ಆಗಸ್ಟ್‌ಗೆ ಐಐಟಿ ಕ್ಯಾಂಪಸ್‌ ಸಜ್ಜು; ಮುಂಬೈ ಐಐಟಿಯಿಂದ ಮುಕ್ತಿ

ಐಐಟಿ ಪದವಿ ಪ್ರಮಾಣ ಪತ್ರ ಸಿಕ್ಕದೇ ವಿದ್ಯಾರ್ಥಿಗಳು ಅಲೆದಾಡಬೇಕಾಯಿತು.

Team Udayavani, Feb 19, 2022, 4:37 PM IST

ಆಗಸ್ಟ್‌ಗೆ ಐಐಟಿ ಕ್ಯಾಂಪಸ್‌ ಸಜ್ಜು; ಮುಂಬೈ ಐಐಟಿಯಿಂದ ಮುಕ್ತಿ

ಧಾರವಾಡ: ಗಗನದೆತ್ತರಕ್ಕೆ ತಲೆ ಎತ್ತಿ ನಿಂತಿರುವ ಕಾಂಕ್ರೀಟ್‌ ಕಟ್ಟಡಗಳು, ಎಷ್ಟೇ ಕಟ್ಟಡಗಳು ಬಂದರೂ ಮೊದಲಿದ್ದ ಒಂದೂ ಗಿಡ ನಾಶವಾಗದಂತೆ ಉಳಿಸಿಕೊಂಡ ಕೌಶಲ್ಯ. ನೂರಾರು ಎಕರೆಗೂ ಸುತ್ತಲೂ ದೈತ್ಯ ಕಾಂಪೌಂಡ್‌. ಒಟ್ಟಿನಲ್ಲಿ 2022ರ ಆಗಸ್ಟ್‌ ತಿಂಗಳಿಗೆ ಸಜ್ಜಾಗಲಿದೆ ವಿದ್ಯಾಕಾಶಿಯ ಮೇರು ಮುಕುಟ ಧಾರವಾಡ ಐಐಟಿ ಕ್ಯಾಂಪಸ್‌.

ಹೌದು. ಸತತ ಎರಡು ದಶಕಗಳ ಹೋರಾಟದ ಫಲವಾಗಿ ಧಾರವಾಡ ಹೊರ ವಲಯದ ಚಿಕ್ಕಮಲ್ಲಿಗವಾಡ ಸಮೀಪ ಸ್ಥಾಪನೆಯಾಗಿ ನಿರ್ಮಾಣಗೊಳ್ಳುತ್ತಿರುವ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಭವ್ಯ ಕ್ಯಾಂಪಸ್‌ ಇನ್ನೇನು ಉದ್ಘಾಟನೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ 2022ರ ಆಗಸ್ಟ್‌ ತಿಂಗಳಿನಲ್ಲಿ ಮೊದಲ ಹಂತದ ಕಾಮಗಾರಿ ಮುಗಿಯುವ ನಿರೀಕ್ಷೆಯಿದ್ದು, ಧಾರವಾಡ ಐಐಟಿ 2022ನೇ ಸಾಲಿನ ವಿದ್ಯಾರ್ಥಿಗಳು ವಾಲಿ¾ ಬದಲು ನೂತನ ಐಐಟಿ ಕಟ್ಟಡದಲ್ಲಿಯೇ ತಮ್ಮ ಮೊದಲ ವರ್ಷದ ಓದು ಆರಂಭಿಸಲಿದ್ದಾರೆ.

2016ರಿಂದಲೇ ಇಲ್ಲಿನ ಹೈಕೋರ್ಟ್‌ ಸಮೀಪದ ವಾಲ್ಮಿ ಕಟ್ಟಡದಲ್ಲಿ ಆರಂಭಗೊಂಡಿರುವ ಐಐಟಿಗೆ ಪ್ರತ್ಯೇಕ ಕ್ಯಾಂಪಸ್‌ ಚಿಕ್ಕಮಲ್ಲಿಗವಾಡ ಸಮೀಪ ನಿರ್ಮಾಣಗೊಳ್ಳುತ್ತಿದೆ. ದೇಶದಲ್ಲಿಯೇ ಮೊಟ್ಟ ಮೊದಲ ಹಸಿರು ಐಐಟಿ ಎಂಬ ಹೆಗ್ಗಳಿಕೆಗೆ ಧಾರವಾಡ ಐಐಟಿ ಪಾತ್ರವಾಗಿದ್ದು, ಈಗಾಗಲೇ ಅಖಂಡವಾಗಿ ಶೇ.45 ಕಾಮಗಾರಿ ಹಾಗೂ ಮೊದಲ ಹಂತದಲ್ಲಿನ ಶೇ.80 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

1440 ಕೋಟಿ ರೂ. ವೆಚ್ಚದಲ್ಲಿ ಕಳೆದ ಮೂರು ವರ್ಷಗಳಿಂದ ಐಐಟಿ ಕ್ಯಾಂಪಸ್‌ ನಿರ್ಮಾಣವಾಗುತ್ತಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧ ನಿರ್ಮಿಸಿರುವ ಮಹಾರಾಷ್ಟ್ರ ಮೂಲದ ಶೀರ್ಕೆ ನಿರ್ಮಾಣ ಸಂಸ್ಥೆ ಐಐಟಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. 1ನೇ ಹಂತಲ್ಲಿ ದೈತ್ಯ ಅಕಾಡೆಮಿಕ್‌ ಕಟ್ಟಡ, ಊಟದ ಮೆಸ್‌ ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯಗಳ ಕಾಮಗಾರಿಯನ್ನೊಳಗೊಂಡಿದೆ. ಒಟ್ಟು ಮೂರು ವಿಭಾಗದಲ್ಲಿ ಫೇಸ್‌-1ಎ, ಫೇಸ್‌-1ಬಿ ಹಾಗೂ ಫೇಸ್‌-2 ಮೂರು ಹಂತಗಳಲ್ಲಿ ಕ್ಯಾಂಪಸ್‌ ನಿರ್ಮಾಣಗೊಳ್ಳಲಿದೆ.

ಮತ್ತೆ ಐದು ಕೋರ್ಸ್‌ ಆರಂಭ
ಧಾರವಾಡ ಐಐಟಿಯಲ್ಲಿ ಮೊದಲ ನಾಲ್ಕು ವರ್ಷಗಳು ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಿಕಲ್ಸ್‌ ಮತ್ತು ಮೆಕ್ಯಾನಿಕಲ್‌ ಕೇವಲ ಮೂರು ಕೋರ್ಸ್‌ಗಳನ್ನು ಆರಂಭ ಮಾಡಲಾಗಿತ್ತು. ಪ್ರತಿ ಕೋರ್ಸ್‌ಗೂ 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದೀಗ ಮತ್ತೆ ಐದು ನೂತನ ಕೋರ್ಸ್‌ಗಳನ್ನು ಐಐಟಿ ಆರಂಭಿಸಿದೆ. ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಏರೋಸ್ಪೇಸ್‌ (ಬಾಹ್ಯಾಕಾಶ) ಮತ್ತು ಸಾಮಾನ್ಯ ಇಂಗ್ಲಿಷ್‌ ವಿಷಯಾಧಾರಿತ ಕೋರ್ಸ್‌ ಆರಂಭಗೊಂಡಿವೆ. ಪ್ರಸ್ತುತ ಧಾರವಾಡ ಐಐಟಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 600ಕ್ಕೆ ತಲುಪಿದೆ.

ಕೊರೊನಾ ಮರ್ಮಾಘಾತ
ಧಾರವಾಡ ಐಐಟಿ ನಿರ್ಮಾಣ ಕಾರ್ಯ ವಿಳಂಬಕ್ಕೆ ಕೊರೊನಾ ಕೊಡುಗೆ ದೊಡ್ಡದು. ಅತ್ಯಂತ ಹುರುಪು ಮತ್ತು ವೇಗವಾಗಿ ಧಾರವಾಡ ಐಐಟಿ ತನ್ನ ಕಾರ್ಯ ವಿಸ್ತರಣೆ ಮಾಡುತ್ತಿತ್ತು. ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಗಿದು ತೀವ್ರಗತಿ ಪಡೆಯುವ ಸಂದರ್ಭಕ್ಕೆ ಕೊರೊನಾ ಒಕ್ಕರಿಸಿದ್ದರಿಂದ ಐಐಟಿ ನಿರ್ಮಾಣ ಮತ್ತು ಇತರೆ ಕಾರ್ಯ ಚಟುವಟಿಕೆಗಳೇ ಸ್ಥಗಿತಗೊಂಡವು. ಕಾರ್ಮಿಕರ ಕೊರತೆ, ಆಡಳಿತಾತ್ಮಕ ವ್ಯತ್ಯಾಸಗಳಿಂದ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೂ
ಕೊರೊನಾ ಮರ್ಮಾಘಾತ ನೀಡಿತು. ಕೋರ್ಸ್‌ ಮುಗಿಸಿದರೂ ಅವರಿಗೆ ಐಐಟಿ ಪದವಿ ಪ್ರಮಾಣ ಪತ್ರ ಸಿಕ್ಕದೇ ವಿದ್ಯಾರ್ಥಿಗಳು ಅಲೆದಾಡಬೇಕಾಯಿತು. ಈಗಲೂ ಕೊರೊನಾ ಸಲುವಾಗಿ ಒಂದಿಷ್ಟು ಆನ್‌ ಲೈನ್‌ ಕ್ಲಾಸ್‌ಗಳು ಚಾಲ್ತಿಯಲ್ಲಿವೆ. ಈವರೆಗಿನ ವಿಳಂಬವನ್ನು ನೀಗಿಸಿಕೊಂಡು ಐಐಟಿ ಮುನ್ನಡೆದಿದೆ.

ಮುಂಬೈ ಐಐಟಿಯಿಂದ ಮುಕ್ತಿ
ಮುಂಬೈ ಐಐಟಿಯ ಮಾರ್ಗದರ್ಶನದಲ್ಲಿ ಧಾರವಾಡ ಐಐಟಿ ಕಾರ್ಯ ಆರಂಭಿಸಿತ್ತು. ಮೊದಲ ಐದು ವರ್ಷಗಳ ಕಾಲ ಮುಂಬೈ ಐಐಟಿ ಸಹಾಯ ಪಡೆಯಲಾಗಿತ್ತು. ಆದರೆ ಇದೀಗ ಈ ಅವಧಿ ಮುಕ್ತಾಯಗೊಂಡಿದ್ದು ಧಾರವಾಡ ಐಐಟಿ ಸ್ವತಂತ್ರಗೊಂಡಿದ್ದು, ನಿರ್ದೇಶಕರ ಜತೆಗೆ ರಿಜಿಸ್ಟ್ರಾರ್‌, ಸಹಾಯಕ ರಿಜಿಸ್ಟ್ರಾರ್‌ಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಆಡಳಿತಾತ್ಮಕ ಕಾರ್ಯ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನೇಮಕಗೊಂಡಿದ್ದಾರೆ. ಸದ್ಯಕ್ಕೆ ಧಾರವಾಡ ಐಐಟಿಯಲ್ಲಿ 100ಕ್ಕೂ ಹೆಚ್ಚು ಜನ ಐಐಟಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಮುಂಬೈ ಐಐಟಿಯಿಂದ ಧಾರವಾಡ ಐಐಟಿ ಸ್ವತಂತ್ರ ನಿರ್ವಹಣೆಗೆ ಸಜ್ಜಾಗಿದೆ.

ಅಂದುಕೊಂಡಂತೆ ನಡೆದರೆ ಇನ್ನು ನಾಲ್ಕು ತಿಂಗಳಲ್ಲಿ ಧಾರವಾಡ ಐಐಟಿಯ 1ನೇ ಹಂತದ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಪ್ರಧಾನಿ ಮೋದಿ ಐಐಟಿ ಉದ್ಘಾಟಿಸಲಿದ್ದಾರೆ. ಅಖಂಡ ಕ್ಯಾಂಪಸ್‌ನ ಪರಿಪೂರ್ಣ ನಿರ್ಮಾಣಕ್ಕೆ ಇನ್ನೂ ಮೂರು ವರ್ಷ ಬೇಕಾಗುತ್ತದೆ.
ಧಾರವಾಡ ಐಐಟಿ ಹಿರಿಯ ಅಧಿಕಾರಿ

ಡಾ|ಬಸವರಾಜ ಹೊಂಗಲ್

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.