Saligrama ಗುರುನರಸಿಂಹ ದೇಗುಲದ ಅನ್ನದಾನ ನಿಧಿಗೆ 1 ಕೋ.ರೂ. ನೆರವು
Team Udayavani, Aug 11, 2024, 11:40 PM IST
ಕೋಟ: ಬೆಂಗಳೂರಿನ ಹೊಟೇಲ್ ಇಂದ್ರಪ್ರಸ್ಥದ ಮಾಲಕ ಹರ್ತಟ್ಟು ಪ್ರಕಾಶ ಮಯ್ಯ ಮತ್ತು ಮಂಜುಳಾ ದಂಪತಿ ಯಮುನಾ ಮತ್ತು ಚಂದ್ರಶೇಖರ ಮಯ್ಯ ಸ್ಮರಣಾರ್ಥವಾಗಿ ಸಾಲಿಗ್ರಾಮ ಗುರುನರಸಿಂಹ ದೇಗುಲದ ಶಾಶ್ವತ ಭೋಜನ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದರ ನೆನಪಿಗಾಗಿ ಶಾಶ್ವತ ಫಲಕವನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು.
ಶಾಶ್ವತ ಫಲಕ ಅನಾವರಣಗೊಳಿಸಿ ಮಾತನಾಡಿದ ಪ್ರಕಾಶ ಮಯ್ಯ, ಈ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುತ್ತಿರುವ ಅನ್ನ ದಾಸೋಹವು ಶುಚಿ, ರುಚಿ ಮತ್ತು ಸಮಯ ಕ್ಲಪ್ತತೆಗೆ ಹೆಸರುವಾಸಿಯಾಗಿದೆ. ದೈವ ಪ್ರೇರಣೆಯಂತೆ ಭೋಜನ ನಿಧಿಗೆ ದೇಣಿಗೆ ನೀಡಿರುವುದಾಗಿ ತಿಳಿಸಿದರು.
ದಾನಿಗಳನ್ನು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ| ಕೆ.ಎಸ್.ಕಾರಂತರು ಕ್ಷೇತ್ರದ ವತಿಯಿಂದಗೌರವಿಸಿದರು.
ದೇಗುಲದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ,ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯಮಾಜಿ ಕೋಶಾಧಿಕಾರಿ ಕಾರ್ಕಡತಾರಾನಾಥ ಹೊಳ್ಳ ಮೊದಲಾದವರಿದ್ದರು.ದೇಗುಲದ ಸಿಬಂದಿ ಗಣೇಶ್ ಭಟ್ ಕಾರ್ಯಕ್ರಮ ನಿರೂಪಿಸಿ, ಸಿಬಂದಿ ಶ್ರೀಕಾಂತ ಕಲ್ಕೂರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.