Bengaluru: ನಾನು ಷರತ್ತು ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಬಂದವನಲ್ಲ: ಸವದಿ
Team Udayavani, Aug 7, 2024, 12:11 AM IST
ಬೆಂಗಳೂರು: ಸಚಿವ ಸ್ಥಾನವು ಸೇರಿದಂತೆ ನಾನು ಯಾವುದೇ ಬೇಡಿಕೆ ಅಥವಾ ಷರತ್ತುಗಳನ್ನು ಹಾಕಿ ಕಾಂಗ್ರೆಸ್ಗೆ ಬಂದವನಲ್ಲ. ಅದೆಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಸಂಪುಟ ಪುನಾರಚನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಯಾವುದೇ ಬೇಡಿಕೆ ಅಥವಾ ಷರತ್ತುಗಳನ್ನು ಹಾಕುವವನಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ. ನಾನೇನು ಕರಾರು ಮಾಡಿ ಬಂದಿ ಲ್ಲವಲ್ಲ? ಬಿಜೆಪಿಯವರು ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರಗೊಂಡು ಕಾಂಗ್ರೆಸ್ಗೆ ಬಂದಿದ್ದೇನೆ.
ಕ್ಷೇತ್ರದ ಜನ ಯಾರ್ಯಾರಿಗೆ ಏನೇನು ಸಂದೇಶ ಕಳುಹಿಸಬೇಕೋ ಅದನ್ನು ಕಳುಹಿಸಿದ್ದಾರೆ. ಹಾಗಾಗಿ ನಾನೇನೂ ಈ ವಿಚಾರದಲ್ಲಿ ಹೇಳಬೇಕಿಲ್ಲ’ ಎಂದು ಸೂಚ್ಯವಾಗಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.