Mangaluru ನಿರ್ಮಲ ಭಾರತ ಟ್ರಸ್ಟ್ಗೆ ಭೂ ಮಂಜೂರಾತಿಗೆ ಹೈಕೋರ್ಟ್ ತಡೆ
Team Udayavani, Aug 24, 2024, 12:08 AM IST
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನೊಳಗೆ ನಿರ್ಮಲ ಭಾರತ ಚಾರಿಟೆಬಲ್ ಟ್ರಸ್ಟಿಗೆ 2022ರಲ್ಲಿ ಮಂಜೂರಾಗಿದ್ದ 2 ಎಕ್ರೆ ಜಮೀನಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
1982ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 8.40 ಎಕ್ರೆ ಜಮೀನು ಮಂಜೂರಾಗಿದ್ದು, ಅದೇ ಜಾಗದಲ್ಲಿ ಈಗ ನಿರ್ಮಲ ಭಾರತ ಚಾರಿಟೆಬಲ್ ಟ್ರಸ್ಟ್ಗೆ 2 ಎಕ್ರೆ ಜಮೀನು ಮಂಜೂರು ಮಾಡಿಸಿರುವುದು ಕಾನೂನುಬಾಹಿರ ಎಂದು ವಿಶ್ವವಿದ್ಯಾನಿಲಯ ಹೈಕೋರ್ಟ್ ಮೆಟ್ಟಲೇರಿತ್ತು.
ವಾದವನ್ನು ಆಲಿಸಿದ ಉಚ್ಚ ನ್ಯಾಯಾಲಯದ ನ್ಯಾ| ಜಸ್ಟಿಸ್ ಸಚಿನ್ ಮಗದಮ್ ಅವರು ಟ್ರಸ್ಟಿಗೆ ಮಾಡಿರುವ ಮಂಜೂರಾತಿಗೆ ತಡೆಯಾಜ್ಞೆ ನೀಡಿದ್ದಾರೆ. ವಿವಿಯ ಪರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯವಾದಿ ಪಿ.ಕರುಣಾಕರ ಪಾಂಬೇಲು ಹಾಗೂ ಪ್ರದೀಪ್ ಬೊಳ್ಳೂರು, ಶ್ರೀಕಾಂತ್ ಆಚಳ್ಳಿ ಗುತ್ತಿಗಾರು, ಆದರ್ಶ್ ಗೌಡ ಕಟ್ಟ ವಾದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.