೀಣಾ ಬಾಗಲಕೋಟ, ಪಾರ್ವತಿ ಪೂಜಾರಿ, ಕಲಾ ಪತ್ತಾರ, ಗೀತಾ ಪತ್ತಾರ, ಉಮಾ ಬಡೇಮಿ ಸೇರಿದಂತೆ ಅನೇಕರು ಹಲವಾರು ವರ್ಷಗಳಿಂದ ಯೋಗಾಸನದಲ್ಲಿ ತೊಡಗಿದ್ದಾರೆ.

ಯೋಗದ ಮಹತ್ವ ಅರಿತುಕೊಂಡ ಈ ಮಹಿಳೆಯರು ಯೋಗಾಸನಗಳನ್ನು ಮಾಡುತ್ತಿರುವುದು ಬೇರೆ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.

ಹದಿನೈದು ವರ್ಷಗಳಿಂದ ಸತತವಾಗಿ ಯೋಗಾಸನಗಳನ್ನು ಮಾಡುತ್ತಾ ಬಂದಿದ್ದೇವೆ. ನಮಗೆ ಇಲ್ಲಿಯವರೆಗೆ ಆರೋಗ್ಯಕ್ಕೆ ಸಂಬಂದಿಸಿದ ಯಾವುದೇ ಸಮಸ್ಯೆಗಳಿಲ್ಲ. ಯೋಗಾಸನ ಮಾಡುವುದರಿಂದ ದಿನವೆಲ್ಲ ಚೈತನ್ಯದಿಂದ ಇರಬಹುದು. –ಶಾಂತಾ ಮಂಡಿ, ಸಂಜೀವಿನಿ ವಾಯುವಿಹಾರಿ ಬಳಗದ ಸದಸ್ಯೆ           

– ಕಿರಣ ಶ್ರೀಶೈಲ ಆಳಗಿ

 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.