![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 25, 2020, 6:14 AM IST
ಮುಂಬಯಿ: ಚೀನ ವುಹಾನ್ ನಗರದಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆ ನಿರ್ಮಿಸಿದಂತೆ, ದಕ್ಷಿಣ ಮುಂಬಯಿನಲ್ಲಿರುವ ಕಸ್ತೂರ ಬಾ ಹಾಸ್ಪಿಟಲ್ ಆವರಣದಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕಿತ್ತು. ಆದರೆ, ಸಚಿವರ ಆಕ್ಷೇಪಣೆಯಿಂದಾಗಿ ಇದು ಅರ್ಧದಲ್ಲೇ ನಿಂತು ಹೋಗಿದೆ.
ಆಸ್ಪತ್ರೆಯ ಆವರಣದಲ್ಲಿ ಮೂರು ಅಂತಸ್ತುಗಳ ಕೋವಿಡ್ 19 ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಇದರಲ್ಲಿ ಮುಂಬಯಿ ಮಹಾನಗರ ಪಾಲಿಕೆ ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಮುಂದಾಗಿತ್ತು. ಆದರೆ, ಸಚಿವ ಟೆಂಡರ್ದಾರರ ಬಗ್ಗೆ ಆಕ್ಷೇಪಣೆ ಎತ್ತಿದ್ದಕ್ಕೆ ಯೋಜನೆ ಅರ್ಧಕ್ಕೆ ನಿಂತು ಹೋಗಿದೆ.ಕಸ್ತೂರ ಬಾ ಆಸ್ಪತ್ರೆ ನಗರ ಹೃದಯ ಭಾಗ ದ್ದು, ಸೋಂಕಿ ತರ 60 ಬೆಡ್ಗಳ ಐಸೋಲೇಷನ್ ಕೇಂದ್ರ ಸ್ಥಾಪನೆ ಮುಂಬಯಿ ಮಹಾನಗರ ಕಾರ್ಪೋರೇಷನ್ ಏಪ್ರಿಲ್ ನಲ್ಲಿ ಒಪ್ಪಿಗೆ ನೀಡಿತ್ತು.
ಏ.16ರಂದು ಟೆಂಡರ್ ಕರೆದು, ಹತ್ತು ದಿನಗಳಲ್ಲಿ ಅತೀ ಕಡಿಮೆ ಬಿಡ್ ಅಂದರೆ, 70 ಕೋಟಿ ಬಿಡ್ ಮಾಡಿದ್ದ ಟೆಂಡರ್ದಾರರನ್ನು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಈ ಸಂಬಂಧಿಸಿದ ಫೈಲ್ ಮುಂಬಯಿ ನಗರ ಸಂರಕ್ಷಣಾ ಸಚಿವರ ಬಳಿ ಹೋದಾಗ, ಟೆಂಡರ್ದಾರರ ಆಯ್ಕೆ ವಿಚಾರದಲ್ಲಿ ಆಗಿರುವ ಅಕ್ರಮದ ಬಗ್ಗೆ ಆಕ್ಷೇಪ ಎತ್ತಿದರು. ಕೋವಿಡ್ 19 ಪರಿಸ್ಥಿತಿ ಎದುರಿಸಲು ನಾವು ಈಗಾಗಲೇ ನಗರದಲ್ಲಿ 5 ಸಾವಿರ ಬೆಡ್ಗಳ ನಿರ್ಮಾಣ ಮಾಡಿ ದ್ದೇವೆ. ಕಸ್ತೂರ್ಬಾ ಆಸ್ಪತ್ರೆ ಯೋಜನೆ ಭವಿಷ್ಯದ ಮುಂಜಾ ಗ್ರತಾ ಕ್ರಮ ಅಷ್ಟೇ.ಟೆಂಡರ್ ದಾರರ ಆಯ್ಕೆಯಲ್ಲಿ ಬಹಳ ಗೋಲ್ ಮಾಲ್ ಆಗಿದೆ ಎಂದು ನಗರ ಸಂರಕ್ಷಣಾ ಸಚಿವ ಅಸ್ಲಾಂ ಶಾಹಿಕ್ ಹೇಳಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.