ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಯಾಕೂಬ್‌ ಅವರ ಸಂಗ್ರಹಾಲಯವನ್ನು ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ನಾವು ನೋಡಬಹುದಾಗಿದೆ

Team Udayavani, May 1, 2024, 5:12 PM IST

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಬಸ್ರೂರು: ಗುಲ್ವಾಡಿಯಲ್ಲೊಂದು ರಸ್ತೆಯ ಪಕ್ಕದಲೇ ಗುಜಿರಿ ಅಂಗಡಿಯೊಂದಿದೆ. ಅಲ್ಲಿ ನೂರಾರು ಹಳೆಯದಾದ ಟಿ.ವಿ. ಸೆಟ್‌ಗಳ ಮಧ್ಯೆ ಒಂದು ಪುಟ್ಟ ಕಪಾಟು ಇದೆ. ಅದಕ್ಕೊಂದು ಮಾಡನ್ನು ಸಹ ಮಾಡಲಾಗಿದೆ. ಆ ಕಪಾಟಿನ ಬಾಗಿಲು ತೆರೆದರೆ ಕನ್ನಡ ಸಾರಸ್ವತ ಲೋಕದ ಸಾಹಿತಿಗಳು ಅನೇಕರು ಬರೆದಿರುವ ಪುಸ್ತಕಗಳ ರಾಶಿಯೇ ಕಾಣುತ್ತದೆ. ಇದರ ಹೆಸರು ಉಚಿತ ಪುಟಾಣಿ ಗ್ರಂಥಾಲಯ. ಇದನ್ನು ಸ್ಥಾಪಿಸಿದವರು ಯಾಕೂಬ್‌ ಖಾದರ್‌ ಗುಲ್ವಾಡಿ.

ಈ ಪುಟ್ಟ ಗ್ರಂಥಾಲಯದಲ್ಲಿ ಹಿರಿಯ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ, ಲಂಕೇಶ್‌, ರವಿ ಬೆಳಗೆರೆ, ಸಂತೋಷ್‌ ಕುಮಾರ್‌
ಗುಲ್ವಾಡಿ, ನಾಗತಿಹಳ್ಳಿ ಚಂದ್ರಶೇಖರ್‌, ಜಯಂತ ಕಾಯ್ಕಿಣಿ ಮೊದಲಾದವರು ಪ್ರಕಟಿಸಿದ ಪುಸ್ತಕಗಳಿವೆ. ಅಮೆರಿಕ, ಇಂಗ್ಲೆಂಡ್‌ ದೇಶಗಳಲ್ಲಿನ ಪಾರ್ಕ್‌ಗಳಲ್ಲಿ ಸಣ್ಣ ಕವಾಟಿನಲ್ಲಿ ಪುಸ್ತಕಗಳನ್ನು ಓದಲು ಇಡುವುದನ್ನು ಇವರು ನೋಡಿದ್ದು, ಅದುವೇ ಈ ಗ್ರಂಥಾಲಯಕ್ಕೆ ಪ್ರೇರಣೆಯಾಗಿದೆ.

ತರಂಗ ವಾರಪತ್ರಿಕೆ ಪ್ರೇರಣೆ
ಯಾಕೂಬ್‌ ಖಾದರ್‌ ಕಲಿತಿದ್ದು ಕೇವಲ ಪ್ರಾಥಮಿಕ ಶಿಕ್ಷಣ ಮಾತ್ರ. ಸಾಹಿತ್ಯದ ಆಸಕ್ತಿ ಬೆಳೆದಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಿ. 34 ವರ್ಷಗಳ ಹಿಂದೆ ಯಾಕೂಬ್‌ ತಲ್ಲೂರಿನ ಗುಜಿರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ಪುಸ್ತಕಗಳ ರಾಶಿಯಲ್ಲಿ ತರಂಗ ವಾರ ಪತ್ರಿಕೆಯೂ ಇತ್ತು. ಇದನ್ನು ಕುತೂಹಲದಿಂದ ತೆಗೆದ ಯಾಕೂಬ್‌ ಓದಲು ಆರಂಭಿಸಿದಾಗ ಅದರಲ್ಲಿನ
ಸಂತೋಷ್‌ ಕುಮಾರ್‌ ಗುಲ್ವಾಡಿಯವರ ಬರಹ ಆಕರ್ಷಿಸಿತ್ತು. ನಮ್ಮ ಗುಲ್ವಾಡಿಯವರೇ ಆದ ಸಂತೋಷ್‌ ಕುಮಾರ್‌ ಅವರಂತೆಯೇ ನಾನೂ ಯಾಕೆ ಸಾಹಿತ್ಯ ಆರಂಭಿಸಬಾರದು ಎಂಬ ಪ್ರಶ್ನೆಯಿಂದ ಯಾಕೂಬ್‌ಗೆ ಸಾಹಿತ್ಯದ ಅಭಿರುಚಿ ಆರಂಭವಾಯಿತು.

ಗುಲ್ವಾಡಿ ಟಾಕೀಸ್‌ ಬ್ಯಾನರ್‌ ಅಡಿ ಈಗಾಗಲೇ ಅನೇಕ ಚಲನಚಿತ್ರ ಮಾಡಿರುವ ಯಾಕೂಬ್‌ ಖಾದರ್‌ ಗುಲ್ವಾಡಿ ಅವರಿಗೆ ರಿಸರ್ವೇಶನ್‌ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ಸಿನೆಮಾ ಕ್ಷೇತ್ರಕ್ಕಾಗಿ ಈಗಾಗಲೇ 17ಕ್ಕೂ ಹೆಚ್ಚು ದೇಶಗಳಿಗೆ 40ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿದ ಅನುಭವ ಯಾಕೂಬ್‌ ಅವರದು.

ಪುಟಾಣಿ ವಾಚನಾಲಯ!
ಹಳೆ ಕಾಲದ ನೇಗಿಲು, ನೊಗ ಮತ್ತಿತರ ಅನೇಕ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿರುವ ಯಾಕೂಬ್‌ ಅವರ ಸಂಗ್ರಹಾಲಯವನ್ನು
ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ನಾವು ನೋಡಬಹುದಾಗಿದೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾ ಬಾಯಿ ಬರೆದ ಗುಲ್ವಾಡಿ ವೆಂಕಟರಾವ್‌, ಸಂತೋಷ್‌ ಕುಮಾರ್‌ ಗುಲ್ವಾಡಿ ಅವರ ಹೆಸರಿನಲ್ಲಿ ಪ್ರತೀ ವರ್ಷ ಯಾಕೂಬ್‌ ಖಾದರ್‌ ಪ್ರಶಸ್ತಿ ನೀಡುತ್ತಿದ್ದಾರೆ ಎನ್ನುವುದು ಗಮನಾರ್ಹ. ಈಗಾಗಲೇ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಿಸರ್ವೇಶನ್‌ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಇವುಗಳಲ್ಲಿ ಪ್ರಮುಖ. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುವ ಇವರು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿರುವ ಇವರು ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಸದಸ್ಯರಾಗಿಕಾರ್ಯನಿರ್ವಹಿಸುತ್ತಿದ್ದಾರೆ.

ಸಾಹಿತ್ಯಾಸಕ್ತಿ ಬೆಳೆಸುವ ಆಶಯ
ಬೇರೆ ಬೇರೆ ದೇಶ ಸುತ್ತಿದ ನನಗೆ ಇದೊಂದು ಕಲ್ಪನೆ ಹುಟ್ಟಿದ್ದು ಈಗ ಸಾಕಾರಗೊಳಿಸಿದ್ದೇನೆ. ನಮ್ಮ ಸುತ್ತಲಿನ ಜನರು ಇನ್ನಷ್ಟು ಸಾಹಿತ್ಯದ ಕಡೆಗೆ ಒಲವು ತೋರಬೇಕಿದೆ. ಅದರಲ್ಲೂ ಮುಖ್ಯವಾಗಿ ಇಂದಿನ ಯುವಜನರು ಸಾಹಿತ್ಯ ಪ್ರೇಮವನ್ನು ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಸುತ್ತ ಹತ್ತಾರು ಉತ್ತಮ ಪುಸ್ತಕಗಳಿದ್ದರೂ ನಾವು ಅದರ ಕಡೆಗೆ ಗಮನಕೊಡುತ್ತಿಲ್ಲ. ದಾರಿಯಲ್ಲೇ ಪುಸ್ತಕ ಸಿಗುವ ಈ ವಿಧಾನದಿಂದಾದರೂ ಜನ ಪುಸ್ತಕ ಓದುವಂತಾಗಲಿ ಎನ್ನುವುದು ನನ್ನ ಆಶಯ. ಮುಂದಿನ ದಿನಗಳಲ್ಲಿ ತಿಂಗಳ ಕೊನೆಯಲ್ಲಿ ಒಂದಷ್ಟು ಸಾಹಿತ್ಯಾಸಕ್ತರು ಇಲ್ಲಿ ಕುಳಿತು ಒಂದೊಂದು ಪುಸ್ತಕದ ಬಗ್ಗೆ ಚರ್ಚಿಸಬೇಕೆಂಬುದು ನನ್ನ ಹಂಬಲವಾಗಿದೆ. ಮರದ ಕೆಳಗೆ ನಾಲ್ಕಾರು ಕುರ್ಚಿಗಳನ್ನಿಡುವ ವ್ಯವಸ್ಥೆ ಮಾಡುತ್ತಿದ್ದೇನೆ.
*ಯಾಕೂಬ್‌ ಖಾದರ್‌ ಗುಲ್ವಾಡಿ

*ದಯಾನಂದ ಬಳ್ಕೂರು

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

Fake Document  ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು

Fake Document ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು

Kundapura ವಂಚನೆ: ಫೈನಾನ್ಸ್‌ ಸಿಬಂದಿ ವಿರುದ್ಧ ದೂರು

Kundapura ವಂಚನೆ: ಫೈನಾನ್ಸ್‌ ಸಿಬಂದಿ ವಿರುದ್ಧ ದೂರು

kuKundapura ಪ್ರತ್ಯೇಕ ಪ್ರಕರಣ: ಮೂವರು ದಿಢೀರ್‌ ಸಾವು

Kundapura ಪ್ರತ್ಯೇಕ ಪ್ರಕರಣ: ಮೂವರು ದಿಢೀರ್‌ ಸಾವು

Kundapura: ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ

Kundapura: ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.