![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 1, 2020, 4:10 PM IST
ಲುಧಿಯಾನಾ: ತನ್ನ ಮಗಳ ಮಗ 8 ವರ್ಷದ ಮೊಮ್ಮಗನನ್ನು ಕಬ್ಬಿಣದ ಸರಪಳಿ ಬಳಸಿ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಿದ ಆರೋಪದ ಮೇರೆಗೆ ಅಜ್ಜಿಯನ್ನು ಬಂಧಿಸಿದ ಘಟನೆ ಲುಧಿಯಾನಾದಲ್ಲಿ ಸಂಭವಿಸಿದೆ.
ಮಗುವಿನ ಹೆತ್ತವರು ವಿಚ್ಛೇದನಗೊಳಪಟ್ಟು, ತಂದೆ ಮಕ್ಕಳನ್ನು ಬಿಟ್ಟು ಹೋಗಿದ್ದರು. ಮಗುವಿನ ತಾಯಿ ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ತಮ್ಮ ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟಿದ್ದರು. ಅನಂತರ ಆ ಮಗು ತನ್ನ ಸಹೋದರಿಯೊಂದಿಗೆ ಲುಧಿಯಾನಾದಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಿದ್ದರು.
8 ವರ್ಷದ ಮೊಮ್ಮಗನಿಗೆ ಅಜ್ಜಿ ಪ್ರತಿದಿನವೂ ಹೊಡೆಯುತ್ತಿದ್ದರು. ಜುಲೈ 28ರ ರಾತ್ರಿಯಂತೂ ಆ ಮಗುವಿನ ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ಕಬ್ಬಿಣದ ರಾಡ್ ಮತ್ತು ಮರದ ಕೋಲಿನಿಂದ ಥಳಿಸಿದ್ದಾಳೆ. ಬಾಲಕನ ಅಳು ಕೇಳಿ ಸ್ಥಳೀಯರು ಬಂದು ಬಿಡಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂದರ್ಭ ಅಜ್ಜಿ ಮೊಮ್ಮಗಳೊಂದಿಗೆ ತಪ್ಪಿಸಿಕೊಂಡಿದ್ದಾಳೆ ಎಂದು ಸ್ಥಳೀಯರಾದ ಬಲ್ವಿಂದರ್ ಸಿಂಗ್ ಕೌರ್ ದೂರಿನಲ್ಲಿ ತಿಳಿಸಿದ್ದರು.
ಅಜ್ಜಿಯ ಥಳಿತದಿಂದ ಮೊಮ್ಮಗನ ಕೈ ಮುರಿದಿದ್ದು, ಕಾಲುಗಳಲ್ಲೂ ರಕ್ತಸ್ರಾವವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೋಲೀಸರ ಕಾರ್ಯಾಚರಣೆಯಿಂದ ಅಜ್ಜಿಯನ್ನು ವಶಕ್ಕೆ ಪಡೆದ ಪೊಲೀಸರು, ಮೊಮ್ಮಗ ತುಂಬ ತುಂಟನಾಗಿದ್ದ, ಮನೆಯಿಂದ ಓಡಿಹೋದರೆ ತುಂಬ ದಿನಗಳವರೆಗೆ ಹಿಂದಿರುಗುತ್ತಿರಲಿಲ್ಲ ಎಂದು ಅಜ್ಜಿ ಥಳಿಸಿದ್ದಕ್ಕೆ ಕಾರಣ ಹೇಳಿದ್ದಾರೆ ಎಂದು ಲುಧಿಯಾನಾದ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಇದೀಗ 55 ವರ್ಷದ ಅಜ್ಜಿಯನ್ನು ಪೊಲೀಸರು ಬಂಧಿಸಿ ಮಕ್ಕಳ ಆರೈಕೆ ಮತ್ತು ರಕ್ಷಣೆ 74ರ ಸೆಕ್ಷನ್ನಂತೆ 323, 324 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.