ವಕೀಲ ವೃತ್ತಿಯಿಂದ ಸಿಎಂ ಗಾದಿವರೆಗೆ ಹಿಮಾಂತ! ಅಸ್ಸಾಂ ಸಿಎಂ ಆಗಿ ಆಯ್ಕೆಯಾದ ಹಿಮಾಂತ ಹಿನ್ನೋಟ


Team Udayavani, May 10, 2021, 7:00 AM IST

ವಕೀಲ ವೃತ್ತಿಯಿಂದ ಸಿಎಂ ಗಾದಿವರೆಗೆ ಹಿಮಾಂತ! ಅಸ್ಸಾಂ ಸಿಎಂ ಆಗಿ ಆಯ್ಕೆಯಾದ ಹಿಮಾಂತ ಹಿನ್ನೋಟ

ಗುವಾಹಾಟಿ: ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಹಿಮಾಂತ ಬಿಸ್ವಾ ಶರ್ಮಾ, ಈಶಾನ್ಯ ವಲಯದ ರಾಜಕೀಯ ರಂಗದ ಅತ್ಯಂತ ಪ್ರಭಾವಿ, ಚತುರ ರಾಜಕಾರಣಿಗಳಲ್ಲೊಬ್ಬರು. 2016ರಲ್ಲಿ ಹಾಗೂ 2021ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೆಂದರೆ ಅದರ ಹಿಂದೆ ಹಿಮಾಂತ ಅವರ ಶ್ರಮ ಸಾಕಷ್ಟಿದೆ.

ಗುವಾಹಾಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದ ಹಿಮಾಂತ, 2001ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡಿದ್ದರು. ಅಲ್ಲಿಂದ 2015ರ ವರೆಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡವರು. 2001ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಜಲುಕ್‌ಬಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಎಜಿಪಿ ಅಭ್ಯರ್ಥಿ ಭಿಂಗು ಕುಮಾರ್‌ ಪುಕಾನ್‌ ವಿರುದ್ಧ ಗೆದ್ದಿದ್ದರು. 2006, 2011ರ ಲ್ಲಿಯೂ ಜಯಸಾಧಿಸಿದ್ದರು.2002ರಲ್ಲಿ ಆಗಿನ ಅಸ್ಸಾಂ ಸಿಎಂ ತರುಣ್‌ ಗೊಗೋಯ್‌ ನೇತೃತ್ವದ ಸರಕಾರದಲ್ಲಿ ಸಚಿವರಾಗಿ ಸೇರ್ಪಡೆಗೊಂಡಿದ್ದರು. 2011ರ ವರೆಗೂ ಅವರು ನಾನಾ ಇಲಾಖೆಗಳನ್ನು ನಿರ್ವಹಿಸಿದ್ದರು.

ಹಿಮಾಂತ-ಬಿಜೆಪಿ ಸಮಾಗಮ: 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ “ಕಾಂಗ್ರೆಸ್‌ ಮುಕ್ತ ಭಾರತ’ ಪರಿಕಲ್ಪನೆಯನ್ನು ಈಡೇರಿಸಲು ದೇಶದ ಎಲ್ಲೆಡೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕುತ್ತಿತ್ತು. ಆಗ ಅದರ ಕಣ್ಣಿಗೆ ಬಿದ್ದರು ಹಿಮಾಂತ. ಅದು ಮುಂದೆ, ಹಿಮಾಂತ ಅವರಿಗೆ ಬಿಜೆಪಿ ಜತೆಗೆ ಸಖ್ಯ ಬೆಳೆಯಲು ಕಾರಣವಾಯಿತು. 2015ರ ಆ. 23ರಂದು ಹೊಸದಿಲ್ಲಿಯಲ್ಲಿ ಹಿಮಾಂತ ಬಿಜೆಪಿ ಸೇರಿದರು.

ಅದರ ಮರುವರ್ಷವೇ ನಡೆದ ಅಸ್ಸಾಂ ಚುನಾವಣೆಯ ವೇಳೆ ಪಕ್ಷದ ಪರವಾಗಿ ಅತ್ಯುತ್ತಮ ರಣತಂತ್ರಗಳನ್ನು ಹೆಣೆದರು. ಹೀಗಾಗಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ ಮುಖ್ಯಮಂತ್ರಿಯಾಗಿದ್ದು ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಸರ್ಬಾನಂದ ಸೊನೊವಾಲ್‌. ಬಿಜೆಪಿಗೆ ನಿಷ್ಠರಾಗಿ ಕೆಲವು ವಿಷಮ ಘಳಿಗೆಗಳಲ್ಲಿ ಪಕ್ಷವನ್ನು ವಿವಾದಗಳಿಂದ ಪಾರು ಮಾಡಿದರು. ಸಿಎಎ ವಿವಾದದಿಂದ ಪಕ್ಷವನ್ನು ಸುಲಭವಾಗಿ ಪಾರು ಮಾಡಿದರು.

ರಾಜಕೀಯ ಹೆಜ್ಜೆಗಳು: 1996ರಿಂದ 2001 - ಗುವಾಹಾಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ.
– 2001 – ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆ
– 2002-2004 – ಕೃಷಿ, ಯೋಜನೆ-ಅಭಿವೃದ್ಧಿ, ಹಣ ಕಾಸು, ಆರೋಗ್ಯ, ಶಿಕ್ಷಣ ಇತರ ಇಲಾಖೆಗಳ ಸಹಾಯಕ/ಕ್ಯಾಬಿನೆಟ್‌ ಸಚಿವರಾಗಿ ಸೇವೆ.
– ಆ. 23, 2015 – ಬಿಜೆಪಿ ಸೇರ್ಪಡೆ.
– ಮೇ 24, 2016 – ಸರ್ಬಾನಂದ ಸೊನೊವಾಲ್‌ ಸಂಪುಟಕ್ಕೆ ಸೇರ್ಪಡೆ; ಹಣಕಾಸು, ಆರೋಗ್ಯ, ಶಿಕ್ಷಣ, ಯೋಜನೆ-ಅಭಿವೃದ್ಧಿ, ಪ್ರವಾಸ, ಪಿಂಚಣಿ ಮತ್ತು ಸಾರ್ವ ಜನಿಕ ಕುಂದುಕೊರತೆ ಇಲಾಖೆಗಳ ನಿರ್ವಹಣೆ.

ರಾಹುಲ್‌ಗೆ ಟಾಂಗ್‌
ರಾಹುಲ್‌ ಗಾಂಧಿ ಕಾಂಗ್ರೆಸ್‌ ಉಪಾಧ್ಯಕ್ಷರಾಗಿದ್ದಾಗ 2016ರಲ್ಲಿ ಅಸ್ಸಾಂನ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಹಿಮಾಂತ ಹೊಸದಿಲ್ಲಿಯಲ್ಲಿರುವ ರಾಹುಲ್‌ ನಿವಾಸಕ್ಕೆ ತೆರಳಿದ್ದರು. ಆಗ “ಪಿಡಿ’ ಎಂಬ ನಾಯಿಗೆ ಬಿಸ್ಕೆಟ್‌ ತಿನ್ನಿಸುವುದರಲ್ಲೇ ಮಗ್ನರಾಗಿದ್ದ ರಾಹುಲ್‌,ಅವರ ಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ! 2017ರ ಅ. 29ರಂದು “ವೀಡಿಯೋàವನ್ನು ಟ್ವೀಟ್‌ ಮಾಡಿದ್ದ ರಾಹುಲ್‌, “ನನ್ನ ಪರವಾಗಿ ಯಾರು ಟ್ವೀಟ್‌ ಮಾಡುತ್ತಾ ರೆಂದು ಕೆಲವರು ಪ್ರಶ್ನಿಸಿದ್ದರು. ಈ ಪಿಡಿಯೇ ಟ್ವೀಟ್‌ ಮಾಡುತ್ತಿದೆ’ ಎಂದು ಬರೆದುಕೊಂಡಿದ್ದರು. ಅದಕ್ಕೆ ಉತ್ತರಿಸಿದ್ದ ಹಿಮಾಂತ “ರಾಹುಲ್‌, ಪಿಡಿಯನ್ನು ನನ ಗಿಂತ ಹೆಚ್ಚು ಬಲ್ಲವರು ಬೇರೊಬ್ಬರಿಲ್ಲ. ನಿಮ್ಮ ಭೇಟಿಗೆ ಬಂದಾಗ ನೀವು ಪಿಡಿಗೆ ಬಿಸ್ಕೆಟ್‌ ಹಾಕುವುದರಲ್ಲಿ ಬ್ಯುಸಿಯಾಗಿದ್ದಿರಿ ಎಂದು ಬರೆದುಕೊಂಡಿದ್ದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.